ಬ್ರೇಕಿಂಗ್ ನ್ಯೂಸ್
29-04-21 04:25 pm Headline Karnataka News Network ಕ್ರೈಂ
ಬೆಂಗಳೂರು, ಎ.29: ಪ್ರೀತಿ, ಪ್ರೇಮ, ಕಾಮಕ್ಕೆ ಅಡ್ಡ ಬಂದರೆ, ಕೆಲವೊಮ್ಮೆ ಏನೆಲ್ಲಾ ಅನಾಹುತಗಳಾಗುತ್ತೆ, ಸಂಬಂಧಗಳನ್ನೇ ನೋಡದೆ ದುರಂತವನ್ನೇ ತಂದುಕೊಳ್ಳುತ್ತಾರೆ ಅನ್ನೋದಕ್ಕೆ ಈ ಘಟನೆ ನಿದರ್ಶನ. ಹುಬ್ಬಳ್ಳಿ ಪೊಲೀಸರು ಶಾನ್ಯಾ ಕಾಟ್ವೆ ಎನ್ನುವ ಕನ್ನಡದ ಚಿತ್ರನಟಿಯನ್ನು ಬಂಧಿಸಿದ್ದು ಸೋದರನ ಕೊಲೆಗೆ ಆಕೆಯೇ ಸಂಚು ನಡೆಸಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಎ.9ರಂದು ರಾಕೇಶ್ ಕಾಟ್ವೆ ಎಂಬ 32 ವರ್ಷದ ಯುವಕನನ್ನು ಕೊಲೆಗೈದು ಹುಬ್ಬಳ್ಳಿ ಹೊರವಲಯದ ದೇವರಗುಡಿಹಾಳ್ ಎಂಬಲ್ಲಿ ದೇಹವನ್ನು ತುಂಡರಿಸಿ ಎಸೆಯಲಾಗಿತ್ತು. ಭೀಭತ್ಸವಾಗಿ ಕೊಲೆಯಾದ ವಿಚಾರ ತಿಳಿಯುತ್ತಲೇ ತನಿಖೆ ಆರಂಭಿಸಿದ ಹುಬ್ಬಳ್ಳಿ ಗ್ರಾಮಾಂತರ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದರು. ನಿಯಾಜ್ ಅಹ್ಮದ್ ಕಾಟಿಗೇರ್ (21), ತೌಸಿಫ್ ಚನ್ನಾಪುರ್(21), ಅಲ್ತಾಫ್ ಮುಲ್ಲಾ (24) ಮತ್ತು ಅಮಾನ್ ಗಿರಾಣಿವಾಲೆ(19) ಎಂಬ ನಾಲ್ವರು ಯುವಕರು ಬಂಧಿತರು.
ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಕೊಲೆಯ ನೈಜ ಕತೆ ಹೊರಬಿದ್ದಿದೆ. ಚಿತ್ರನಟಿಯಾಗಿದ್ದ ಶಾನ್ಯಾ ಕಾಟ್ವೆ ಮತ್ತು ಆರೋಪಿಗಳಲ್ಲಿ ಒಬ್ಬನಾದ ನಿಯಾಜ್ ಅಹ್ಮದ್ ನಡುವೆ ಲವ್ ಇತ್ತು. ತಂಗಿಯ ಸಂಬಂಧಕ್ಕೆ ಸೋದರ ಅಡ್ಡ ಬಂದಿದ್ದಲ್ಲದೆ, ಆರೋಪಿ ನಿಯಾಜ್ ಗೆ ವಾರ್ನ್ ಮಾಡಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ತನ್ನ ಗೆಳೆಯರು ಮತ್ತು ಶಾನ್ಯಾ ಜೊತೆ ಸೇರಿ ರಾಕೇಶ್ ನನ್ನು ಮುಗಿಸಲು ನಿಯಾಜ್ ಪ್ಲಾನ್ ಹಾಕಿದ್ದ.
ಎಪ್ರಿಲ್ 9ರಂದು ಹುಬ್ಬಳ್ಳಿಯ ತನ್ನ ಮನೆಯಲ್ಲಿದ್ದ ರಾಕೇಶ್ ನನ್ನು ಉಪಾಯದಿಂದ ಕರೆದೊಯ್ದಿದ್ದ ಗೆಳೆಯರು ಕೊಲೆಗೈದು ದೇಹದ ಭಾಗಗಳನ್ನು ಸಿಗಿದು ಹಲವೆಡೆ ಬಿಸಾಕಿದ್ದರು. ಹುಬ್ಬಳ್ಳಿ- ಗದಗ ರಸ್ತೆಯಲ್ಲೂ ದೇಹದ ಭಾಗಗಳು ಪತ್ತೆಯಾಗಿದ್ದವು. ಆನಂತರ ದೇವರ ಗುಡಿಹಾಳದ ಕಾಡಿನಲ್ಲೂ ಕೈ, ಕಾಲುಗಳ ತುಂಡುಗಳು ಪತ್ತೆಯಾಗಿದ್ದವು. ಇದೇ ಸಂದರ್ಭದಲ್ಲಿ ಶಾನ್ಯಾ ಕಾಟ್ವೆ ತನ್ನ ಚಿತ್ರದ ಶೂಟಿಂಗ್ ಕಾರಣಕ್ಕೆ ಹುಬ್ಬಳ್ಳಿಗೆ ಬಂದಿದ್ದಳು. ಒಂದು ಘಂಟೆಯ ಕತೆ ಎನ್ನುವ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಕಾರಣ ಹುಬ್ಬಳ್ಳಿಯಲ್ಲೇ ನೆಲೆಸಿದ್ದಳು. ಇದೇ ಸಂದರ್ಭದಲ್ಲಿ ಸೋದರನ ಕೊಲೆಗೆ ಸ್ಕೆಚ್ ಹಾಕಿದ್ದಾಗಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಮಾಡೆಲ್ ಆಗಿದ್ದ ಶಾನ್ಯಾ 2018ರಲ್ಲಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಪಡೆದಿದ್ದಳು. ಇದಂ ಪ್ರೇಮಂ ಜೀವನಂ ಎನ್ನುವ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಳು. ಈಗ ಒಂದು ಘಂಟೆಯ ಕತೆ ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದು, ಅಜಯ್ ರಾಜ್ ಮತ್ತು ಸ್ವಾತಿ ಶರ್ಮಾ ಜೊತೆ ಪಾತ್ರ ಹಂಚಿಕೊಂಡಿದ್ದಳು. ಈಗ ಸೋದರನನ್ನೇ ಕೊಲ್ಲಲು ಸಂಚು ಹೂಡಿದ್ದ ಆರೋಪದಲ್ಲಿ ಚಿತ್ರನಟಿ ಜೈಲು ಕಂಬಿ ಎಣಿಸುತ್ತಿದ್ದಾಳೆ.
Promising Kannada actress Shanaya Katwe and her live-in partner Niyaz allegedly killed her brother and disposed of the body in a jungle here, for objecting to their relationship, police said. The young actress was allegedly in a relationship with a small-time realtor, which her brother opposed, Dharwad Superintendent of Police P Krishnakant said.
13-06-25 08:47 pm
Bangalore Correspondent
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
ಕಾರವಾರ ಜಿಲ್ಲಾ ಆಸ್ಪತ್ರೆಗೆ ನುಗ್ಗಿದ್ದ ಚರಂಡಿ ನೀರು...
12-06-25 11:07 pm
Hassan, Heart Attack, Death: ಹಾಸನ ; ಎರಡು ತಿಂಗ...
11-06-25 09:35 pm
No Cabinet Reshuffle, Karnataka: ಸದ್ಯಕ್ಕಿಲ್ಲ...
11-06-25 05:23 pm
14-06-25 12:00 pm
HK News Desk
Kasaragod Deputy Tahsildar Suspended: ವಿಮಾನ ದ...
13-06-25 11:09 pm
Air India Plane Crash, Black Box Recovered: ವ...
13-06-25 10:42 pm
ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್...
13-06-25 03:08 pm
ಇರಾನ್ ಮೇಲೆ ಇಸ್ರೇಲ್ ಡೆಡ್ಲಿ ಅಟ್ಯಾಕ್ ; ಅಣ್ವಸ್ತ್ರ...
13-06-25 02:14 pm
14-06-25 02:49 pm
Mangalore Correspondent
NIA Mangalore, Suhas Shetty Murder; ಸುಹಾಸ್ ಶೆ...
14-06-25 12:11 pm
Ullal Accident, Mangalore: ಉಳ್ಳಾಲ ನಗರಸಭೆ ನಿರ್...
13-06-25 09:36 pm
Mangalore, Former MLA Moinuddin Bava, NMPT: 2...
13-06-25 06:47 pm
Indias First Special Action Force, Mangalore:...
13-06-25 03:46 pm
13-06-25 07:30 pm
Mangalore Correspondent
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm
Vitla Police, SI Kaushik: ಜುಗಾರಿ ಅಡ್ಡೆಗೆ ದಾಳಿ...
11-06-25 07:26 pm
ಅಡಿಕೆ ಖರೀದಿಸಿ 50ಕ್ಕೂ ಹೆಚ್ಚು ರೈತರಿಗೆ ಹಣ ಕೊಡದೆ...
11-06-25 02:03 pm