ಕುಡಿದ ಮತ್ತಿನಲ್ಲಿ ಜಗಳ ; ಯುವತಿ ವಿಚಾರದಲ್ಲಿ ಸ್ನೇಹಿತನಿಂದಲೇ ಕೊಲೆ !

24-05-21 09:27 pm       Udupi Correspondent   ಕ್ರೈಂ

ಕುಡಿದ ಮತ್ತಿನಲ್ಲಿ ಇಬ್ಬರು ಜಗಳಕ್ಕಿಳಿದು ಓರ್ವ ಹತ್ಯೆಯಾದ ಘಟನೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮುಕ್ಕಾಯಿ ಎಂಬಲ್ಲಿ ನಡೆದಿದೆ.

ಕಾರ್ಕಳ, ಮೇ 24: ಕುಡಿದ ಮತ್ತಿನಲ್ಲಿ ಇಬ್ಬರು ಜಗಳಕ್ಕಿಳಿದು ಓರ್ವ ಹತ್ಯೆಯಾದ ಘಟನೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮುಕ್ಕಾಯಿ ಎಂಬಲ್ಲಿ ನಡೆದಿದೆ.

ಮಿಯ್ಯಾರು ಗ್ರಾಮದ ಬೋರ್ಕಟ್ಟೆ ನಿವಾಸಿ ಹರೀಶ್‌ ಪೂಜಾರಿ (42) ಮೃತ ವ್ಯಕ್ತಿಯಾಗಿದ್ದು, ಗುರುವ ಎಂಬಾತ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ 7 ತಿಂಗಳಿನಿಂದ ಮಾಳದ ರೀತಾ ಎಂಬಾಕೆಯ ಮನೆಯಲ್ಲಿ ಹರೀಶ್‌ ಪೂಜಾರಿ ಹಾಗೂ ಗುರುವ ಒಟ್ಟಿಗೆ ಇದ್ದರು. ಇಬ್ಬರೂ ವಿವಾಹಿತರಾಗಿದ್ದರೂ ವಿವಾಹಿತ ಮಹಿಳೆ ರೀತಾಳೊಂದಿಗೆ ಜೀವನ ನಡೆಸುತ್ತಿದ್ದರು. ಹರೀಶ್‌ ವಿದ್ಯುತ್‌ ಕಂಬ ಹಾಕುವ ಕೆಲಸ ಮಾಡಿಕೊಂಡಿದ್ದರೆ, ರೀತಾ ಹಾಗೂ ಗುರುವ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ರವಿವಾರ ರಾತ್ರಿ ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಗುರುವ ಮಾರಕಾಯುಧದಿಂದ ಹರೀಶ್‌ ಅವರನ್ನು ತಿವಿದು ಕೊಲೆ ಮಾಡಿರುವುದಾಗಿ ದೂರಲಾಗಿದೆ.

ಘಟನಾ ಸ್ಥಳಕ್ಕೆ ಕಾರ್ಕಳ ಡಿವೈಎಸ್‌ಪಿ ಭರತ್‌ ರೆಡ್ಡಿ, ವೃತ್ತ ನಿರೀಕ್ಷಕ ಸಂಪತ್‌ ಕುಮಾರ್‌, ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ಐ ತೇಜಸ್ವಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

A man was found murdered at a house in Mala village of Karkala taluk on Sunday May 23. The deceased is identified as Harish Poojary (42), from Miyar in Borkatte. Guruva is accused in the case