ಬ್ರೇಕಿಂಗ್ ನ್ಯೂಸ್

Mangalore, Dr Adarsh, Sullia, Marriage, Cheating: ಫೇಸ್ಬುಕ್ ಪರಿಚಯ ; ಮೈಸೂರು ಮೂಲದ ದಲಿತ ಯುವತಿಗೆ ಸುಬ್ರಹ್ಮಣ್ಯದ ಬ್ರಾಹ್ಮಣ ವೈದ್ಯನಿಂದ ಮೋಸ, ಮದುವೆಯಾದರೂ ಮನೆಗೆ ಬಿಟ್ಟುಕೊಳ್ಳದೆ ಜಾತಿ ನಿಂದನೆ, 5 ಕೋಟಿ ವರದಕ್ಷಿಣೆ ಕೇಳಿ ಕಿರುಕುಳ, ಎಫ್ಐಆರ್ ಬೆನ್ನಲ್ಲೇ ತಲೆಮರೆಸಿಕೊಂಡ ವೈದ್ಯ     |    Indias First Special Action Force, Mangalore: ಕೋಮು ದ್ವೇಷ ನಿಗ್ರಹಕ್ಕೆ ಸ್ಥಾಪನೆಗೊಂಡ ದೇಶದ ಮೊದಲ ಕಾರ್ಯಪಡೆ, ದಯವಿಟ್ಟು ಈ ಫೋರ್ಸ್ ಗೆ ಕೆಲಸ ಕೊಡಬೇಡಿ, ನೀವಾಗೇ ಸುಮ್ಮನಿದ್ರೆ ತೊಂದ್ರೆ ಇಲ್ಲ, ಮತೀಯ ದ್ವೇಷ ಹತ್ತಿಕ್ಕುವುದಷ್ಟೆ ಉದ್ದೇಶ, ದುರುದ್ದೇಶ ಇಲ್ಲ ; ಗೃಹ ಸಚಿವ ಪರಮೇಶ್ವರ್     |    ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್ಟಲು ಮಕ್ಕಳೊಂದಿಗೆ ಹೊರಟಿದ್ದ ರಾಜಸ್ಥಾನದ ವೈದ್ಯ ದಂಪತಿ, ಸೆಲ್ಫಿ ಕ್ಲಿಕ್ಕಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಎದುರಾಗಿತ್ತು ಸಾವು !     |   

ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಕೇಜಿ ಗಾಂಜಾ ಸಹಿತ ಆರೋಪಿ ಸೆರೆ, ಇನ್ನಿಬ್ಬರು ಪರಾರಿ

08-04-21 12:08 pm       Mangalore Correspondent   ಕ್ರೈಂ

ಕಾರಿನಲ್ಲಿ ಸಾಗಿಸುತ್ತಿದ್ದ 2 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದ ವಿಟ್ಲ ಪೊಲೀಸರು ನಾಸೀರ್ ಎಂಬಾತನನ್ನು ಬಂಧಿಸಿದ್ದಾರೆ.

ಬಂಟ್ವಾಳ, ಎ.8 : ಇಲ್ಲಿನ ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 2 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದ ವಿಟ್ಲ ಪೊಲೀಸರು ನಾಸೀರ್ ಎಂಬಾತನನ್ನು ಬಂಧಿಸಿದ್ದಾರೆ.

ಈ ವೇಳೆ ಪ್ರಮುಖ ಆರೋಪಿಗಳಾದ ಬಾಕ್ರಬೈಲಿನ ಬಾರಿಕ್ ಹಾಗೂ ಪಾತೂರಿನ ಮುಸ್ತಫ ತಲೆಮರೆಸಿಕೊಂಡಿದ್ದು, ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿದ್ದಾರೆ.

ವಿಟ್ಲ ಪೊಲೀಸ್ ಠಾಣೆ ಪಿಎಸ್ಐ ವಿನೋದ್ ಎಸ್.ಕೆ. ಅವರು ಸಿಬ್ಬಂದಿ ಪ್ರಸನ್ನ , ಜಯರಾಮ ಕೆ.ಟಿ., ಪ್ರತಾಪ್ ರೆಡ್ಡಿ, ಲೋಕೇಶ, ಹೇಮರಾಜ್ ಹಾಗೂ ವಿನಾಯಕ ಜೊತೆ ಕಾರ್ಯಾಚರಣೆ ನಡೆಸಿದ್ದಾರೆ. 

ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭ 2 ಕೆ.ಜಿ. ತೂಕದ 20 ಸಾವಿರ ರೂ. ಬೆಲೆಯ ಗಾಂಜಾ ಕಾರಿನಲ್ಲಿ ಪತ್ತೆಯಾಗಿದೆ. ಕಾರು ಸಹಿತ ಅದರಲ್ಲಿದ್ದ ಮಂಜೇಶ್ವರ ತಾಲೂಕಿನ ಪಾತೂರು ಕಜೆ ನಿವಾಸಿ ನಾಸಿರ್ ಎಂಬಾತನನ್ನು ಬಂಧಿಸಿದ್ದಾರೆ. ಈತನನ್ನು ಮಂಗಳೂರು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು , ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Bantwal Man arrested for illegal smuggling 2 kilo ganja in car. The arrested has been identified as Nasir.