ಅಡ್ಯಾರ್ ನಲ್ಲಿ ಇಸ್ಪೀಟ್ ಅಡ್ಡೆಗೆ ಪೊಲೀಸ್ ದಾಳಿ ; ಹತ್ತು ಮಂದಿ ಸೆರೆ

27-05-21 10:49 pm       Mangaluru Correspondent   ಕ್ರೈಂ

ಅಡ್ಯಾರ್ ಗ್ರಾಮದ ಸೋಮನಾಥ ಕಟ್ಟೆ ಎಂಬಲ್ಲಿನ ವಾರಿಧಿ ಎಂಬ ಲಾಡ್ಜ್ ನಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದು ಹತ್ತು ಮಂದಿಯನ್ನು ಬಂಧಿಸಿದ್ದಾರೆ. ‌

ಮಂಗಳೂರು, ಮೇ 27: ನಗರದ ಹೊರವಲಯದ ಅಡ್ಯಾರ್ ಗ್ರಾಮದ ಸೋಮನಾಥ ಕಟ್ಟೆ ಎಂಬಲ್ಲಿನ ವಾರಿಧಿ ಎಂಬ ಲಾಡ್ಜ್ ನಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದು ಹತ್ತು ಮಂದಿಯನ್ನು ಬಂಧಿಸಿದ್ದಾರೆ. ‌

ಲಾಡ್ಜ್ ನ 105 ಸಂಖ್ಯೆಯ ಕೊಠಡಿಯಲ್ಲಿ ಹಣವನ್ನು ಪಣಕ್ಕಿಟ್ಟು ಅದೃಷ್ಟದ ಮೇಲೆ ಇಸ್ಪೀಟ್ ಆಟ ಆಡುತ್ತಿದ್ದರು. ಬಂಟ್ವಾಳ ತಾಲೂಕಿನ ಉಳಿಪದವು ನಿವಾಸಿ ಶ್ರೀಕಾಂತ್ ಶೆಟ್ಟಿ ಎಂಬವರಿಗೆ ಸೇರಿದ ಲಾಡ್ಜ್ ಇದಾಗಿದ್ದು ಈ ಬಗ್ಗೆ ಖಚಿತ ಮಾಹಿತಿ ಪಡೆದು ಮಂಗಳೂರು ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದರು. ‌

ಶ್ರೀಕಾಂತ್ ಶೆಟ್ಟಿ, ಅರುಣ ಬೆಳ್ಚಡ, ರೋಹಿತ್ ಪೂಜಾರಿ, ಚಂದ್ರಶೇಖರ, ಜಯಂತ ಗಾಣಿಗ, ರಾಹುಲ್, ಶರತ್, ನವೀನ್, ಪ್ರೀತಮ್, ಶೈಲೇಶ್ ಬಂಧಿತರಾಗಿದ್ದು ಲಾಕ್ಡೌನ್ ಉಲ್ಲಂಘಿಸಿದ ಆರೋಪದಲ್ಲಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇವರಿಂದ 9500 ನಗದು ಹಣ, ಎರಡು ಬೈಕ್, ಒಂದು ಆಲ್ಟೋ ಕಾರನ್ನು ವಶಕ್ಕೆ ಪಡೆಯಲಾಗಿದೆ.

Mangalore City Police Swooped Down on an illegal Gambling den in Adyar and arrest 10 persons involved.