ಕುಟುಂಬ ಕಲಹ ; ಮನೆಯಲ್ಲಿ ಮಲಗಿದ್ದ ತಮ್ಮನನ್ನೇ ಅಟ್ಟಾಡಿಸಿ ಇರಿದು ಕೊಂದ ಅಣ್ಣ ! 

24-07-21 10:51 pm       Headline Karnataka News Network   ಕ್ರೈಂ

ತಮ್ಮನನ್ನು ಅಣ್ಣನೇ ಅಟ್ಟಾಡಿಸಿ ಇರಿದು ಕೊಂದು  ಹಾಕಿದ ಘಟನೆ ಬದಿಯಡ್ಕ ಠಾಣೆ ವ್ಯಾಪ್ತಿಯ ಸೀತಾಂಗೋಳಿ ಸಮೀಪದ ಮುಗು ಎಂಬಲ್ಲಿ ನಡೆದಿದೆ. 

ಕಾಸರಗೋಡು, ಜುಲೈ 25: ತಮ್ಮನನ್ನು ಅಣ್ಣನೇ ಅಟ್ಟಾಡಿಸಿ ಇರಿದು ಕೊಂದು  ಹಾಕಿದ ಘಟನೆ ಬದಿಯಡ್ಕ ಠಾಣೆ ವ್ಯಾಪ್ತಿಯ ಸೀತಾಂಗೋಳಿ ಸಮೀಪದ ಮುಗು ಎಂಬಲ್ಲಿ ನಡೆದಿದೆ. 

ಮುಗು ನಿವಾಸಿ ಅಬ್ದುಲ್ ಮುಸ್ಲಿಯಾರ್ ಪುತ್ರ, ಮಹಮ್ಮದ್ ನಿಸಾರ್ (28) ಮೃತ ಯುವಕ. ಆತನ ಅಣ್ಣ ರಫೀಕ್ ಆರೋಪಿಯಾಗಿದ್ದು ಪೊಲೀಸರು ಬಂಧಿಸಿದ್ದಾರೆ. ‌
ಇಂದು ಮಧ್ಯಾಹ್ನ ಘಟನೆ ನಡೆದಿದೆ. 

ಕೃತ್ಯಕ್ಕೆ ಕುಟುಂಬ ಕಲಹ ಕಾರಣ ಎನ್ನಲಾಗಿದೆ. ಕೆಲವು ದಿ‌ನಗಳಿಂದ ಸೋದರರ ನಡುವೆ ಜಗಳ ನಡೆದಿತ್ತು. ಇಂದು ಮಧ್ಯಾಹ್ನ ಊಟ ಮುಗಿಸಿ ಮನೆಯಲ್ಲಿ ಮಲಗಿದ್ದ ತಮ್ಮನ ಮೇಲೆ ಸೋದರನೇ  ಎರಗಿದ್ದಾನೆ. ನಿಸಾರ್ ಕೂಡಲೇ ತಪ್ಪಿಸಿಕೊಂಡು ಓಡಿದ್ದಾನೆ.‌ ಆದರೆ ಬೆನ್ನತ್ತಿ ಬಂದ ರಫೀಕ್ ಮನೆಯ ಹೊರಗೆ ಓಡುತ್ತಿದ್ದ ನಿಸಾರ್ ಮೇಲೆ ಕತ್ತಿಯಿಂದ ಇರಿದಿದ್ದಾನೆ. ಕೂಡಲೇ ನಿಸಾರನ್ನು ಕುಂಬಳೆ ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಸಾವು ಕಂಡಿದ್ದಾನೆ. 

ನಿಸಾರ್ ಅವಿವಾಹಿತನಾಗಿದ್ದು ಬದಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ‌

In an incident that occurred on the afternoon of Saturday, July 24 at Mugu of Sitangoli in the district, a man allegedly stabbed his younger brother to death. The deceased has identified as Mohammed Nisar (29), son of Abdulla Musliyar, resident of Mugu Urmi. His elder brother Rafiq (31) who allegedly stabbed him to death has been arrested by Badiadka police.