ಮೀನು ಖರೀದಿ ನೆಪದಲ್ಲಿ ಮಹಿಳೆಯ ಕರಿಮಣಿ ಸರ ಕಿತ್ತ ಖದೀಮ ; ಮಾರುಕಟ್ಟೆ ಮಹಿಳೆಯರಿಂದ ಗೂಸಾ !

04-03-21 03:04 pm       Mangalore Correspondent   ಕ್ರೈಂ

ಮೀನು ಮಾರುತ್ತಿದ್ದ ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿಯಾಗಲು ಯತ್ನಿಸಿ, ಮಹಿಳೆಯರಿಂದ ಗೂಸಾ ತಿಂದ ಘಟನೆ ಸ್ಟೇಟ್ ಬ್ಯಾಂಕ್ ಬಳಿ ನಡೆದಿದೆ. 

ಮಂಗಳೂರು, ಮಾ.4: ಮೀನು ಖರೀದಿ ನೆಪದಲ್ಲಿ ಮಾರುಕಟ್ಟೆಗೆ ಆಗಮಿಸಿದ್ದ ಖದೀಮನೊಬ್ಬ ಮೀನು ಮಾರುತ್ತಿದ್ದ ಮಹಿಳೆಯ ಕರಿಮಣಿ ಸರ ಕಿತ್ತು ಪರಾರಿಯಾಗಲು ಯತ್ನಿಸಿ, ಮಹಿಳೆಯರಿಂದ ಗೂಸಾ ತಿಂದ ಘಟನೆ ನಗರದ ಸ್ಟೇಟ್ ಬ್ಯಾಂಕ್ ಬಳಿಯ ಮೀನು ಮಾರುಕಟ್ಟೆಯಲ್ಲಿ ನಡೆದಿದೆ. 

ಇಬ್ಬರು ವ್ಯಕ್ತಿಗಳು ಬಂದಿದ್ದು ಮೀನು ಖರೀದಿಸುವ ನೆಪದಲ್ಲಿ ಮಹಿಳೆಯ ಜೊತೆ ಮಾತನಾಡುತ್ತಿದ್ದರು. ಈ ವೇಳೆ, ಒಬ್ಬಾತ ಕರಿಮಣಿ ಸರ ಕಿತ್ತುಕೊಂಡಿದ್ದು ಅಲ್ಲಿಂದ ಓಡಲು ಯತ್ನಿಸಿದ್ದಾನೆ. ಕೂಡಲೇ ಮಾರುಕಟ್ಟೆಯ ಮೀನುಗಾರ ಮಹಿಳೆಯರು ಸೇರಿ ಆತನನ್ನು ಹಿಡಿದಿದ್ದಾರೆ. ಅಷ್ಟರಲ್ಲಿ ಇನ್ನೊಬ್ಬ ವ್ಯಕ್ತಿ ಓಡಿ ತಪ್ಪಿಸಿಕೊಂಡಿದ್ದಾನೆ. 

ಸಿಕ್ಕಿಬಿದ್ದ ಯುವಕನಿಗೆ ಮಹಿಳೆಯರು ಸೇರಿ ಕೈಗೆ ಸಿಕ್ಕ ವಸ್ತುಗಳಿಂದ ಥಳಿಸಿ ಧರ್ಮದೇಟು ನೀಡಿದ್ದಾರೆ. ಬಳಿಕ ಬಂದರು ಪೊಲೀಸರು ಬಂದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ, ಸ್ಥಳೀಯರು ಮೊಬೈಲಿನಲ್ಲಿ ವಿಡಿಯೋ ಮಾಡಿದ್ದು ವಿಡಿಯೋ ವೈರಲ್ ಆಗಿದೆ.

Video: 

A man was thrashed by women for an attempt to snatch the gold chain near the state bank at Hampankatte in Mangalore.