ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದು ಚಿನ್ನ ಎಗರಿಸಿದ ವ್ಯಕ್ತಿ

20-03-21 12:03 pm       Mangalore Correspondent   ಕ್ರೈಂ

ಮನೆ ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ಬಂದಿದ್ದ ವ್ಯಕ್ತಿಯೋರ್ವ ಚಿನ್ನಾಭರಣ ಕಳವುಗೈದ ಘಟನೆ ಬೆಳ್ಮ ಗ್ರಾಮದ ನಿತ್ಯಾನಂದನಗರ ಎಂಬಲ್ಲಿ ನಡೆದಿದೆ.

ಕೊಣಾಜೆ, ಮಾ.20 : ಮನೆ ಬಾಡಿಗೆ ಕೇಳುವ ನೆಪದಲ್ಲಿ ಮನೆಗೆ ಬಂದಿದ್ದ ವ್ಯಕ್ತಿಯೋರ್ವ ಚಿನ್ನಾಭರಣ ಕಳವುಗೈದ ಘಟನೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಮ ಗ್ರಾಮದ ನಿತ್ಯಾನಂದನಗರ ಎಂಬಲ್ಲಿ ನಡೆದಿದೆ.

ವೀಣಾ ಎಂಬವರು ತನ್ನ ಸೋದರಿ ಅಶ್ವಿನಿಯವರ ನಿತ್ಯಾನಂದ ನಗರದಲ್ಲಿರುವ ಮನೆಗೆ ಮಾ.16 ರಂದು ಬಂದಿದ್ದು ಇಬ್ಬರು ಸೇರಿ ಬೆಳಗ್ಗೆ 10.30ರ ಸುಮಾರಿಗೆ ನಾಟೆಕಲ್ ಕಣಚೂರು ಆಸ್ಪತ್ರೆಗೆಂದು ತೆರಳಿದ್ದರು. ಈ ವೇಳೆ ಮನೆಯಲ್ಲಿ ಅವರ ತಾಯಿ ಮಾತ್ರವಿದ್ದು, ಅಲ್ಲಿಗೆ ಬಂದಿದ್ದ ವ್ಯಕ್ತಿಯೋರ್ವ ಅವರಲ್ಲಿ ಬಾಡಿಗೆಗೆ ಮನೆಯನ್ನು ಕೇಳುವ ಕುರಿತು ಕೇಳಿದ್ದನು.

ಬಳಿಕ ವೀಣಾ ಅವರು ಮನೆಗೆ ವಾಪಸ್ಸಾದಾಗ  ತಾನು ರೂಮಲ್ಲಿಟ್ಟಿದ್ದ 3.5 ಪವನ್ ತೂಕದ ಕರಿಮಣಿ ಚಿನ್ನದ ಸರ ಮತ್ತು ಒಂದು ಪವನ್ ತೂಕದ ಚಿನ್ನದ ಸರವಿದ್ದ ಬ್ಯಾಗ್ ಕಳವಾಗಿತ್ತು. ಎರಡು ಚಿನ್ನಾಭರಣಗಳ ಮೌಲ್ಯ ರೂ. 1.40 ಲಕ್ಷ ಅಂದಾಜಿಸಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mangalore Thieves flee with gold acting as tenants in Konaje. The worth of God is estimated to be 1.40 Lakhs.