ನಿಂಬೆ ಹಣ್ಣುಗಳ ಎಡೆಯಲ್ಲೂ ಗಾಂಜಾ ; ಕೇರಳಕ್ಕೆ ಸಾಗಣೆ ಪತ್ತೆ, ಇಬ್ಬರ ಬಂಧನ

03-07-21 03:00 pm       Mangalore Correspondent   ಕ್ರೈಂ

ಮಹೇಂದ್ರ ಬೊಲೆರೋ ವಾಹನದಲ್ಲಿ ನಿಂಬೆ ಹಣ್ಣಿನ ಜೊತೆ ಗಾಂಜಾ ಪ್ಯಾಕೆಟ್ ಗಳನ್ನು ಇರಿಸಿಕೊಂಡು ಸಾಗಿಸುತ್ತಿರುವುದನ್ನು ಮಂಗಳೂರು ಪೊಲೀಸರು ಪತ್ತೆ ಮಾಡಿದ್ದಾರೆ.

ಮಂಗಳೂರು, ಜುಲೈ 3: ನಗರದ ಕೊಟ್ಟಾರ ಚೌಕಿಯಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಮಹೇಂದ್ರ ಬೊಲೆರೋ ವಾಹನದಲ್ಲಿ ನಿಂಬೆ ಹಣ್ಣಿನ ಜೊತೆ ಗಾಂಜಾ ಪ್ಯಾಕೆಟ್ ಗಳನ್ನು ಇರಿಸಿಕೊಂಡು ಸಾಗಿಸುತ್ತಿರುವುದನ್ನು ಪತ್ತೆ ಮಾಡಿದ್ದಾರೆ.

ಕೇರಳ ನೋಂದಣಿಯ ಕೆಎಲ್ 79- 7130 ಸಂಖ್ಯೆಯ ಮಹೇಂದ್ರ ಬೊಲೆರೋ ಮ್ಯಾಕ್ಸಿ ಕ್ಯಾಬ್ ನಲ್ಲಿ ಪೊಲೀಸರ ತಪಾಸಣೆ ವೇಳೆ ನಿಂಬೆ ಹಣ್ಣುಗಳನ್ನು ತುಂಬಿದ್ದ ಪ್ಲಾಸ್ಟಿಕ್ ಟ್ರೇಗಳಲ್ಲಿ ಗಾಂಜಾ ಪ್ಯಾಕೆಟ್ ಪತ್ತೆಯಾಗಿದೆ. ತಲಾ ಎರಡು ಕೆಜಿಯ ಗಾಂಜಾ ಸಂಗ್ರಹವಿದ್ದ 20 ಪ್ಯಾಕೆಟ್ ಗಳನ್ನು ಅಡಗಿಸಿಟ್ಟು ಕೇರಳಕ್ಕೆ ಸಾಗಿಸುತ್ತಿರುವುದು ತಿಳಿದು ಮ್ಯಾಕ್ಸಿ ಕ್ಯಾಬ್ ವಾಹನ ಸಹಿತ ವಶಕ್ಕೆ ಪಡೆಯಲಾಗಿದೆ.

ಈ ವೇಳೆ, ವಾಹನದಲ್ಲಿದ್ದ ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ನಿವಾಸಿಗಳಾದ ಶಿಹಾಬುದ್ದೀನ್(32) ಮತ್ತು ಲತೀಫ್ (38) ಎಂಬವರನ್ನು ಉರ್ವಾ ಪೊಲೀಸರು ಬಂಧಿಸಿದ್ದಾರೆ. ಮ್ಯಾಕ್ಸಿ ಕ್ಯಾಬ್ ವಾಹನ ಉಡುಪಿ ಕಡೆಯಿಂದ ಕೇರಳದ ಕಡೆಗೆ ಸಾಗುತ್ತಿತ್ತು. ಪ್ರಮುಖವಾಗಿ ಗಾಂಜಾವನ್ನು ಆಂಧ್ರಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು ಅದನ್ನು ವ್ಯವಸ್ಥಿತವಾಗಿ ಕರ್ನಾಟಕ, ಕೇರಳಕ್ಕೆ ಸಾಗಣೆ ಮಾಡಲಾಗುತ್ತಿದೆ.

Two people transporting ganja from Andhra Pradesh to Kasargod have been arrested by Mangalore Police. DCP law and order Hariram Shankar said the accused were nabbed at Kottara Chowki check post under Urwa police station limits. The arrested have been identified as Shihabuddin (32) and Latheef (38), both from Kasargod.