ಬ್ರೇಕಿಂಗ್ ನ್ಯೂಸ್
09-04-21 05:47 pm Bangalore Correspondent ಕ್ರೈಂ
ಬೆಂಗಳೂರು, ಏ 9 : ಚಾಕು, ಪೇಪರ್ ಕಟ್ಟರ್, ರೇಜರ್ ಇತರ ಹರಿತ ವಸ್ತುಗಳನ್ನು ಕಾಲಿನ ಮಣಿಗಂಟಿನ ಬಳಿ ಅಡಗಿಸಿಕೊಂಡಿದ್ದ 26 ವರ್ಷದ ಗರ್ಭಿಣಿಯನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಅಧಿಕಾರಿಗಳು ಬಂಧಿಸಿದ್ದಾರೆ.
ಯುವತಿಯನ್ನು ಅಸ್ಸಾಂ ಮೂಲದ ಉಮಾದೇವಿ ಎಂದು ಗುರುತಿಸಲಾಗಿದೆ. ಬೆಳಗ್ಗೆ 7.10 ಕ್ಕೆ ಬೆಂಗಳೂರಿನಿಂದ ಗುವಾಹಟಿಗೆ ತೆರಳುವ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಲು ಸಿದ್ಧತೆ ನಡೆಸಿದ್ದಳು. ದೇವಿ ಮತ್ತು ಆಕೆಯ ನಾಲ್ಕು ಕುಟುಂಬ ಸದಸ್ಯರು ತಪಾಸಣೆಗಾಗಿ ಮುಂಜಾನೆ 5.30ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಗರ್ಭಿಣಿಯ ನಡವಳಿಕೆ ಕಂಡು ಸಿಐಎಸ್ಎಫ್ ಅಧಿಕಾರಿಗಳು ಅನುಮಾನದಿಂದ ತಪಾಸಣೆ ತೀವ್ರಗೊಳಿಸಿದಾಗ ಆಕೆಯ ಎಡಕಾಲಿನ ಪಾದದ ಬಳಿ ಹರಿತವಾದ ವಸ್ತುಗಳಾದ ಪೇಪರ್ ಕಟ್ಟರ್, ಚಾಕು ,ಸಿಂಗಲ್ ಬ್ಲೇಡ್, ರೇಜರ್, ನೇಲ್ಕ್ಲಿಪ್ಪರ್, ಮೆಟಲ್ ಫೈಲರ್, ಇಕ್ಕಳ ಕಟ್ಟಿಕೊಂಡಿರುವುದು ಬೆಳಕಿಗೆ ಬಂದಿದೆ.
ಆಕೆಯನ್ನು ವಿಚಾರಣೆ ನಡೆಸಿದಾಗ "ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದು, ನಮ್ಮ ಸಮುದಾಯದಲ್ಲಿ ಗರ್ಭಿಣಿಯರು ಹೊಟ್ಟೆಯ ಸುತ್ತಲೂ ಲೋಹದ ವಸ್ತುಗಳನ್ನು ಕಟ್ಟುವುದು ಸಂಪ್ರದಾಯ. ಹೊಟ್ಟೆಯ ಭಾಗಕ್ಕೆ ಕಟ್ಟಲು ಆತಂಕವಾಗಿ ತನ್ನ ಪಾದದ ಬಳಿ ಕಟ್ಟಿಕೊಂಡಿರುವುದಾಗಿ ತಿಳಿಸಿದ್ದಾಳೆ. ತಪಾಸಣೆ ವೇಳೆ ಅಧಿಕಾರಿಗಳು ತಕ್ಷಣ ಇಂಡಿಗೋ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಹೆಚ್ಚುವರಿ ಪರಿಶೀಲನೆಗಾಗಿ ವಿಮಾನದಲ್ಲಿ ಕುಳಿತಿದ್ದ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಪತಿ ಸೇರಿದಂತೆ ಆಕೆಯ ಕುಟುಂಬಸ್ಥರು ಹಾಗೂ ಅವರ ಲಗೇಜ್ ಗಳನ್ನು ವಿಮಾನದಿಂದ ಇಳಿಸಿದ್ದಾರೆ.
ಶಂಕಿತೆ ಗರ್ಭಿಣಿ ವಿಮಾನದಲ್ಲಿ ಕಾಕ್ಪಿಟ್ಗೆ ಸಮೀಪವಿರುವ ಸೀಟ್ ನಂಬರ್ 1 ಎ ಬುಕ್ ಮಾಡಿರುವುದು ಅನುಮಾನಕ್ಕೆ ಕಾರಣವಾಗಿತ್ತು. ಹೀಗಾಗಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಪೊಲೀಸರಿಗೆ ಹಸ್ತಾಂತರಿಸಿದ್ದು ಆಕೆಯನ್ನು ಹಾಗೂ ಆಕೆಯ ಸಮುದಾಯ ಪದ್ಧತಿಯ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಿದ್ದಾರೆ.
A 26-year-old pregnant woman passenger with a knife, paper cutter, razor and other sharp objects strapped to her ankle with duct tape, was arrested at the Kempegowda International Airport on Thursday.
15-07-25 01:32 pm
Bangalore Correspondent
ನಟಿ ಸರೋಜಾ ದೇವಿ- ಎಸ್ಸೆಂ ಕೃಷ್ಣ ಪ್ರೇಮ ಪ್ರಸಂಗ ; ಮ...
15-07-25 12:27 pm
ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡ...
15-07-25 10:35 am
ಧರ್ಮಸ್ಥಳದಲ್ಲಿ 20 ವರ್ಷಗಳಲ್ಲಾದ ಯುವತಿಯರ ನಾಪತ್ತೆ-...
14-07-25 10:44 pm
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
15-07-25 10:40 pm
Mangalore Correspondent
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
Karkala Parashurama Theme Park: ಕಾರ್ಕಳ ಪರಶುರಾ...
15-07-25 02:28 pm
Mangalore Accident, Alto Car: ದೆಹಲಿಯಿಂದ ಬಂದ ಗ...
15-07-25 10:32 am
15-07-25 06:52 pm
Bangalore Correspondent
Mangalore, Moodbidri college, Rape, Blackmail...
15-07-25 06:07 pm
ಹಿಂದು ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆಂದು ಸು...
15-07-25 05:21 pm
Mangalore Police, Arrest, NITTE College Stude...
15-07-25 01:13 pm
Mangalore Crime, Police: ದುಬೈನಲ್ಲಿ ವಹಿವಾಟು ;...
15-07-25 11:38 am