ಬ್ರೇಕಿಂಗ್ ನ್ಯೂಸ್
25-06-21 02:43 pm Headline Karnataka News Network ಕ್ರೈಂ
ಬೆಂಗಳೂರು, ಜೂನ್ 25: ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಘಟನೆ ನಡೆದ 24 ಗಂಟೆಯೊಳಗೆ ಪ್ರಮುಖ ಆರೋಪಿಗಳನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಕೊಲೆ ಸಂಚಿನಲ್ಲಿ ಪಾಲ್ಗೊಂಡಿದ್ದ ನಾಲ್ವರನ್ನು ನಿನ್ನೆಯೇ ವಶಕ್ಕೆ ಪಡೆಯಲಾಗಿತ್ತು. ತಪ್ಪಿಸಿಕೊಂಡಿದ್ದ ಇನ್ನಿಬ್ಬರನ್ನೂ ಪೊಲೀಸರು ಸೆರೆ ಹಿಡಿದಿದ್ದಾರೆ.
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದಲ್ಲಿ ಜೊತೆಗಿದ್ದ ನಾಲ್ವರು ಭಾಗಿಯಾಗಿದ್ದರು ಎನ್ನುವ ಮಾಹಿತಿ ಇತ್ತು. ಅದರಂತೆ, ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಪೀಟರ್, ಸೂರ್ಯ, ಸ್ಟೀಫನ್ ಮತ್ತು ಇನ್ನೂ 3 ಮಂದಿಯನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.



ಸುಮನಹಳ್ಳಿ ಶನಿ ಮಹಾತ್ಮ ದೇಗುಲ ಬಳಿ ಅಡಗಿಕೊಂಡಿದ್ದ ಮೂವರನ್ನು ಶರಣಾಗಲು ಪೊಲೀಸರು ಸೂಚಿಸಿದ್ದರು. ಆದರೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಆರೋಪಿಗಳ ಕಾಲಿಗೆ ಇನ್ಸ್ ಪೆಕ್ಟರ್ ಶಿವಸ್ವಾಮಿ ಗುಂಡು ಹಾರಿಸಿ, ನಂತರ ಬಂಧಿಸಿದ್ದಾರೆ.
ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರೇಖಾ ಸಂಬಂಧಿ ಸಂಜಯ್ ನೀಡಿದ ದೂರಿನ ಮೇರೆಗೆ ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ಸೂರ್ಯ ಎ1 ಆರೋಪಿ ಆಗಿದ್ದು, ಪೀಟರ್ ಎ2 ಎಂದು ಕಾಟನ್ ಪೇಟೆ ಪೊಲೀಸರು ಎಫ್ಐಆರ್ ನಲ್ಲಿ ಗುರುತಿಸಿದ್ದಾರೆ.



ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ಅಗಿದ್ದ ರೇಖಾ ಕದಿರೇಶ್ ಫ್ಲವರ್ ಗಾರ್ಡನ್ನಲ್ಲಿ ವಾಸವಾಗಿದ್ದರು. ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಬಡವರಿಗೆ ಅನ್ನದಾನ ಮಾಡುತ್ತಿದ್ದರು. ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಛಲವಾದಿ ಪಾಳ್ಯದಲ್ಲಿರುವ ಕಚೇರಿಗೆ ರೇಖಾ ಬಂದಿದ್ದು ಅನಾಥರಿಗೆ ಉಪಾಹಾರ ನೀಡಿದ್ದರು. ಸ್ವಲ್ಪ ಹೊತ್ತಿನಲ್ಲಿ ಆಗಂತಕರು ಕಚೇರಿಯಿಂದ ಹೊರಗೆ ಕರೆಸಿಕೊಂಡಿದ್ದರು. ಇದಕ್ಕೂ ಮುನ್ನ ಕಚೇರಿಯ ಎರಡು ಸಿಸಿಟಿವಿ ಕ್ಯಾಮರಾಗಳನ್ನು ಮೇಲಕ್ಕೆ ತಿರುಗಿಸಲಾಗಿತ್ತು. ಹೊರಗೆ ಬಂದು ಮಾತನಾಡಿಕೊಂಡಿದ್ದ ರೇಖಾ ಕದಿರೇಶ್ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಗಾಯಗೊಂಡ ರೇಖಾ ಅವರನ್ನು ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಪೀಟರ್ ಮತ್ತು ಸೂರ್ಯ, ರೇಖಾ ಕದಿರೇಶ್ ಜೊತೆಗೇ ಗುರುತಿಸಿಕೊಂಡಿದ್ದಲ್ಲದೆ, ಎರಡು ವರ್ಷಗಳಿಂದ ರೇಖಾಗೆ ಬಾಡಿಗಾರ್ಡ್ ರೀತಿ ಓಡಾಡಿಕೊಂಡಿದ್ದರು. ಆದರೆ, ಸಡನ್ನಾಗಿ ಇವರು ತಿರುಗಿಬಿದ್ದಿದ್ದು ಏಕೆ ಎನ್ನುವ ಬಗ್ಗೆ ಭಾರೀ ಕುತೂಹಲ ಎದ್ದಿದೆ.

ರಾಜಕೀಯವಾಗಿ ಪ್ರಬಲವಾಗಿದ್ದ 45 ವರ್ಷದ ರೇಖಾ ಕದಿರೇಶ್ ಸ್ಥಳೀಯವಾಗಿ ಚಿರಪರಿಚಿತ ಮತ್ತು ಜನಪ್ರಿಯ ನಾಯಕಿಯಾಗಿ ಬೆಳೆದಿದ್ದರು. ಹಾಗಾಗಿ ಮುಂದಿನ ಬಾರಿಯೂ ಅವರನ್ನೇ ಬಿಜೆಪಿಯಿಂದ ಕಣಕ್ಕಿಳಿಸುವ ಬಗ್ಗೆ ಪಕ್ಷ ಚಿಂತನೆ ನಡೆಸಿತ್ತು. ಇದಕ್ಕೆ ಪೂರಕವಾಗಿ ಬೆಂಗಳೂರು ನಗರ ಸಮಿತಿ ಅಧ್ಯಕ್ಷ ಎನ್.ಆರ್ ರಮೇಶ್ ಕೂಡ ಹೇಳಿಕೆ ನೀಡಿದ್ದು, ಜನಾನುರಾಗಿ ಆಗಿದ್ದ ರೇಖಾ ಬಗ್ಗೆ ಪಕ್ಷದಲ್ಲಿ ಉತ್ತಮ ಅಭಿಪ್ರಾಯಗಳಿದ್ದವು ಎಂದಿದ್ದಾರೆ. ಮೂಲದ ಪ್ರಕಾರ, ರೇಖಾ ಕದಿರೇಶ್ ರಾಜಕೀಯವಾಗಿ ಬೆಳೆಯುವುದು ಕದಿರೇಶ್ ಕುಟುಂಬಸ್ಥರಿಗೇ ಇಷ್ಟವಿರಲಿಲ್ಲ. ಕದಿರೇಶ್ ಎರಡನೇ ಪತ್ನಿಯಾಗಿದ್ದ ರೇಖಾ ಬಗ್ಗೆ ಮೊದಲ ಪತ್ನಿಯ ಮಕ್ಕಳಿಗೆ ಮತ್ತು ಕದಿರೇಶ್ ಸೋದರಿಯರಿಗೆ ಮನಸ್ತಾಪ ಇತ್ತು.
ಪೀಟರ್ ಹತ್ತಿರದ ಸಂಬಂಧಿಕನಾಗಿದ್ದು, ಜೊತೆಗಿದ್ದವರೇ ಸೇರಿಕೊಂಡು ರೇಖಾಳನ್ನು ಮುಗಿಸಿದ್ದಾರೆ ಎನ್ನೋ ಮಾತು ಕೇಳಿಬರುತ್ತಿದೆ. ಕದಿರೇಶ್ ನನ್ನು ಕೊಲೆಗೈದ ಬಳಿಕ ಆತನ ಕೊಲೆಗೆ ಕಾರಣವಾಗಿದ್ದ ಶೋಭನ್ ಎಂಬಾತನನ್ನು ಕೊಲೆಗೈದಿದ್ದ ಪೀಟರ್ ಒಂದು ವರ್ಷ ಜೈಲಿನಲ್ಲಿದ್ದು ಜಾಮೀನಿನ ಮೇಲೆ ಹೊರಗೆ ಬಂದು ರೇಖಾ ಜೊತೆಗೇ ಓಡಾಡಿಕೊಂಡಿದ್ದ. ತನ್ನ ತಾಯಿ ಪ್ರಾಣಕ್ಕೆ ಸಂಚಕಾರ ಇತ್ತು ಎನ್ನುವ ಬಗ್ಗೆ ಆಕೆಯ ಮಕ್ಕಳು ಕೂಡ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಕಾಲೇಜು ಓದುತ್ತಿದ್ದ ಇಬ್ಬರು ಮಕ್ಕಳು ತಂದೆಯ ಸಾವಿನ ಬಳಿಕ ಬಿಟಿಎಂ ಲೇಔಟ್ ನಲ್ಲಿ ವಾಸವಿದ್ದರು. ಆದರೆ, ಛಲವಾದಿಪಾಳ್ಯದಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದ ರೇಖಾ ಅದನ್ನು ಬಿಟ್ಟು ಬಂದಿರಲಿಲ್ಲ.
BJP Former corporator Rekha Kadiresh murder in Bengalury, Police arrest criminals including her Bodygaurds Peter and Surya in just 24 hours. Two-time former BBMP councillor from BJP, Rekha Kadiresh, who had represented Chalavadipalya ward, was hacked to death outside her office in Flower Garden area under Cottonpet police limits on Thursday morning.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am