ಕೈಕಂಬ ; ಮಾಸ್ಕ್ ಹಾಕದೆ ಪೊಲೀಸರಿಗೆ ಆವಾಜ್ ; ಕರ್ತವ್ಯಕ್ಕೆ ಅಡ್ಧಿಪಡಿಸಿದ ಆರೋಪಿ ಬಂಧನ

07-05-21 12:31 pm       Mangalore Correspondent   ಕ್ರೈಂ

ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸರನ್ನು ನಿಂದಿಸಿದ ಬೈಕ್ ಸವಾರನನ್ನು ಬಜ್ಪೆ ಠಾಣೆ ಪೊಲೀಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. 

ಮಂಗಳೂರು, ಮೇ 07 : ಮಾಸ್ಕ್ ಮತ್ತು ಹೆಲ್ಮೆಟ್ ಧರಿಸದೆ ಬಂದ ಬೈಕ್ ಸವಾರನನ್ನು ಬಜ್ಪೆ ಠಾಣೆ ಪೊಲೀಸರು ಪ್ರಶ್ನಿಸಿದ್ದು ಈ ವೇಳೆ ಆತ ಪೊಲೀಸರನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ. 

ಬಡಗಗುಳಿಪಾಡಿ ಗ್ರಾಮದ ಕೈಕಂಬ ಜಂಕ್ಷನ್ ನಲ್ಲಿ ಘಟನೆ ನಡೆದಿದ್ದು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬಂದಿ ತಡೆದಾಗ ಆತ ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ದಿಪಡಿಸಿರುವ ಬಗ್ಗೆ ದೂರು ದಾಖಲಾಗಿದೆ. 

ಬಡಗುಳಿಪಾಡಿ ಗ್ರಾಮದ ಸೂರಲ್ಪಾಡಿಯ ಅಹಮ್ಮದ್ ಹಾಲಿಕ್ ಯಾನೆ ಅಬ್ದುಲ್ ಹಾಲಿಕ್ (24) ಆರೋಪಿಯಾಗಿದ್ದು , ಆತನ ವಿರುದ್ದ ಬಜಪೆ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಸಾಂಕ್ರಮಿಕ ರೋಗಗಳ ಅಧ್ಯಾದೇಶ-2020 ಉಲ್ಲಂಘನೆ ಮತ್ತು ವಿಪತ್ತು ಕಾರ್ಯ ನಿರ್ವಹಣ ಕಾಯ್ದೆ- 2005 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

Mangalore youth arrested for breaking covid rules and arguing with police in Kaikamba. The arrested has been identified as Abdul (24).