ಬ್ರೇಕಿಂಗ್ ನ್ಯೂಸ್
28-08-21 04:54 pm Mangaluru Correspondent ಕ್ರೈಂ
ಮಂಗಳೂರು, ಆಗಸ್ಟ್ 28 : ಆಟೋ ಚಾಲನೆ ಮಾಡುತ್ತಿದ್ದ ಯುವಕನಿಗೆ ರಾತ್ರಿ ಹೊತ್ತಲ್ಲಿ ವಿಡಿಯೋ ಕರೆ ಬಂದಿತ್ತು. ಯುವತಿಯೊಬ್ಬಳು ಬೆತ್ತಲಾಗುತ್ತಲೇ ಆಟೋ ಚಾಲಕನ ಬಳಿ ಬಟ್ಟೆ ಬಿಚ್ಚುವಂತೆ ಹೇಳಿದ್ದಳು. ಯುವತಿ ಹೇಳಿದ್ದೇ ತಡ, ತಾನೇನೂ ಕಮ್ಮಿಯಿಲ್ಲ ಎಂದು ಬೆತ್ತಲಾಗಿದ್ದ. ಬಳಿಕ ಆಕೆಯೊಂದಿಗೆ ಸೆಕ್ಸ್ ಚಾಟಿಂಗ್ ನಡೆಸಿದ್ದ. ಆದರೆ, ಕೆಲವು ದಿನಗಳ ಬಳಿಕ ಆಟೋ ಚಾಲಕನ ವೀಡಿಯೋ ಬಯಲಾಗಿತ್ತು.
ಇದೊಂದು ಹೊಸ ಮಾದರಿಯ ಹೈಟೆಕ್ ಹನಿಟ್ರ್ಯಾಪ್ ಆಗಿದ್ದು ಅದರಲ್ಲಿ ಆಟೋ ಚಾಲಕ ಸಿಕ್ಕಿಬಿದ್ದಿದ್ದಾನೆ. ಶ್ರೀಮಂತರನ್ನೇ ಟಾರ್ಗೆಟ್ ಮಾಡುತ್ತಿದ್ದ ಹನಿಟ್ರ್ಯಾಪ್ ಜಾಲ ಈಗ ಜನಸಾಮಾನ್ಯರ ಬೆನ್ನು ಬಿದ್ದಿದೆ. ಕಡಬ ತಾಲೂಕಿನ ಆಟೋ ಚಾಲಕನೊಬ್ಬ ಹುಡುಗಿಯ ಬಣ್ಣನೆ ಮಾತಿಗೆ ಮರುಳಾಗಿ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿದ್ದ.

ವಾಟ್ಸಪ್ ಕರೆ, ಮೆಸೇಜ್ ಮೂಲಕ ಆಟೋ ಚಾಲಕನಿಗೆ ಪರಿಚಯವಾಗಿದ್ದ ಹುಡುಗಿ ಇತ್ತೀಚೆಗೆ ರಾತ್ರಿ ವೇಳೆ ವಿಡಿಯೋ ಕಾಲ್ ಮಾಡಿದ್ದಳು. ತನ್ನನ್ನು ತಾನು ಯುವತಿ ಅರೆ ಬೆತ್ತಲು ಮಾಡಿಕೊಂಡಿದ್ದು, ಆಟೋ ಚಾಲಕನಿಗೂ ಬೆತ್ತಲಾಗುವಂತೆ ಪ್ರೇರಣೆ ನೀಡಿದ್ದಳು. ಬಳಿಕ ಅಶ್ಲೀಲ ಚಾಟಿಂಗನ್ನೂ ಮಾಡಿದ್ದ. ಗುರುತು ಪರಿಚಯ ಇರದಿದ್ದರೂ, ಹುಡುಗಿ ಜೊತೆ ಸಲುಗೆಯ ಮಾತನಾಡಿದ್ದ.
ಆದರೆ, ಬೆತ್ತಲೆ ವಿಡಿಯೋವನ್ನು ರೆಕಾರ್ಡ್ ಮಾಡಿದ್ದ ತಂಡ ಹಣಕ್ಕಾಗಿ ಡಿಮ್ಯಾಂಡ್ ಇಟ್ಟಿದೆ. ಆದರೆ ಆಟೋ ಚಾಲಕ ಇದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ವಾರ ಕಳೆಯುವಷ್ಟರಲ್ಲಿ ಆಟೋ ಚಾಲಕನ ಬೆತ್ತಲೆ ವಿಡಿಯೋ ಜಾಲತಾಣದಲ್ಲಿ ಬಂದಿತ್ತು. ಈತನ ವಿಡಿಯೋವನ್ನು ದುಷ್ಕರ್ಮಿಗಳು ಹರಿಯಬಿಟ್ಟಿದ್ದರು. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣ ಹೆಚ್ಚುತ್ತಿದ್ದು, ಹುಡುಗಿ ಮಾತು ಕೇಳಿ ಬೆತ್ತಲಾಗಲು ಹೋದರೆ ಇಡೀ ಸಮಾಜದ ಮುಂದೆ ಬೆತ್ತಲಾಗುವ ಸ್ಥಿತಿ ಬರುತ್ತದೆ.
Mangalore Honey trap on WhatsApp Auto-driver goes naked video goes viral. She was introduced to him via Whatsapp calls and then she came naked on video call told him to go naked.
06-02-26 12:30 pm
Bangalore Correspondent
ಭವಿಷ್ಯ ಹೇಳುವ ನೆಪದಲ್ಲಿ ಬೇಟೆ? ರೀಲ್ಸ್ ರಾಣಿಯ ಹಿಂದ...
05-02-26 05:52 pm
ಗದಗದಲ್ಲಿ ಭೀಕರ ರಸ್ತೆ ಅಪಘಾತ ; ಕ್ರೂಸರ್ - ಕ್ಯಾಂಟರ...
05-02-26 03:11 pm
ಹಿಂದಿ ಲ್ಯಾಂಡ್ ಉತ್ತರ ಭಾರತೀಯರು ಮಾತ್ರ ನೈಜ ಇಂಡಿಯನ...
05-02-26 01:15 pm
ಸರ್ಕಾರಿ ಆಸ್ಪತ್ರೆಯಲ್ಲೇ ಔಷಧಿ ಕೊರತೆ ; ಅನುದಾನ ಇಲ್...
05-02-26 10:37 am
06-02-26 10:58 pm
HK News Desk
ಕೊರಿಯನ್ ವೆಬ್ ಸಿರೀಸ್ ವ್ಯಸನ, ತಂದೆಯ ಎರಡು ಕೋಟಿ ಸಾ...
06-02-26 08:47 pm
SBI ಬ್ಯಾಂಕ್ ಕಿತಾಪತಿ ; 2 ಕೋಟಿ ಮೌಲ್ಯದ ಚಿನ್ನ–ಬೆಳ...
06-02-26 08:17 pm
ನೇಪಾಳದ ಗಡಿಯಲ್ಲಿ ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ...
06-02-26 07:04 pm
ಮೇಘಾಲಯದಲ್ಲಿ ಕರಾಳ ದುರಂತ ; 'ಅಕ್ರಮ' ಕಲ್ಲಿದ್ದಲು ಗ...
06-02-26 09:54 am
06-02-26 10:56 pm
Mangalore Correspondent
ಡಿಕೆಶಿ ಸಿಎಂ ಆಗಿಯೇ ಪುತ್ತೂರು ಕಾಂಗ್ರೆಸ್ ಕಚೇರಿ ಉದ...
06-02-26 10:42 pm
Veerendra Heggade, Dharmasthala: ಶಿವರಾತ್ರಿಗೆ...
06-02-26 09:01 pm
D k Shivakumar, Mangalore: "ಯತೀಂದ್ರ ಅವರೇ ನಮ್ಮ...
06-02-26 03:09 pm
ನಿರ್ಲಕ್ಷ್ಯದಿಂದ ಹೆದ್ದಾರಿಗೆ ಬೈಕ್ ನುಗ್ಗಿಸಿದ ತ್ರಿ...
06-02-26 01:55 pm
06-02-26 06:36 pm
HK News Desk
ಹುಬ್ಬಳ್ಳಿಯ ಆಟೋ ಚಾಲಕನ ಖಾತೆಯಲ್ಲಿ ಕೋಟ್ಯಂತರ ಹಣದ ವ...
06-02-26 01:36 pm
Manjeshwar Double Murder: ಮಂಜೇಶ್ವರ ; ಪತ್ನಿ ಮೇ...
03-02-26 01:05 pm
ಪೋಲೆಂಡಿನಲ್ಲಿ ಉದ್ಯೋಗ ವೀಸಾ ; 4.50 ಲಕ್ಷ ಹಣ ಪಡೆದು...
03-02-26 11:31 am
ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ; 65 ವರ್ಷದ ವೃದ್ಧ...
02-02-26 10:37 pm