ಬೆಂದೂರುವೆಲ್ ಚರ್ಚ್ ಕಚೇರಿಗೆ ಕನ್ನ ; 4.98 ಲಕ್ಷ ರೂ. ಕಳವು

06-04-21 10:39 am       Mangalore Correspondent   ಕ್ರೈಂ

ಬೆಂದೂರ್ ವೆಲ್ ನಲ್ಲಿರುವ ಸಂತ ಸೆಬಾಸ್ಟಿಯನ್ ಚರ್ಚಿನ ಕಚೇರಿಗೆ ಕನ್ನ ಹಾಕಿದ್ದು ಲಕ್ಷಾಂತರ ರೂಪಾಯಿ ಹಣ ಎಗರಿಸಿದ ಘಟನೆ ನಡೆದಿದೆ. 

ಮಂಗಳೂರು, ಏ.6 : ನಗರದ ಬೆಂದೂರ್ ವೆಲ್ ನಲ್ಲಿರುವ ಸಂತ ಸೆಬಾಸ್ಟಿಯನ್ ಚರ್ಚಿನ ಕಚೇರಿಗೆ ಕನ್ನ ಹಾಕಿದ್ದು ಲಕ್ಷಾಂತರ ರೂಪಾಯಿ ಹಣ ಎಗರಿಸಿದ ಘಟನೆ ನಡೆದಿದೆ. 

ಏಪ್ರಿಲ್ 5 ರ ಮುಂಜಾನೆ 6.30 ರ ವೇಳೆಗೆ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಚರ್ಚ್ ಪಾದ್ರಿ ಬೆಳಗ್ಗೆ 6.30 ಕ್ಕೆ ಚರ್ಚ್ ನಲ್ಲಿ ಸಾಮೂಹಿಕ ಪ್ರಾಥನೆಗೆ ತೆರಳುವ ಸಂದರ್ಭದಲ್ಲಿ ಕಚೇರಿಗೆ ಬೀಗ ಹಾಕಲು ಮರೆತಿದ್ದರು. ಇದೇ ವೇಳೆ ಕಚೇರಿಗೆ ನುಗ್ಗಿದ ಅಪರಿಚಿತ ವ್ಯಕ್ತಿ ಡ್ರಾವರಿನಲ್ಲಿದ್ದ 4.98 ಲಕ್ಷ ರೂ. ಕದ್ದು ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಶುಕ್ರವಾರ, ಶನಿವಾರ ಚರ್ಚ್ ನಲ್ಲಿ ಪೂಜೆ, ಇನ್ನಿತರ ಕಾರ್ಯಕ್ರಮಗಳಿದ್ದವು. 

ಘಟನೆಯ ಬಗ್ಗೆ ಮಾಹಿತಿ ಪಡೆದ ಕದ್ರಿ ಪೊಲೀಸರು ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

An unidentified man reportedly entered the office of Bendore Church in Mangalore and decamped with cash Rs 4.98 lac. The incident took place early in the morning on Monday, April 5. Kadri police are investigating the case.