ನರಿಂಗಾನ; ಮಾನಸಿಕ ಖಿನ್ನತೆಗೊಳಗಾದ ಯುವಕ ಸಾವಿಗೆ ಶರಣು 

18-02-21 08:05 pm       Mangaluru Correspondent   ಕ್ರೈಂ

ಮಾನಸಿಕ ಖಿನ್ನತೆಯಿಂದ ಯುವಕನೊಬ್ಬ ಮನೆಯಲ್ಲೇ ಆತ್ಮಹತ್ಯೆಗೈದ ಘಟನೆ ಕೊಣಾಜೆ ಸಮೀಪದ ನರಿಂಗಾನ ಗ್ರಾಮದಲ್ಲಿ ನಡೆದಿದೆ. 

ಉಳ್ಳಾಲ, ಫೆ.18: ಮಾನಸಿಕ ಖಿನ್ನತೆಯಿಂದ ಯುವಕನೊಬ್ಬ ಮನೆಯಲ್ಲೇ ಆತ್ಮಹತ್ಯೆಗೈದ ಘಟನೆ ಕೊಣಾಜೆ ಸಮೀಪದ ನರಿಂಗಾನ ಗ್ರಾಮದಲ್ಲಿ ನಡೆದಿದೆ. 

ನರಿಂಗಾನ ಗ್ರಾಮದ ವಿದ್ಯಾನಗರದ ಪ್ರವೀಣ್ (32) ಮೃತ ಯುವಕ. ಅವಿವಾಹಿತನಾಗಿದ್ದ ಪ್ರವೀಣ್ ಎಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದು ಸಾಧು ಸ್ವಭಾವದ ಯುವಕನಾಗಿದ್ದ. ಕಳೆದ ಕೆಲವು ದಿನಗಳಿಂದ ಆರೋಗ್ಯ ವಿಚಾರದಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. 

ಕೊಣಾಜೆ ಪೊಲೀಸರು ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು ಗುರುವಾರ ಅಂತಿಮ ಕ್ರಿಯೆ ನಡೆಸಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mentally disturbed man commits suicide at home in Konaje. The deceased has been identified as Praveen (32).