ಕೂಲಿ ಕಾರ್ಮಿಕನನ್ನು ಕತ್ತು ಸೀಳಿ ರೈಲ್ವೇ ಹಳಿಗೆ ಎಸೆದ ದುಷ್ಕರ್ಮಿಗಳು

12-04-21 11:38 am       Mangalore Correspondent   ಕ್ರೈಂ

ಬೈಕಂಪಾಡಿ ಕೈಗಾರಿಕಾ ಪ್ರಾಂಗಣದ ಬಳಿ ರೈಲ್ವೇ ಹಳಿಯಲ್ಲಿ ಕುತ್ತಿಗೆ ಕೊಯ್ದು ಕೊಲೆಗೈದ ಸ್ಥಿಯಿಯಲ್ಲಿ ಶವ ಪತ್ತೆಯಾಗಿದೆ.

ಮಂಗಳೂರು, ಎ.12: ಬೈಕಂಪಾಡಿ ಕೈಗಾರಿಕಾ ಪ್ರಾಂಗಣದ ಬಳಿ ಹಾದುಹೋಗುವ ರೈಲ್ವೇ ಹಳಿಯಲ್ಲಿ ಕುತ್ತಿಗೆ ಕೊಯ್ದು ಕೊಲೆಗೈದ ಸ್ಥಿಯಿಯಲ್ಲಿ ಶವ ಪತ್ತೆಯಾಗಿದೆ.

ಮೃತನನ್ನು ಬಾಗಲಕೋಟೆ ಮೂಲದ ಕೂಲಿ ಕಾರ್ಮಿಕ ಎಲ್ಲಪ್ಪ (47) ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಜಗಳ ನಡೆದು ಕೊಲೆಗೈದಿರುವ ಸಾಧ್ಯತೆಯಿದೆ.

ಸೋಮವಾರ ಬೆಳಗ್ಗೆ ಕೆಲಸಕ್ಕೆ ತೆರಳುವ ಕಾರ್ಮಿಕರು ಶವ ಪತ್ತೆಯಾಗಿದ್ದನ್ನು ತಿಳಿದು ಪಣಂಬೂರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪಣಂಬೂರು ಪೊಲೀಸರು ಸ್ಥಳಕ್ಕಾಗಮಿಸಿ, ಶ್ವಾನದಳ ಕರೆಸಿ ಪರಿಶೀಲನೆ ನಡೆಸಿದ್ದಾರೆ.

ಬೈಕಂಪಾಡಿ ಸುತ್ತಮುತ್ತ ಉತ್ತರ ಕರ್ನಾಟಕ ಮೂಲದ ಕೂಲಿ ಕಾರ್ಮಿಕರು ಟೆಂಟ್ ಹಾಕ್ಕೊಂಡು ಬೀಡು ಬಿಟ್ಟಿದ್ದು, ಬೆಳಗಾಗುತ್ತಿದ್ದಂತೆ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಕೆಲವು ಮನೆಗಳಲ್ಲಿ ಕುಟುಂಬ ಸಮೇತರಾಗಿದ್ದರೆ, ಇನ್ನು ಕೆಲವು ಮನೆಗಳಲ್ಲಿ ಒಬ್ಬಂಟಿಯಾಗಿ ಅಥವಾ ಗೆಳೆಯರು ಸೇರಿಕೊಂಡು ಸಣ್ಣ ಮನೆ ಮಾಡಿಕೊಂಡು ವಾಸವಿದ್ದಾರೆ. ಎಲ್ಲಪ್ಪನನ್ನು ಜೊತೆಗಿದ್ದವರೇ ಸೇರಿ ಕೊಲೆಗೈದಿರುವ ಸಾಧ್ಯತೆಯಿದೆ. 

Mangalore Labourer found murdered at Baikampady near the railway track. Panambur police are now investigating the case.