ಬ್ರೇಕಿಂಗ್ ನ್ಯೂಸ್
31-03-21 12:59 pm Headline Karnataka News Network ಕ್ರೈಂ
ಚೆನ್ನೈ, ಮಾ.31; 300 ಕೇಜಿ ಹೆರಾಯಿನ್ ಮತ್ತು ಎಕೆ 47 ರೈಫಲ್ಸ್ ಸೇರಿದಂತೆ ಶಸ್ತ್ರಾಸ್ತ್ರಗಳಿದ್ದ ಬೋಟ್ ಒಂದನ್ನು ಸಮುದ್ರ ಮಧ್ಯೆ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಪಡೆ ವಶಕ್ಕೆ ಪಡೆದಿದ್ದು ಆರು ಮಂದಿ ಶ್ರೀಲಂಕಾ ನಿವಾಸಿಗಳನ್ನು ಬಂಧಿಸಿದೆ.
ಕೇರಳದ ವಿಝಿಂಜಾಮ್ ಸಮೀಪದ ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದ ಶ್ರೀಲಂಕಾದ ರವಿಹನ್ಸಿ ಎನ್ನುವ ಬೋಟ್ ಒಂದನ್ನು ಕೋಸ್ಟ್ ಗಾರ್ಡ್ ಪಡೆ ಮತ್ತು ಚೆನ್ನೈನ ಎನ್ ಸಿಬಿ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಭಾರೀ ಪ್ರಮಾಣದ ಮಾದಕ ವಸ್ತುಗಳು ಹಾಗೂ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.


ಶ್ರೀಲಂಕಾಗೆ ಸೇರಿದ ವೆಸಲ್ ಅನ್ನು ವಶಕ್ಕೆ ಪಡೆದು ವಿಝಿಂಜಾಮ್ ಬಂದರಿಗೆ ತರಲಾಗಿದ್ದು, ಅದರಲ್ಲಿ 300 ಕೇಜಿ ಹೆರಾಯಿನ್ ಮತ್ತು ಐದು ಎಕೆ 47 ರೈಫಲ್ ಗಳು ಹಾಗೂ 1000 ರೌಂಡ್ಸ್ 9 ಎಂಎಂ ಮದ್ದುಗುಂಡುಗಳು ಪತ್ತೆಯಾಗಿವೆ. ಅದಲ್ಲದೆ, ಮಾದಕ ದ್ರವ್ಯಗಳ ಸಾಗಣೆ ಜಾಲದ ಮಾಹಿತಿಗಳಿದ್ದ ಮಹತ್ವದ ಕಡತಗಳನ್ನು ವಶಕ್ಕೆ ಪಡೆದಿದ್ದಾರೆ.


ವೆಸಲ್ ಒಳಗಿದ್ದ ನೀರಿನ ಟಾಂಕಿ ಒಳಗಡೆ ಹೆರಾಯಿನ್ ಇದ್ದ 301 ಪ್ಯಾಕೆಟ್ ಗಳನ್ನು ಬಚ್ಚಿಡಲಾಗಿತ್ತು. ಪ್ಲಾಸ್ಟಿಕ್ ಪ್ಯಾಕೆಟ್ ಮೇಲ್ಭಾಗದಲ್ಲಿ ಓಡುವ ಕುದುರೆಗಳ ಚಿತ್ರಗಳಿದ್ದ ಬ್ಯಾಗ್ ಅದಾಗಿದ್ದು, ಡ್ರಗ್ ರಾಕೆಟ್ ಸಾಗಾಟದ ವೇಳೆ ಇದೇ ರೀತಿಯ ಚಿತ್ರಗಳನ್ನು ಬಳಸುತ್ತಾರೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ, ಇವನ್ನು ಇರಾನ್ ದೇಶದ ಛಬಾಹಾರ್ ಬಂದರಿನಿಂದ ತರಲಾಗಿದ್ದು, ಲಕ್ಷದ್ವೀಪದ ಬಳಿ ಬೇರೆ ವೆಸಲ್ ಒಂದರಿಂದ ಇದಕ್ಕೆ ತುಂಬಲಾಗಿತ್ತು. ಶ್ರೀಲಂಕಾಗೆ ಒಯ್ಯುತ್ತಿರುವುದಾಗಿ ಸಿಬಂದಿ ಹೇಳಿದ್ದಾರೆ. ಈ ಜಾಲದ ಹಿಂದೆ ಪಾಕಿಸ್ಥಾನ ಮೂಲದ ಡ್ರಗ್ ರಾಕೆಟ್ ಇರುವುದು ಖಚಿತವಾಗಿದ್ದು, ಎನ್ ಸಿಬಿ ಅಧಿಕಾರಿಗಳು ಆರು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
Based on intelligence inputs on drug trafficking, Indian Coast Guard air and sea assets thwarted three Sri Lankan boats off the Lakshadweep region on India’s west coast on March 18. Indian Coast Guards big haul Rs 3000 cr worth drugs 5 AK 47rifles seized.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm