ಬ್ರೇಕಿಂಗ್ ನ್ಯೂಸ್
30-06-21 04:15 pm Headline Karnataka News Network ಕ್ರೈಂ
Photo credits : ANI @ ANI
ಭುವನೇಶ್ವರ್, ಜೂನ್ 30: ಪೋರ್ಜರಿ ದಾಖಲೆಗಳನ್ನು ಬಳಸ್ಕೊಂಡು ಲಕ್ಷಾಂತರ ಸಿಮ್ ಕಾರ್ಡ್ ಏಕ್ಟಿವೇಟ್ ಮಾಡಿ ಕ್ರಿಮಿನಲ್ ಚಟುವಟಿಕೆಗೆ ಪೂರೈಕೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು ಖಾಸಗಿ ಟೆಲಿಕಾಂ ಕಂಪನಿಯ ಏಳು ಮಂದಿಯನ್ನು ಬಂಧಿಸಿದ್ದಾರೆ.
ಜಾಲಕ್ಕೆ ಸಂಬಂಧಿಸಿ 16,147 ಏಕ್ಟಿವ್ ಸಿಮ್ ಕಾರ್ಡ್ ಹಾಗೂ 110 ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಮಹೇಶ್ವರ್ ಬಾರಿಕ್(38), ರಜನಿಜಾಂತ ಪಾಣಿಗ್ರಹಿ(30), ಸುಬ್ರತ್ ಕುಮಾರ್ ಪಾಣಿಗ್ರಹಿ(24), ಸುಕಾಂತ ಕುಮಾರ್ ದಾಸ್ (30), ಸ್ರೀನಿಬಾಶ್ ಘಡಾಯಿ(21), ರಾಜೇಶ್ ಕುಮಾರ್ ಸೇಥಿ (29), ಮಂಗಲಮಾಯ ಮಿಶ್ರಾ (27) ಎಂದು ಗುರುತಿಸಲಾಗಿದೆ.
ಸಿಮ್ ಪಡೆಯಲು ಬರುವ ಅಸಲಿ ಗ್ರಾಹಕರದ್ದೇ ಐಡಿ ದಾಖಲೆ ಪ್ರತಿಗಳನ್ನು ಮತ್ತು ಫೋಟೊಗಳನ್ನು ಪೋರ್ಜರಿ ಮಾಡಿ ನಕಲಿಯಾಗಿ ಸಿಮ್ ಕಾರ್ಡ್ ತಯಾರಿಸುತ್ತಿದ್ದರು. ಲಕ್ಷಾಂತರ ಸಿಮ್ ಕಾರ್ಡ್ ಗಳನ್ನು ನಕಲಿ ಜಾಲದಲ್ಲಿ ಏಕ್ಟಿವೇಟ್ ಮಾಡಿ, ಅವುಗಳನ್ನು ವ್ಯವಸ್ಥಿತವಾಗಿ ಒಡಿಶಾ ಹೊರಭಾಗಕ್ಕೆ ಮಾರಾಟ ಮಾಡಲಾಗುತ್ತಿತ್ತು.
ಒಡಿಶಾ ಹೊರಭಾಗಕ್ಕೆ ಯಾವುದೇ ವಿಳಾಸ ದಾಖಲೆ ಪಡೆಯದೆ ಸಿಮ್ ಗಳನ್ನು ಮಾರಾಟ ಮಾಡುತ್ತಿದ್ದರು. ಹೀಗಾಗಿ ಸಿಮ್ ಪಡೆದವರನ್ನು ಟ್ರೇಸ್ ಮಾಡುವುದು ಸಾಧ್ಯವಿಲ್ಲ. ನಕಲಿ ಸಿಮ್ ಬಳಸಿಕೊಂಡು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.
ಈ ಗ್ಯಾಂಗ್ ಎರಡು ಲಕ್ಷಕ್ಕೂ ಹೆಚ್ಚು ನಕಲಿ ಸಿಮ್ ಗಳನ್ನು ಮಾರಾಟ ಮಾಡಿರುವ ಅಂದಾಜಿದೆ. ದೇಶದ ಭದ್ರತೆಗೆ ಇದೊಂದು ಅಪಾಯಕಾರಿ ಆಗಬಲ್ಲ ನಡೆಯಾಗಿದ್ದು ನಕಲಿ ಸಿಮ್ ಬಳಸಿ ಭದ್ರತೆಗೆ ಸವಾಲಾಗುವ ರೀತಿಯ ಅಪರಾಧ ಕೃತ್ಯಗಳನ್ನು ಎಸಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Commissioner of Police, Bhubaneswar-Cuttack, S K Priyadarsi said the pre-activated SIMs were sold outside the state.
20-10-25 06:58 pm
Bangalore Correspondent
Hassan Accident, Two Killed: ಹಾಸನಾಂಬ ದರ್ಶನ ಪಡ...
20-10-25 04:00 pm
ಕಲಬುರಗಿಯಲ್ಲಿ ಭೂಕಂಪನ ; ಮನೆಯಿಂದ ಹೊರಬಂದ ಜನರು, ನಿ...
20-10-25 02:56 pm
ಸೇಡಂನಲ್ಲಿ ಆರೆಸ್ಸೆಸ್ ಪಥಸಂಚಲನ ; ನೂರಾರು ಕಾರ್ಯಕರ್...
19-10-25 07:00 pm
Government Bans RSS: ಸರ್ಕಾರಿ ಶಾಲೆ, ಕಾಲೇಜು ಆವರ...
19-10-25 05:42 pm
20-10-25 08:34 pm
HK News Desk
300 Naxals, PM Narendra Modi: 75 ಗಂಟೆಯಲ್ಲಿ 30...
18-10-25 07:34 pm
ಗುಜರಾತ್ ನಲ್ಲಿ 25 ಸಚಿವರ ಹೊಸ ಸಂಪುಟ ಅಸ್ತಿತ್ವಕ್ಕೆ...
17-10-25 05:25 pm
ಗುಜರಾತ್ ನಲ್ಲಿ ದಿಢೀರ್ ಸಂಪುಟ ಸರ್ಜರಿ ! ಸಿಎಂ ಭೂಪೇ...
16-10-25 10:52 pm
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
20-10-25 10:28 pm
Mangalore Correspondent
Ashoka Janamana in Puttur, CM Siddaramaiah: ಪ...
20-10-25 07:25 pm
ಉಳ್ಳಾಲ ಟೀಮ್ ಹನುಮಾನ್ ತಂಡದಿಂದ ನವರಾತ್ರಿ ಯಕ್ಷವೇಷ...
19-10-25 10:32 pm
Karkala Abhishek Suicide Case, Arrest: ಅಭಿಷೇಕ...
19-10-25 07:58 pm
Bindu Jewellery Mangalore: ಮಂಗಳೂರಿನಲ್ಲಿ 'ಬಿಂದ...
19-10-25 07:19 pm
20-10-25 10:51 pm
Mangalore Correspondent
Rape Ullal, Mangalore Crime: ಅಪ್ರಾಪ್ತ ಬಾಲಕಿ ಮ...
20-10-25 12:25 pm
ಚಿನ್ನದಂಗಡಿಗೆ ತೆರಳಿ ಬಣ್ಣನೆಯ ಮಾತುಗಳಿಂದ ಮರುಳು ;...
19-10-25 11:09 pm
Bangalore engineering College rape, Crime: ಬೆ...
19-10-25 01:26 pm
MSME Fraud, SBI Malikatte, Mangalore': ಕೇಂದ್ರ...
18-10-25 10:49 pm