ಕೋಟೇಶ್ವರ ; ಫೈನಾನ್ಸ್ ಕಚೇರಿಗೆ ನುಗ್ಗಿ ಯುವಕನ ಕಗ್ಗೊಲೆ, ಹಣಕಾಸು ದ್ವೇಷದಲ್ಲಿ ಕೃತ್ಯ 

31-07-21 01:47 pm       Udupi Correspondent   ಕ್ರೈಂ

ಕೋಟೇಶ್ವರದಲ್ಲಿ ಫೈನಾನ್ಸ್ ಮಾಡುತ್ತಿದ್ದ ಯುವಕನನ್ನು ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಘಟನೆ ನಿನ್ನೆ ರಾತ್ರಿ ನಡೆದಿದೆ. 

ಕುಂದಾಪುರ, ಜುಲೈ 31: ಕೋಟೇಶ್ವರದಲ್ಲಿ ಫೈನಾನ್ಸ್ ಮಾಡುತ್ತಿದ್ದ ಯುವಕನನ್ನು ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದ ಘಟನೆ ನಿನ್ನೆ ರಾತ್ರಿ ನಡೆದಿದೆ. 

ಕೋಟೇಶ್ವರದ ಕಾಳಾವರದಲ್ಲಿ ಘಟನೆ ನಡೆದಿದ್ದು ಯಡಾಡಿ ಮತ್ಯಾಡಿ ನಿವಾಸಿ ಅಜೇಂದ್ರ ಶೆಟ್ಟಿ (33) ಕೊಲೆಯಾದವರು. ಅಜೇಂದ್ರ ಅವರು ಕಳೆದ ಐದು ವರ್ಷಗಳಿಂದ ಸಳ್ವಾಡಿಯಲ್ಲಿ ಡ್ರೀಮ್ ಫೈನಾನ್ಸ್ ಎನ್ನುವ ಫೈನಾನ್ಸ್ ಸಂಸ್ಥೆಯನ್ನು ನಡೆಸುತ್ತಿದ್ದರು. 

ಅಜೇಂದ್ರ ಶೆಟ್ಟಿ ನಿನ್ನೆ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಬಳಿಕ ಮನೆಯವರು ಹಾಗೂ ಅವರ ಸ್ನೇಹಿತರು ಹುಡುಕಾಡಿದ್ದಾರೆ. ಈ ವೇಳೆ ಸ್ನೇಹಿತರು ಫೈನಾನ್ಸ್ ಕಚೇರಿಗೆ ತೆರಳಿ ನೋಡಿದಾಗ, ಕೊಲೆಯಾದ ಸ್ಥಿತಿಯಲ್ಲಿ ಅಜೇಂದ್ರ ಪತ್ತೆಯಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಕಂಡ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಸ್ಪಿ ವಿಷ್ಣುವರ್ಧನ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ‌

ಫೈನಾನ್ಸ್ ನಡೆಸುತ್ತಿದ್ದ ಅಜೇಂದ್ರ ಶೆಟ್ಟಿ ಹಲವರ ಜೊತೆ ಹಣಕಾಸು ವ್ಯವಹಾರ ಇರಿಸಿಕೊಂಡಿದ್ದರು. ಹಣಕಾಸು ದ್ವೇಷದಲ್ಲಿ ಯಾರೋ ಕೃತ್ಯ ಮಾಡಿಸಿದ್ದಾರೆ ಎನ್ನಲಾಗುತ್ತಿದೆ.‌

The deceased has been identified as Ajendra Shetty (33), a resident of Yadadi Mathyadi near Kundapur. According to the police, Ajendra Shetty and his friend Anup were running a Finance business at Kalavara. On July 30 night when Ajendra did not come home after work, his family members tried to contact him to know the reason for the delay in coming home but there was no response from him. The family members then informed his friends that Ajendra was not responding to their call and the friends immediately rushed to the office where he was found murdered. Ajendra was assaulted with a sharp weapon on his neck and face.