ಬಾಬು ಚಿಟ್ ಫಂಡ್ ಹೆಸರಲ್ಲಿ ಕೋಟ್ಯಂತರ ವಂಚನೆ ; ಸರಕಾರಿ ನೌಕರರು, ಉದ್ಯಮಿಗಳೇ ಟಾರ್ಗೆಟ್ !

09-03-21 03:57 pm       Headline Karnataka News Network   ಕ್ರೈಂ

ಬಾಬು ಚಿಟ್ ಫಂಡ್ ಹೆಸರಲ್ಲಿ ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. 

ಬೆಂಗಳೂರು, ಮಾ.9 : ಬಾಬು ಚಿಟ್ ಫಂಡ್ ಹೆಸರಲ್ಲಿ ಸರ್ಕಾರಿ ನೌಕರರನ್ನು ಮತ್ತು ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಠೇವಣಿ ಸಂಗ್ರಹಿಸಿ, ನೂರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಬೆಂಗಳೂರು ಉತ್ತರ ತಾಲೂಕಿನ ಶಿವನಪುರದಲ್ಲಿ ಬಾಬು ಚಿಟ್ ಫಂಡ್ ಎಂಬ ಕಚೇರಿ ಇದ್ದು, ಬಾಬು ಚಿಟ್‌ ಫಂಡ್, ಜೊತೆಗೆ ಅಗರಬತ್ತಿ ಸಪ್ಲೈ ಸೇರಿದಂತೆ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದರು. ವೆಂಕಟೇಶ್ ಬಾಬು, ಲೋಕೇಶ್ ಬಾಬು, ನಟರಾಜು ಸೇರಿದಂತೆ ಮೂರು ಜನರ ಮಾಲೀಕತ್ವದಲ್ಲಿ ಎಂಟು ಕೋಟಿಗೂ ಅಧಿಕ ವಂಚನೆ ನಡೆಸಿದ್ದಾರೆ ಎನ್ನಲಾಗುತ್ತಿದ್ದು, ವಂಚನೆ ಬಯಲಾಗುತ್ತಲೇ ತಲೆಮರೆಸಿಕೊಂಡಿದ್ದಾರೆ.‌ 

ಇವರು ರಾಜ್ಯ, ನೆರೆ ರಾಜ್ಯಗಳಲ್ಲೂ ನೂರಾರು ಜನರಿಂದ ಹೂಡಿಕೆ ಮಾಡಿಕೊಂಡಿರುವ ಮಾಹಿತಿ ಇದ್ದು, ಹಣ ಕಳೆದುಕೊಂಡವರು ಪೊಲೀಸ್ ದೂರು ನೀಡಲು ಆರಂಭಿಸಿದ್ದಾರೆ. ಸದ್ಯ ವಂಚಿಸಿದವರ ಮನೆ ಹಾಗೂ ಕಚೇರಿ ಮುಂದೆ ಮೋಸ ಹೋದವರು ಸಾಲುಗಟ್ಟಿದ್ದು ಮುತ್ತಿಗೆ ಹಾಕಿದ್ದಾರೆ.

Crores cheated in the name of baba chits fund in Bangalore. A case had been registered at the Madanayakahalli Station.