ನರಿಂಗಾನ: ಮನೆ ಆವರಣದಲ್ಲಿ ನಿಲ್ಲಿಸಿದ್ದ ಕಾರುಗಳನ್ನು ಪುಡಿಗೈದು ದುಷ್ಕೃತ್ಯ !

04-03-21 01:06 pm       Mangalore Correspondent   ಕ್ರೈಂ

ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳನ್ನ ಆಗಂತುಕರು ಪುಡಿಗೈದ ಘಟನೆ ನರಿಂಗಾನದಲ್ಲಿ ನಡೆದಿದೆ. 

ಕೊಣಾಜೆ, ಮಾ.4: ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳನ್ನ ಯಾರೋ ಆಗಂತುಕರು ಪುಡಿಗೈದು ಮನೆಯ ಕಿಟಕಿ ಗಾಜುಗಳನ್ನು ಹಾನಿಗೈದ ಘಟನೆ ನರಿಂಗಾನ ಗ್ರಾಮದ ವಿದ್ಯಾನಗರದ ಬಳಿಯ ಜಲ್ಲಿ ಕ್ರಾಸ್ ನಲ್ಲಿ ನಸುಕಿನ ಜಾವ ನಡೆದಿದೆ. 

ಜಲ್ಲಿ ಕ್ರಾಸ್ ಬಳಿಯ ನಿವಾಸಿ ಅಬ್ಬಾಸ್ ಎಂಬವರ ಮನೆಯ ಆವರಣದೊಳಗೆ ಘಟನೆ ನಡೆದಿದೆ. ಅಬ್ಬಾಸ್ ಅವರು ಜಲ್ಲಿಕ್ರಾಸ್ ನಲ್ಲಿ ನ್ಯಾಯ ಬೆಲೆ ಅಂಗಡಿಯನ್ನು ಹೊಂದಿದ್ದಾರೆ.

ಇಂದು ಮುಂಜಾನೆ ನಸುಕಿನ ವೇಳೆ 4 ಗಂಟೆ ಹೊತ್ತಿಗೆ ಶಬ್ದ ಕೇಳಿಸಿದ್ದು ಅಬ್ಬಾಸ್ ಮನೆ ಹೊರಗೆ ಬಂದು ನೋಡಿದಾಗ ಆವರಣದೊಳಗೆ ನಿಲ್ಲಿಸಿದ್ದ ಕ್ವಾಲಿಸ್ ಮತ್ತು ಓಮ್ನಿ ಕಾರು, ಕಿಟಕಿ ಗಾಜುಗಳನ್ನು ಆಗಂತುಕರು ಪುಡಿಗಟ್ಟಿ ಪರಾರಿಯಾಗಿದ್ದರು. 
ಅಬ್ಬಾಸ್ ಕೂಡಲೇ ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಕೊಣಾಜೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Miscreants pelt stones at Two parked cars and also damage the house at Konaje. The Konaje police are now investigating the case.