ಬ್ರೇಕಿಂಗ್ ನ್ಯೂಸ್
11-02-21 03:18 pm Mangalore Correspondent ಕ್ರೈಂ
ಮಂಗಳೂರು, ಫೆ.11; ತುಳು ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಕನ್ನಡದ ಚಿತ್ರರಂಗದ ಖ್ಯಾತ ನಟಿ ಪದ್ಮಜಾ ರಾವ್ ವಿರುದ್ಧ ಮಂಗಳೂರಿನ ಕೋರ್ಟಿನಲ್ಲಿ ವಂಚನೆ ಕೇಸು ದಾಖಲಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಪದ್ಮಜಾ ರಾವ್, ಚಾಲಿಪೋಲಿಲು ಚಿತ್ರದಲ್ಲಿ ನಟಿಸುತ್ತಿದ್ದಾಗ ಅದರ ನಿರ್ದೇಶನ ಮಾಡುತ್ತಿದ್ದ ವೀರೇಂದ್ರ ಶೆಟ್ಟಿ ಬಳಿಯಿಂದ ಹಣ ಪಡೆದಿದ್ದರು. ವೈಯಕ್ತಿಕವಾಗಿ ಒಂದು ಲಕ್ಷ , ಎರಡು ಲಕ್ಷವೆಂದು ಹಣ ಸಾಲ ಪಡೆದಿದ್ದು, ಹಿಂತಿರುಗಿ ಕೊಟ್ಟಿರಲಿಲ್ಲ. 2018ರಿಂದ 19ರ ನಡುವೆ ಸುಮಾರು 41 ಲಕ್ಷ ರೂಪಾಯಿ ಹಣವನ್ನು ಸಾಲ ಪಡೆದಿದ್ದು, ಹಿಂತಿರುಗಿಸದೆ ವಂಚಿಸಿದ್ದಾರೆಂದು ವೀರೇಂದ್ರ ಶೆಟ್ಟಿ ಮಂಗಳೂರಿನ ಕೋರ್ಟಿನಲ್ಲಿ ದೂರು ದಾಖಲಿಸಿದ್ದಾರೆ.
ಒಂದು ಲಕ್ಷ ರೂ. ಮಾತ್ರ ನಗದು ರೂಪದಲ್ಲಿ ಕೊಟ್ಟಿದ್ದು, ಉಳಿದೆಲ್ಲವನ್ನೂ ಚೆಕ್ ರೂಪದಲ್ಲಿ ನೀಡಿದ್ದೆ. ಅಲ್ಲದೆ, ತನ್ನ ಪ್ರೊಡಕ್ಷನ್ ಹೌಸ್ ವೀರು ಟಾಕೀಸ್ ಹೆಸರಲ್ಲೇ ಹಣವನ್ನು ಸಾಲ ನೀಡಿದ್ದೆ. ಹಾಗಾಗಿ ಹಣ ನೀಡಿದ್ದಕ್ಕೆ ದಾಖಲೆ ಇದೆ. ಬದಲಿಗೆ, ಪದ್ಮಜಾ ರಾವ್ ಖಾಲಿ ಚೆಕ್ ನೀಡಿದ್ದರು. ಕಳೆದ 2020ರ ಸೆಪ್ಟಂಬರ್ ತಿಂಗಳಲ್ಲಿ ಚೆಕ್ ಬೌನ್ಸ್ ಕೇಸು ಮಾಡಿದ್ದು ನೋಟೀಸ್ ಹೋಗಿತ್ತು. ನೋಟಿಸಿಗೆ ಉತ್ತರ ನೀಡದ ಕಾರಣ ಮತ್ತೆ ನವೆಂಬರ್ ನಲ್ಲಿ ವಿಚಾರಣೆಗೆ ಬಂದಿತ್ತು. ಆಗಲೂ ನಟಿ ಕ್ಯಾರ್ ಮಾಡದೆ, ನೋಟೀಸಿಗೆ ಉತ್ತರವನ್ನೂ ನೀಡಿರಲಿಲ್ಲ. ಇದೀಗ ಮಂಗಳೂರಿನ ಜೆಎಂಎಫ್ 5ನೇ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದು, ಬೆಂಗಳೂರಿನ ಕಲಘಟ್ಟ ಪೊಲೀಸರಿಗೆ ಬಂಧಿಸಿ ಕರೆತರುವಂತೆ ಸೂಚನೆ ನೀಡಿದ್ದಾಗಿ ವೀರೇಂದ್ರ ಶೆಟ್ಟಿ ಹೆಡ್ ಲೈನ್ ಕರ್ನಾಟಕಕ್ಕೆ ಮಾಹಿತಿ ನೀಡಿದ್ದಾರೆ.
ಪದ್ಮಜಾ ರಾವ್, ಕನ್ನಡದ ಹಲವಾರು ಚಿತ್ರಗಳಲ್ಲಿ ಪೋಷಕ ನಟಿಯಾಗಿದ್ದು ಮುಂಗಾರು ಮಳೆ ಚಿತ್ರದ ಬಳಿಕ ಖ್ಯಾತಿ ಗಳಿಸಿದ್ದರು. ಇತ್ತೀಚೆಗೆ ತುಳು ಚಿತ್ರಗಳಲ್ಲಿಯೂ ಪದ್ಮಜಾ ಕಾಣಿಸಿಕೊಂಡಿದ್ದರು. ಕೋರ್ಟಿನಲ್ಲಿ ಮುಂದಿನ ವಿಚಾರಣೆ ಮಾರ್ಚ್ 9ಕ್ಕೆ ಇದ್ದು, ಪದ್ಮಜಾರನ್ನು ಪೊಲೀಸರು ಬಂಧಿಸಿ ಹಾಜರು ಮಾಡಬೇಕಿದೆ.
The JMF Mangalore court has issued a Non-Bailable warrant against Kannada Actress Padmaja Rao over cheque Bounce Case. She had borrowed loan from Tulu Director Veerendra Shetty Kavoor.
21-05-24 02:43 pm
Bangalore Correspondent
H D Kumaraswamy, congress phone tapping, Praj...
20-05-24 07:03 pm
Zip line accident at Jungle Trailz Bangalore:...
20-05-24 05:53 pm
Bangalore rave party raid, drugs, actors: ಇಲೆ...
20-05-24 01:44 pm
Charmadi Ghat, Blocked: ಚಾರ್ಮಾಡಿ ಘಾಟಿಯಲ್ಲಿ ಕೆ...
20-05-24 12:38 pm
21-05-24 01:33 pm
HK News Desk
Pune porsche accident; ಕುಡಿದ ಮತ್ತಿನಲ್ಲಿ ಪೋರ್ಶ...
20-05-24 08:15 pm
Ebrahim Raisi dead in helicopter crash: ಹೆಲಿಕ...
20-05-24 11:35 am
ಬ್ಯಾಂಕ್ ಖಾತೆಗೆ ಬರೋಬ್ಬರಿ 9900 ಕೋಟಿ ಹಣ ಜಮೆ ; ಮ...
19-05-24 04:30 pm
Priyanka Gandhi, Rahul Gandhi: ರಾಹುಲ್ ಗೆ ದೇಶದ...
18-05-24 10:18 pm
21-05-24 11:56 am
Mangalore Correspondent
Harish Poonaja, Controversy, Mangalore: ಬಿಜೆಪ...
20-05-24 10:43 pm
Mangalore Rain News: ಮಂಗಳೂರಿನಲ್ಲಿ ದಿಢೀರ್ ಬಿರು...
20-05-24 10:34 pm
Mangalore crime, CCB Police, Talapady: ಗಡಿಭಾಗ...
20-05-24 10:17 pm
Mangalore News, Rain, Harekala girl death: ಹ...
20-05-24 09:56 pm
21-05-24 01:28 pm
HK News Desk
Vijayapura crime, truck attack: ವಿಜಯಪುರ ; ಕ್ಯ...
18-05-24 04:05 pm
ಹೊಸದುರ್ಗ ; ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ನಸುಕಿನ...
17-05-24 09:52 pm
Kalaburagi police bus, crime: ಕುಡಿದ ನಶೆಯಲ್ಲಿ...
17-05-24 07:23 pm
7-8 ಬಾರಿ ಎದೆ, ಹೊಟ್ಟೆಗೆ ತಿವಿದಿದ್ದಾನೆ, ನೆಲಕ್ಕೆ...
17-05-24 05:38 pm