ಸಂಘಟನೆ ಕಾರ್ಯಕರ್ತನಿಗೆ ಹಲ್ಲೆ ; ಅಪ್ರಾಪ್ತ ಸೇರಿ ಮೂವರು ಯುವಕರ ಬಂಧನ

13-02-21 01:59 pm       Mangalore Correspondent   ಕ್ರೈಂ

ಹಿಂದು ಸಂಘಟನೆ ಕಾರ್ಯಕರ್ತ ದೀಪಕ್ ಎಂಬವರ ಮೇಲೆ ಹಲ್ಲೆಗೈದು ಪರಾರಿಯಾಗಿದ್ದ ಮೂವರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. 

ಮಂಗಳೂರು, ಫೆ.13: ನಗರದ ಲಾಲ್ ಬಾಗ್ ಬಳಿಯ ಪಬ್ಬಾಸ್ ಮುಂಭಾಗದಲ್ಲಿ ನಿಂತಿದ್ದ ಹಿಂದು ಸಂಘಟನೆ ಕಾರ್ಯಕರ್ತ ದೀಪಕ್ ಎಂಬವರ ಮೇಲೆ ಹಲ್ಲೆಗೈದು ಪರಾರಿಯಾಗಿದ್ದ ಮೂವರ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. 

ಕುದ್ರೋಳಿ ನಿವಾಸಿಗಳಾದ ಮೊಹಮ್ಮದ್ ಶಾಹಿಲ್ (19), ಮೊಹಮ್ಮದ್ ಫಾಯಿಕ್ (18) ಮತ್ತು ಇನ್ನೋರ್ವ ಅಪ್ರಾಪ್ತನನ್ನು ಪೊಲೀಸರು ಬಂಧಿಸಿದ್ದಾರೆ. ಫೆ.7ರಂದು ರಾತ್ರಿ ಹತ್ತು ಗಂಟೆ ಸುಮಾರಿಗೆ ದೀಪಕ್ ಎಂಬಾತ ತನ್ನ ಬೈಕಿನಲ್ಲಿ ಕುಳಿತಿದ್ದಾಗ ಅಲ್ಲಿಗೆ ಬಂದಿದ್ದ ಮೂವರು ಯುವಕರು ಬೈಕಿನಲ್ಲಿದ್ದ ಶಿವಾಜಿ ಸ್ಟಿಕ್ಕರ್ ಬಗ್ಗೆ ಆಕ್ಷೇಪಿಸಿದ್ದಾರೆ. ಸ್ಟಿಕ್ಕರ್ ಹಾಕಿದ ವಿಚಾರದಲ್ಲಿ ವಾಗ್ವಾದ ನಡೆದು ಬಳಿಕ ದೀಪಕ್ ಮೇಲೆ ಯುವಕರು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಮುಂಗೈ, ಹೆಬ್ಬೆರಳು ಮತ್ತು ಕೈ ಮಣಿ ಗಂಟು ಭಾಗಕ್ಕೆ ಗಾಯಗೊಂಡಿದ್ದ ದೀಪಕ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 

ಈ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್, ಡಿಸಿಪಿ ವಿನಯ ಗಾಂವ್ಕರ್ ನೇತೃತ್ವದಲ್ಲಿ ಪೊಲೀಸ್ ತಂಡ ರಚಿಸಿ, ತನಿಖೆಗೆ ಸೂಚಿಸಿದ್ದರು. ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ನಡೆಸಿದ್ದರು. ಇದೀಗ ಮೂರು ಯುವಕರನ್ನು ಕೂಡ ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Read: ಬೈಕಿನಲ್ಲಿ ಶಿವಾಜಿ ಸ್ಟಿಕ್ಕರ್ ; ಸಂಘಟನೆ ಕಾರ್ಯಕರ್ತನ ಮೇಲೆ ತಂಡದಿಂದ ದಾಳಿ

A man was attacked by a group of unidentified miscreants near Lalbagh in Mangalore for Shivaji sticker in the bike. The City Police have arrested Three persons.