ಬ್ರೇಕಿಂಗ್ ನ್ಯೂಸ್
17-06-21 09:38 pm Mangaluru Correspondent ಕ್ರೈಂ
ಮಂಗಳೂರು, ಜೂನ್ 17: ನಗರದ ಕೊಡಿಯಾಲಬೈಲ್ ನಿವಾಸಿ ಮಹಿಳೆಯೊಬ್ಬರು ಭದ್ರಾವತಿಗೆ ತೆರಳಿ ವಾಹನದಲ್ಲಿ ಹಿಂದಿರುಗಿ ಬರುತ್ತಿದ್ದ ಸಂದರ್ಭದಲ್ಲಿ ಚಿನ್ನಾಭರಣ ಕಳೆದುಕೊಂಡಿದ್ದರು. ಚಿನ್ನ ಕದ್ದು ಪರಾರಿಯಾಗಿದ್ದ ಕಳ್ಳನನ್ನು ಮಂಗಳೂರಿನ ಕದ್ರಿ ಪೊಲೀಸರು ಭಾರೀ ಸಾಹಸದಿಂದ ಬಂಧಿಸಿದ್ದಾರೆ.
ಮೌರಿಷ್ಕಾ ಪಾರ್ಕ್ ನಿವಾಸಿಯಾಗಿರುವ ಮಹಿಳೆ ವಸಂತಾ ಎಂಬವರು ಕಳೆದ ಮಾರ್ಚ್ 10ರಂದು ಭದ್ರಾವತಿಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಚಿನ್ನ ಕಳಕೊಂಡಿದ್ದರು. ಚಿನ್ನವನ್ನು ಕಳ್ಳನೊಬ್ಬ ಎಗರಿಸಿದ್ದ ಬಗ್ಗೆ ಮಹಿಳೆ ಕದ್ರಿ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನುಹತ್ತಿದ ಕದ್ರಿ ಠಾಣೆಯ ಅಪರಾಧ ವಿಭಾಗದ ಪೊಲೀಸರು, ವಾಹನದ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿದ್ದಾರೆ.
ಮಹಿಳೆ ಮಂಗಳೂರಿಗೆ ಬೇಗ ಮುಟ್ಟುವುದೆಂದು ಶಿವಮೊಗ್ಗದಿಂದ ಕ್ರೂಸ್ ವಾಹನ ಒಂದರಲ್ಲಿ ಬಂದಿದ್ದರು. ಅದರಲ್ಲಿ ಬೇರೆ ಪ್ರಯಾಣಿಕರು ಕೂಡ ಇದ್ದು, ಮಹಿಳೆಯ ಪರ್ಸ್ ನಲ್ಲಿದ್ದ ಚಿನ್ನವನ್ನು ಒಬ್ಬಾತ ಎಗರಿಸಿದ್ದ. ಇದನ್ನು ತುಂಬ ಪ್ರಯಾಸದಿಂದ ಪೊಲೀಸರು ಪತ್ತೆಹಚ್ಚಿದ್ದು, ಮೂರು ತಿಂಗಳ ಬಳಿಕ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ಭದ್ರಾವತಿ ಮೂಲದ ಪಿ.ಜ್ಞಾನರತ್ನಂ(45) ಎಂದು ಗುರುತಿಸಲಾಗಿದೆ. ಆತ 2.5 ಲಕ್ಷ ಮೌಲ್ಯದ 53 ಗ್ರಾಮ್ ಚಿನ್ನವನ್ನು ದಾಂಡೇಲಿ ಮಣಪ್ಪುರಂ ಫೈನಾನ್ಸ್ , ಹುಬ್ಬಳ್ಳಿಯ ಮುತ್ತೂಟ್ ಫೈನಾನ್ಸ್ ಮತ್ತು ಭದ್ರಾವತಿಯ ಐಐಎಫ್ಎಲ್ ಫೈನಾನ್ಸ್ ನಲ್ಲಿ ಅಡವಿರಿಸಿ ಹಣ ಪಡೆದಿದ್ದ. ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಪತ್ತೆ ಕಾರ್ಯದಲ್ಲಿ ಕದ್ರಿ ಪೊಲೀಸ್ ಠಾಣೆಯ ಕ್ರೈಂ ವಿಭಾಗದ ಪಿಎಸ್ಐ ಜಗನ್ನಾಥ್ ಕೆ., ಎಎಸ್ಐ ಸಂತೋಷ್ ಪಡೀಲ್, ಸಿಬಂದಿಗಳಾದ ಉಮೇಶ್ ಕೊಟ್ಟಾರಿ, ಗಿರೀಶ್ ಜೋಗಿ, ರಾಘವೇಂದ್ರ ಮತ್ತು ನಾಗರಾಜ ಭಾಗವಹಿಸಿದ್ದರು.
Mangalore Kadri Police nab accused in Gold heist recover 53 grams missing gold. The Crime Team of Kadri Station has succeeded in arresting the accused at Dandeli. The accused had fleed with a woman's gold two months ago while the woman was arriving at Mangalore from Shivamgga in a Cruise passenger van.
25-04-24 02:19 pm
HK News Desk
Mallikarjun Kharge speech at Kalaburgi: ಮತ ಹಾ...
24-04-24 11:14 pm
ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಸರಿಯಲ್ಲ ; ಆರೋಪಿ...
24-04-24 07:10 pm
Priyanka Gandhi, PM Modi, Chitradurga: ದೊಡ್ಡ...
23-04-24 10:46 pm
Eshwarappa slams Vijayendra, BJP: ಬಿಜೆಪಿ ಬಗ್ಗ...
23-04-24 09:24 pm
25-04-24 03:49 pm
HK News Desk
Groom electrocuted in Rajasthan: ರೆಸಾರ್ಟ್ ನಲ್...
24-04-24 05:01 pm
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
Surya Tilak, Ram Lallas forehead in Ayodhya:...
17-04-24 08:42 pm
25-04-24 02:42 pm
Mangalore Correspondent
Vishwa Hindu Parishad, Vhp, Mangalore: ರಾಜ್ಯದ...
25-04-24 12:59 pm
Subramanya Dhareshwara: ಯಕ್ಷಗಾನ ರಂಗದಲ್ಲಿ ಕ್ರಾ...
25-04-24 11:52 am
Brijesh Chowta, Mangalore: ಕಾಂಗ್ರೆಸಿಗೆ ಮತ ನೀಡ...
24-04-24 10:39 pm
Mangalore Brijesh Chowta, George Fernandes: ಕ...
24-04-24 10:00 pm
25-04-24 03:33 pm
Bangalore Correspondent
Gang raped in Bengaluru: ಬೆಂಗಳೂರಿನಲ್ಲಿ ಯುವತಿ...
25-04-24 12:19 pm
Glide touist bus, Mangalore, crime: ಬೆಂಗಳೂರು...
24-04-24 10:48 pm
ಗಿಫ್ಟ್ ವಿಚಾರದಲ್ಲಿ ಕಿರಿಕ್ ; ಅಣ್ಣ ತಂಗಿಯ ಮದುವೆಗೆ...
24-04-24 05:39 pm
Trading scam, Online fraud, Crime: ದುಪ್ಪಟ್ಟು...
24-04-24 03:41 pm