ಕೋರ್ಟಿಗೆಂದು ಹೋದವರು ಸಂತೆಕಟ್ಟೆ ನದಿಯಲ್ಲಿ ಶವವಾಗಿ ಪತ್ತೆ 

10-07-21 08:35 pm       Udupi Correspondent   ಕ್ರೈಂ

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಸಂತೆಕಟ್ಟೆಯ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

ಉಡುಪಿ, ಜುಲೈ 10: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಸಂತೆಕಟ್ಟೆಯ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 

ಬ್ರಹ್ಮಾವರದ ಬೈಕಾಡಿ ನಿವಾಸಿ ಶ್ರೀಧರ ಮಯ್ಯ (60) ಮೃತರು. ಅನಾರೋಗ್ಯ ಹೊಂದಿದ್ದ ಶ್ರೀಧರ ಮಯ್ಯ ಜುಲೈ 8ರಂದು ಪತ್ನಿಯಲ್ಲಿ ಕೋರ್ಟಿಗೆ ಹೋಗಲಿಕ್ಕಿದೆ. ಆನಂತರ ಚಿಕ್ಕಮಗಳೂರು ಹೋಗ್ತೇನೆ ಎಂದು ಹೇಳಿ ಹೋಗಿದ್ದರು. ಆದರೆ ಮರಳಿ ಬಾರದ ಕಾರಣ ಪತ್ನಿ ಮರುದಿನ ಬ್ರಹ್ಮಾವರ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. 

ಇಂದು ಬೆಳಗ್ಗೆ ಸಂತಕಟ್ಟೆ ಕೆ.ಜಿ. ರೋಡ್ ಬಳಿ ನದಿಯಲ್ಲಿ ಶವ ತೇಲುತ್ತಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಬಳಿಕ ಪೊಲೀಸರು ಬಂದು ಶವವನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸೇರಿಸಿದ್ದರು. ಶ್ರೀಧರ ಮಯ್ಯ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

The body of a 60-year-old man, who had gone missing for two days, was found floating in the river near the KG Road bridge on July 10. The deceased has been identified as Sridhar Mayya (60), a resident of Bikady, Brahmavar.