ತಲಪಾಡಿ : ಅಂಗಡಿ ಮಾಲಕನ ಕತ್ತು ಹಿಸುಕಿ 14,700 ರೂ. ದರೋಡೆ

09-08-21 12:58 pm       Mangaluru Correspondent   ಕ್ರೈಂ

ವ್ಯಕ್ತಿಯೋರ್ವರು ತನ್ನ ಅಂಗಡಿ ತೆರೆಯುತ್ತಿದ್ದ ವೇಳೆ ಆಕ್ರಮಣ ನಡೆಸಿದ ತಂಡವೊಂದು 14,700 ರೂಪಾಯಿಗಳನ್ನು ದರೋಡೆ ನಡೆಸಿದ ಘಟನೆ ಮೇಗಿನಪಂಜಾಳದಲ್ಲಿ ನಡೆದಿದೆ. 

ಉಳ್ಳಾಲ, ಆ.9: ವ್ಯಕ್ತಿಯೋರ್ವರು ತನ್ನ ಅಂಗಡಿ ತೆರೆಯುತ್ತಿದ್ದ ವೇಳೆ ಆಕ್ರಮಣ ನಡೆಸಿದ ತಂಡವೊಂದು 14,700 ರೂಪಾಯಿಗಳನ್ನು ದರೋಡೆ ನಡೆಸಿದ ಘಟನೆ ಇಂದು ಮುಂಜಾನೆ ತಲಪಾಡಿ ಗ್ರಾಮದ ಮಾಧವಪುರ, ಮೇಗಿನಪಂಜಾಳದಲ್ಲಿ ನಡೆದಿದೆ. 

ಮಾಧವಪುರ, ಮೇಗಿನ ಪಂಜಾಳ ನಿವಾಸಿ ಹಸೈನಾರ್ (57)ಯಾನೆ ಖಾಸಿಂ ಎಂಬವರು ಇಂದು ಬೆಳಗ್ಗೆ ತನ್ನ ಮನೆ ಸಮೀಪದ ಅಂಗಡಿ ತೆರೆಯುತ್ತಿದ್ದ ವೇಳೆ ಏಕಾಏಕಿ ಹಿಂದಿನಿಂದ ಬಂದ ಆಗಂತುಕನೋರ್ವ ಖಾಸಿಂ ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಸುಕಿ ಅಡ್ಡ ಬೀಳಿಸಿ ಅವರಲ್ಲಿದ್ದ 14,700 ರೂಪಾಯಿಗಳನ್ನು ದರೋಡೆಗೈದಿದ್ದಾನೆ. 

ಗಾಯಗೊಂಡು ಮೂರ್ಛೆ ಹೋಗಿದ್ದ ಖಾಸಿಂ ಅವರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮೂರು ಜನರ ತಂಡ ದರೋಡೆ ನಡೆಸಿದೆ ಎಂದು ಶಂಕಿಸಲಾಗಿದ್ದು ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Mangalore Thieves attack provisional shop owner in Talapady, Ullal flee with 14 thousand cash. Case filed at Ullal police station.