ಬ್ರೇಕಿಂಗ್ ನ್ಯೂಸ್
05-07-21 01:12 pm Mangalore Correspondent ಕ್ರೈಂ
ಮಂಗಳೂರು, ಜುಲೈ 5: ನಗರದ ಬಲ್ಮಠದಲ್ಲಿರುವ ಮೇಪಲ್ ಶೋರೂಂಗೆ ಕಳ್ಳರು ನುಗ್ಗಿದ್ದು 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಐಫೋನ್, ಏಪಲ್ ಫೋನ್ ಗಳನ್ನು ಕಳವು ಮಾಡಿದ್ದಾರೆ.
ಶನಿವಾರ, ಭಾನುವಾರ ವೀಕೆಂಡ್ ಲಾಕ್ಡೌನ್ ಇದ್ದುದರಿಂದ ಇಂದು ಬೆಳಗ್ಗೆ ಶೋರೂಂ ಓಪನ್ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಹಿಂಭಾಗದ ಕಿಟಕಿಯನ್ನು ಒಡೆದು ಕಳ್ಳರು ನುಗ್ಗಿದ್ದು ಒಳಭಾಗದಲ್ಲಿ ತಡಕಾಡಿ ಲಕ್ಷಕ್ಕೂ ಹೆಚ್ಚು ಬೆಲೆಯ ಮೊಬೈಲ್ ಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಶೋರೂಂ ಸಿಬಂದಿ ಇಂದು ಬೆಳಗ್ಗೆ ಬಂದು ನೋಡಿದಾಗ ಕಳವಾಗಿದ್ದು ಕಂಡುಬಂದಿದ್ದು ಕದ್ರಿ ಪೊಲೀಸರು ಬಂದು ತನಿಖೆ, ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳರು ಕೃತ್ಯದ ಬಳಿಕ ಶೋರೂಂ ಒಳಗಿದ್ದ ಸಿಸಿಟಿವಿಯ ಡಿವಿಆರ್ ಎತ್ತಿಕೊಂಡು ಹೋಗಿದ್ದಾರೆ. ಹೀಗಾಗಿ ಕಳ್ಳರು ಶೋರೂಂ ಬಗ್ಗೆ ಸಾಕಷ್ಟು ಗೊತ್ತಿರುವ ಮಂದಿಯೇ ಆಗಿರಬೇಕು ಎಂಬ ಸಂಶಯ ವ್ಯಕ್ತವಾಗಿದೆ.
ಮಂಗಳೂರಿನಲ್ಲಿ ಇರುವ ಏಕೈಕ ಏಪಲ್, ಐಫೋನ್ ಡೀಲರ್ ಶಾಪ್ ಇದಾಗಿದ್ದು ಅತ್ಯಧಿಕ ಬೆಲೆಯ ಮೊಬೈಲ್ ಗಳು ಮಾತ್ರ ಇಲ್ಲಿರುತ್ತವೆ. ಐಫೋನ್ ಸಾಧಾರಣ ಮಟ್ಟದ್ದು ಕನಿಷ್ಠ ಅಂದ್ರೆ 70 ಸಾವಿರ ರೂ. ಮೌಲ್ಯ ಇದ್ದು ಒಂದೂವರೆ ಲಕ್ಷದ ವರೆಗೂ ಬೆಲೆಯದ್ದಿದೆ. ಹೀಗಾಗಿ ನೂರಕ್ಕೂ ಹೆಚ್ಚು ಮೊಬೈಲ್ ಕಳವಾಗಿದ್ದರೂ ಅದರ ಮೌಲ್ಯ 50ರಿಂದ 70 ಲಕ್ಷ ಆಗುತ್ತದೆ. ಈಗ ಎಷ್ಟು ಮೊಬೈಲ್ ಕಳವಾಗಿದೆ ಎಂದು ಸರಿಯಾದ ಲೆಕ್ಕ ಸಿಕ್ಕಿಲ್ಲ.
ಐದು ವರ್ಷಗಳ ಹಿಂದೆಯೂ ಕಳವು ನಡೆದಿತ್ತು !
2015 ರ ಆಗಸ್ಟ್ ನಲ್ಲಿ ಇದೇ ಏಪಲ್ ಶೋರೂಂನಿಂದ ಭಾರೀ ಪ್ರಮಾಣದ ಕಳವು ಆಗಿತ್ತು. ಅಂದು 20 ಲಕ್ಷದ ಮೊಬೈಲ್ ಗಳು ಕಳವಾಗಿದ್ದವು. ಪ್ರಕರಣವನ್ನು ಬೆನ್ನತ್ತಿದ್ದ ಸಿಸಿಬಿ ಪೊಲೀಸರು ಬಳಿಕ ನೇಪಾಳ ಮೂಲದ ನಾಲ್ವರನ್ನು ಬಂಧಿಸಿದ್ದರು. ಶೋರೂಮಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದವರೇ ಕೃತ್ಯಕ್ಕೆ ಸಾಥ್ ನೀಡಿದ್ದು ಬೆಳಕಿಗೆ ಬಂದಿತ್ತು.
Robbery in Balmatta Maple iPhone Showroom 50 lakhs worth iPhone Mobile phones stolen. Robbers flee away with CCTV Hard drive. In 2015 more than 20 lakhs worth of Mobile phones were stolen. Kadri Police and CCB have are now investigating the case.
18-08-25 10:47 pm
Bangalore Correspondent
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
SIT, Dharmasthala Case, Pralhad Joshi: ಯಾರೋ ಅ...
18-08-25 01:25 pm
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
18-08-25 09:19 pm
HK News Desk
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am