ಬ್ರೇಕಿಂಗ್ ನ್ಯೂಸ್
30-06-21 04:15 pm Headline Karnataka News Network ಕ್ರೈಂ
Photo credits : ANI @ ANI
ಭುವನೇಶ್ವರ್, ಜೂನ್ 30: ಪೋರ್ಜರಿ ದಾಖಲೆಗಳನ್ನು ಬಳಸ್ಕೊಂಡು ಲಕ್ಷಾಂತರ ಸಿಮ್ ಕಾರ್ಡ್ ಏಕ್ಟಿವೇಟ್ ಮಾಡಿ ಕ್ರಿಮಿನಲ್ ಚಟುವಟಿಕೆಗೆ ಪೂರೈಕೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದು ಖಾಸಗಿ ಟೆಲಿಕಾಂ ಕಂಪನಿಯ ಏಳು ಮಂದಿಯನ್ನು ಬಂಧಿಸಿದ್ದಾರೆ.
ಜಾಲಕ್ಕೆ ಸಂಬಂಧಿಸಿ 16,147 ಏಕ್ಟಿವ್ ಸಿಮ್ ಕಾರ್ಡ್ ಹಾಗೂ 110 ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಮಹೇಶ್ವರ್ ಬಾರಿಕ್(38), ರಜನಿಜಾಂತ ಪಾಣಿಗ್ರಹಿ(30), ಸುಬ್ರತ್ ಕುಮಾರ್ ಪಾಣಿಗ್ರಹಿ(24), ಸುಕಾಂತ ಕುಮಾರ್ ದಾಸ್ (30), ಸ್ರೀನಿಬಾಶ್ ಘಡಾಯಿ(21), ರಾಜೇಶ್ ಕುಮಾರ್ ಸೇಥಿ (29), ಮಂಗಲಮಾಯ ಮಿಶ್ರಾ (27) ಎಂದು ಗುರುತಿಸಲಾಗಿದೆ.


ಸಿಮ್ ಪಡೆಯಲು ಬರುವ ಅಸಲಿ ಗ್ರಾಹಕರದ್ದೇ ಐಡಿ ದಾಖಲೆ ಪ್ರತಿಗಳನ್ನು ಮತ್ತು ಫೋಟೊಗಳನ್ನು ಪೋರ್ಜರಿ ಮಾಡಿ ನಕಲಿಯಾಗಿ ಸಿಮ್ ಕಾರ್ಡ್ ತಯಾರಿಸುತ್ತಿದ್ದರು. ಲಕ್ಷಾಂತರ ಸಿಮ್ ಕಾರ್ಡ್ ಗಳನ್ನು ನಕಲಿ ಜಾಲದಲ್ಲಿ ಏಕ್ಟಿವೇಟ್ ಮಾಡಿ, ಅವುಗಳನ್ನು ವ್ಯವಸ್ಥಿತವಾಗಿ ಒಡಿಶಾ ಹೊರಭಾಗಕ್ಕೆ ಮಾರಾಟ ಮಾಡಲಾಗುತ್ತಿತ್ತು.
ಒಡಿಶಾ ಹೊರಭಾಗಕ್ಕೆ ಯಾವುದೇ ವಿಳಾಸ ದಾಖಲೆ ಪಡೆಯದೆ ಸಿಮ್ ಗಳನ್ನು ಮಾರಾಟ ಮಾಡುತ್ತಿದ್ದರು. ಹೀಗಾಗಿ ಸಿಮ್ ಪಡೆದವರನ್ನು ಟ್ರೇಸ್ ಮಾಡುವುದು ಸಾಧ್ಯವಿಲ್ಲ. ನಕಲಿ ಸಿಮ್ ಬಳಸಿಕೊಂಡು ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.
ಈ ಗ್ಯಾಂಗ್ ಎರಡು ಲಕ್ಷಕ್ಕೂ ಹೆಚ್ಚು ನಕಲಿ ಸಿಮ್ ಗಳನ್ನು ಮಾರಾಟ ಮಾಡಿರುವ ಅಂದಾಜಿದೆ. ದೇಶದ ಭದ್ರತೆಗೆ ಇದೊಂದು ಅಪಾಯಕಾರಿ ಆಗಬಲ್ಲ ನಡೆಯಾಗಿದ್ದು ನಕಲಿ ಸಿಮ್ ಬಳಸಿ ಭದ್ರತೆಗೆ ಸವಾಲಾಗುವ ರೀತಿಯ ಅಪರಾಧ ಕೃತ್ಯಗಳನ್ನು ಎಸಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Commissioner of Police, Bhubaneswar-Cuttack, S K Priyadarsi said the pre-activated SIMs were sold outside the state.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
27-07-26 09:48 pm
HK News Staffer
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
27-07-26 11:07 pm
Mangaluru Staffer
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm
ಸಚಿವ ಸ್ಥಾನ ಕೊಡಿಸಲು ಮೂರು ಕೋಟಿ ಬೇಡಿಕೆ ; ಕೇರಳದ ಶ...
27-07-26 09:04 pm
ಬೆಂಗಳೂರು ಗ್ಯಾರೇಜ್ ನಲ್ಲಿ ಅಗ್ನಿ ಅವಘಡ ; ಜಾಗ್ವಾರ...
27-07-26 07:35 pm
ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳ ಆರೋ...
27-07-26 01:09 pm