ಬ್ರೇಕಿಂಗ್ ನ್ಯೂಸ್
09-04-21 05:47 pm Bangalore Correspondent ಕ್ರೈಂ
ಬೆಂಗಳೂರು, ಏ 9 : ಚಾಕು, ಪೇಪರ್ ಕಟ್ಟರ್, ರೇಜರ್ ಇತರ ಹರಿತ ವಸ್ತುಗಳನ್ನು ಕಾಲಿನ ಮಣಿಗಂಟಿನ ಬಳಿ ಅಡಗಿಸಿಕೊಂಡಿದ್ದ 26 ವರ್ಷದ ಗರ್ಭಿಣಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ.
ಯುವತಿಯನ್ನು ಅಸ್ಸಾಂ ಮೂಲದ ಉಮಾದೇವಿ ಎಂದು ಗುರುತಿಸಲಾಗಿದೆ. ಬೆಳಗ್ಗೆ 7.10 ಕ್ಕೆ ಬೆಂಗಳೂರಿನಿಂದ ಗುವಾಹಟಿಗೆ ತೆರಳುವ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಲು ಸಿದ್ಧತೆ ನಡೆಸಿದ್ದಳು. ದೇವಿ ಮತ್ತು ಆಕೆಯ ನಾಲ್ಕು ಕುಟುಂಬ ಸದಸ್ಯರು ತಪಾಸಣೆಗಾಗಿ ಮುಂಜಾನೆ 5.30ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಗರ್ಭಿಣಿಯ ನಡವಳಿಕೆ ಕಂಡು ಸಿಐಎಸ್ಎಫ್ ಅಧಿಕಾರಿಗಳು ಅನುಮಾನದಿಂದ ತಪಾಸಣೆ ತೀವ್ರಗೊಳಿಸಿದಾಗ ಆಕೆಯ ಎಡಕಾಲಿನ ಪಾದದ ಬಳಿ ಹರಿತವಾದ ವಸ್ತುಗಳಾದ ಪೇಪರ್ ಕಟ್ಟರ್, ಚಾಕು ,ಸಿಂಗಲ್ ಬ್ಲೇಡ್, ರೇಜರ್, ನೇಲ್ಕ್ಲಿಪ್ಪರ್, ಮೆಟಲ್ ಫೈಲರ್, ಇಕ್ಕಳ ಕಟ್ಟಿಕೊಂಡಿರುವುದು ಬೆಳಕಿಗೆ ಬಂದಿದೆ.
ಆಕೆಯನ್ನು ವಿಚಾರಣೆ ನಡೆಸಿದಾಗ "ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದು, ನಮ್ಮ ಸಮುದಾಯದಲ್ಲಿ ಗರ್ಭಿಣಿಯರು ಹೊಟ್ಟೆಯ ಸುತ್ತಲೂ ಲೋಹದ ವಸ್ತುಗಳನ್ನು ಕಟ್ಟುವುದು ಸಂಪ್ರದಾಯ. ಹೊಟ್ಟೆಯ ಭಾಗಕ್ಕೆ ಕಟ್ಟಲು ಆತಂಕವಾಗಿ ತನ್ನ ಪಾದದ ಬಳಿ ಕಟ್ಟಿಕೊಂಡಿರುವುದಾಗಿ ತಿಳಿಸಿದ್ದಾಳೆ. ತಪಾಸಣೆ ವೇಳೆ ಅಧಿಕಾರಿಗಳು ತಕ್ಷಣ ಇಂಡಿಗೋ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಹೆಚ್ಚುವರಿ ಪರಿಶೀಲನೆಗಾಗಿ ವಿಮಾನದಲ್ಲಿ ಕುಳಿತಿದ್ದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪತಿ ಸೇರಿದಂತೆ ಆಕೆಯ ಕುಟುಂಬಸ್ಥರು ಹಾಗೂ ಅವರ ಲಗೇಜ್ ಗಳನ್ನು ವಿಮಾನದಿಂದ ಇಳಿಸಿದ್ದಾರೆ.
ಶಂಕಿತೆ ಗರ್ಭಿಣಿ ವಿಮಾನದಲ್ಲಿ ಕಾಕ್ಪಿಟ್ಗೆ ಸಮೀಪವಿರುವ ಸೀಟ್ ನಂಬರ್ 1 ಎ ಬುಕ್ ಮಾಡಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಪೊಲೀಸರಿಗೆ ಹಸ್ತಾಂತರಿಸಿದ್ದು ಆಕೆಯನ್ನು ಹಾಗೂ ಆಕೆಯ ಸಮುದಾಯ ಪದ್ಧತಿಯ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ.
A 26-year-old pregnant woman passenger with a knife, paper cutter, razor and other sharp objects strapped to her ankle with duct tape, was arrested at the Kempegowda International Airport on Thursday.
02-09-25 11:04 pm
Bangalore Correspondent
Sowjanya Case, Dharmasthala: ಸೌಜನ್ಯಾ ಪ್ರಕರಣ ;...
02-09-25 08:37 pm
ಮಕ್ಕಳ ಕಳ್ಳರು ಹೀಗೂ ಮಾಡುತ್ತಾರೆ..! ಶಾಲಾ ವಾಹನ ಎಂದ...
02-09-25 08:00 pm
Ranya Rao: ಚಿನ್ನ ಸ್ಮಗ್ಲರ್ ರನ್ಯಾ ರಾವ್ ಗೆ ಮತ್ತೆ...
02-09-25 06:22 pm
Dharmasthala ED: ಧರ್ಮಸ್ಥಳ ಪ್ರಕರಣದಲ್ಲಿ ಇಡಿ ಎಂಟ...
02-09-25 02:37 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 10:26 pm
Mangalore Correspondent
Mangalore Mukka Accident: ಮುಕ್ಕ ಜಂಕ್ಷನ್ನಲ್ಲಿ...
02-09-25 04:44 pm
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
02-09-25 07:09 pm
Mangalore Correspondent
Valachil, Rape, College, Mangalore Crime: ಇನ್...
02-09-25 04:31 pm
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm