ಬ್ರೇಕಿಂಗ್ ನ್ಯೂಸ್
29-04-21 04:25 pm Headline Karnataka News Network ಕ್ರೈಂ
ಬೆಂಗಳೂರು, ಎ.29: ಪ್ರೀತಿ, ಪ್ರೇಮ, ಕಾಮಕ್ಕೆ ಅಡ್ಡ ಬಂದರೆ, ಕೆಲವೊಮ್ಮೆ ಏನೆಲ್ಲಾ ಅನಾಹುತಗಳಾಗುತ್ತೆ, ಸಂಬಂಧಗಳನ್ನೇ ನೋಡದೆ ದುರಂತವನ್ನೇ ತಂದುಕೊಳ್ಳುತ್ತಾರೆ ಅನ್ನೋದಕ್ಕೆ ಈ ಘಟನೆ ನಿದರ್ಶನ. ಹುಬ್ಬಳ್ಳಿ ಪೊಲೀಸರು ಶಾನ್ಯಾ ಕಾಟ್ವೆ ಎನ್ನುವ ಕನ್ನಡದ ಚಿತ್ರನಟಿಯನ್ನು ಬಂಧಿಸಿದ್ದು ಸೋದರನ ಕೊಲೆಗೆ ಆಕೆಯೇ ಸಂಚು ನಡೆಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ.

ಎ.9ರಂದು ರಾಕೇಶ್ ಕಾಟ್ವೆ ಎಂಬ 32 ವರ್ಷದ ಯುವಕನನ್ನು ಕೊಲೆಗೈದು ಹುಬ್ಬಳ್ಳಿ ಹೊರವಲಯದ ದೇವರಗುಡಿಹಾಳ್ ಎಂಬಲ್ಲಿ ದೇಹವನ್ನು ತುಂಡರಿಸಿ ಎಸೆಯಲಾಗಿತ್ತು. ಭೀಭತ್ಸವಾಗಿ ಕೊಲೆಯಾದ ವಿಚಾರ ತಿಳಿಯುತ್ತಲೇ ತನಿಖೆ ಆರಂಭಿಸಿದ ಹುಬ್ಬಳ್ಳಿ ಗ್ರಾಮಾಂತರ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದರು. ನಿಯಾಜ್ ಅಹ್ಮದ್ ಕಾಟಿಗೇರ್ (21), ತೌಸಿಫ್ ಚನ್ನಾಪುರ್(21), ಅಲ್ತಾಫ್ ಮುಲ್ಲಾ (24) ಮತ್ತು ಅಮಾನ್ ಗಿರಾಣಿವಾಲೆ(19) ಎಂಬ ನಾಲ್ವರು ಯುವಕರು ಬಂಧಿತರು.
ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಕೊಲೆಯ ನೈಜ ಕತೆ ಹೊರಬಿದ್ದಿದೆ. ಚಿತ್ರನಟಿಯಾಗಿದ್ದ ಶಾನ್ಯಾ ಕಾಟ್ವೆ ಮತ್ತು ಆರೋಪಿಗಳಲ್ಲಿ ಒಬ್ಬನಾದ ನಿಯಾಜ್ ಅಹ್ಮದ್ ನಡುವೆ ಲವ್ ಇತ್ತು. ತಂಗಿಯ ಸಂಬಂಧಕ್ಕೆ ಸೋದರ ಅಡ್ಡ ಬಂದಿದ್ದಲ್ಲದೆ, ಆರೋಪಿ ನಿಯಾಜ್ ಗೆ ವಾರ್ನ್ ಮಾಡಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ತನ್ನ ಗೆಳೆಯರು ಮತ್ತು ಶಾನ್ಯಾ ಜೊತೆ ಸೇರಿ ರಾಕೇಶ್ ನನ್ನು ಮುಗಿಸಲು ನಿಯಾಜ್ ಪ್ಲಾನ್ ಹಾಕಿದ್ದ.

ಎಪ್ರಿಲ್ 9ರಂದು ಹುಬ್ಬಳ್ಳಿಯ ತನ್ನ ಮನೆಯಲ್ಲಿದ್ದ ರಾಕೇಶ್ ನನ್ನು ಉಪಾಯದಿಂದ ಕರೆದೊಯ್ದಿದ್ದ ಗೆಳೆಯರು ಕೊಲೆಗೈದು ದೇಹದ ಭಾಗಗಳನ್ನು ಸಿಗಿದು ಹಲವೆಡೆ ಬಿಸಾಕಿದ್ದರು. ಹುಬ್ಬಳ್ಳಿ- ಗದಗ ರಸ್ತೆಯಲ್ಲೂ ದೇಹದ ಭಾಗಗಳು ಪತ್ತೆಯಾಗಿದ್ದವು. ಆನಂತರ ದೇವರ ಗುಡಿಹಾಳದ ಕಾಡಿನಲ್ಲೂ ಕೈ, ಕಾಲುಗಳ ತುಂಡುಗಳು ಪತ್ತೆಯಾಗಿದ್ದವು. ಇದೇ ಸಂದರ್ಭದಲ್ಲಿ ಶಾನ್ಯಾ ಕಾಟ್ವೆ ತನ್ನ ಚಿತ್ರದ ಶೂಟಿಂಗ್ ಕಾರಣಕ್ಕೆ ಹುಬ್ಬಳ್ಳಿಗೆ ಬಂದಿದ್ದಳು. ಒಂದು ಘಂಟೆಯ ಕತೆ ಎನ್ನುವ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಕಾರಣ ಹುಬ್ಬಳ್ಳಿಯಲ್ಲೇ ನೆಲೆಸಿದ್ದಳು. ಇದೇ ಸಂದರ್ಭದಲ್ಲಿ ಸೋದರನ ಕೊಲೆಗೆ ಸ್ಕೆಚ್ ಹಾಕಿದ್ದಾಗಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಮಾಡೆಲ್ ಆಗಿದ್ದ ಶಾನ್ಯಾ 2018ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಪಡೆದಿದ್ದಳು. ಇದಂ ಪ್ರೇಮಂ ಜೀವನಂ ಎನ್ನುವ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಳು. ಈಗ ಒಂದು ಘಂಟೆಯ ಕತೆ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದು, ಅಜಯ್ ರಾಜ್ ಮತ್ತು ಸ್ವಾತಿ ಶರ್ಮಾ ಜೊತೆ ಪಾತ್ರ ಹಂಚಿಕೊಂಡಿದ್ದಳು. ಈಗ ಸೋದರನನ್ನೇ ಕೊಲ್ಲಲು ಸಂಚು ಹೂಡಿದ್ದ ಆರೋಪದಲ್ಲಿ ಚಿತ್ರನಟಿ ಜೈಲು ಕಂಬಿ ಎಣಿಸುತ್ತಿದ್ದಾಳೆ.
Promising Kannada actress Shanaya Katwe and her live-in partner Niyaz allegedly killed her brother and disposed of the body in a jungle here, for objecting to their relationship, police said. The young actress was allegedly in a relationship with a small-time realtor, which her brother opposed, Dharwad Superintendent of Police P Krishnakant said.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
06-02-26 10:56 pm
Mangalore Correspondent
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
D k Shivakumar, Mangalore: "ಯತೀಂದ್ರ ಅವರೇ ನಮ್ಮ...
06-02-26 03:09 pm
ನಿರ್ಲಕ್ಷ್ಯದಿಂದ ಹೆದ್ದಾರಿಗೆ ಬೈಕ್ ನುಗ್ಗಿಸಿದ ತ್ರಿ...
06-02-26 01:55 pm
06-02-26 06:36 pm
HK News Desk
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm