ಬ್ರೇಕಿಂಗ್ ನ್ಯೂಸ್
28-08-21 04:54 pm Mangaluru Correspondent ಕ್ರೈಂ
ಮಂಗಳೂರು, ಆಗಸ್ಟ್ 28 : ಆಟೋ ಚಾಲನೆ ಮಾಡುತ್ತಿದ್ದ ಯುವಕನಿಗೆ ರಾತ್ರಿ ಹೊತ್ತಲ್ಲಿ ವಿಡಿಯೋ ಕರೆ ಬಂದಿತ್ತು. ಯುವತಿಯೊಬ್ಬಳು ಬೆತ್ತಲಾಗುತ್ತಲೇ ಆಟೋ ಚಾಲಕನ ಬಳಿ ಬಟ್ಟೆ ಬಿಚ್ಚುವಂತೆ ಹೇಳಿದ್ದಳು. ಯುವತಿ ಹೇಳಿದ್ದೇ ತಡ, ತಾನೇನೂ ಕಮ್ಮಿಯಿಲ್ಲ ಎಂದು ಬೆತ್ತಲಾಗಿದ್ದ. ಬಳಿಕ ಆಕೆಯೊಂದಿಗೆ ಸೆಕ್ಸ್ ಚಾಟಿಂಗ್ ನಡೆಸಿದ್ದ. ಆದರೆ, ಕೆಲವು ದಿನಗಳ ಬಳಿಕ ಆಟೋ ಚಾಲಕನ ವೀಡಿಯೋ ಬಯಲಾಗಿತ್ತು.
ಇದೊಂದು ಹೊಸ ಮಾದರಿಯ ಹೈಟೆಕ್ ಹನಿಟ್ರ್ಯಾಪ್ ಆಗಿದ್ದು ಅದರಲ್ಲಿ ಆಟೋ ಚಾಲಕ ಸಿಕ್ಕಿಬಿದ್ದಿದ್ದಾನೆ. ಶ್ರೀಮಂತರನ್ನೇ ಟಾರ್ಗೆಟ್ ಮಾಡುತ್ತಿದ್ದ ಹನಿಟ್ರ್ಯಾಪ್ ಜಾಲ ಈಗ ಜನಸಾಮಾನ್ಯರ ಬೆನ್ನು ಬಿದ್ದಿದೆ. ಕಡಬ ತಾಲೂಕಿನ ಆಟೋ ಚಾಲಕನೊಬ್ಬ ಹುಡುಗಿಯ ಬಣ್ಣನೆ ಮಾತಿಗೆ ಮರುಳಾಗಿ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿದ್ದ.

ವಾಟ್ಸಪ್ ಕರೆ, ಮೆಸೇಜ್ ಮೂಲಕ ಆಟೋ ಚಾಲಕನಿಗೆ ಪರಿಚಯವಾಗಿದ್ದ ಹುಡುಗಿ ಇತ್ತೀಚೆಗೆ ರಾತ್ರಿ ವೇಳೆ ವಿಡಿಯೋ ಕಾಲ್ ಮಾಡಿದ್ದಳು. ತನ್ನನ್ನು ತಾನು ಯುವತಿ ಅರೆ ಬೆತ್ತಲು ಮಾಡಿಕೊಂಡಿದ್ದು, ಆಟೋ ಚಾಲಕನಿಗೂ ಬೆತ್ತಲಾಗುವಂತೆ ಪ್ರೇರಣೆ ನೀಡಿದ್ದಳು. ಬಳಿಕ ಅಶ್ಲೀಲ ಚಾಟಿಂಗನ್ನೂ ಮಾಡಿದ್ದ. ಗುರುತು ಪರಿಚಯ ಇರದಿದ್ದರೂ, ಹುಡುಗಿ ಜೊತೆ ಸಲುಗೆಯ ಮಾತನಾಡಿದ್ದ.
ಆದರೆ, ಬೆತ್ತಲೆ ವಿಡಿಯೋವನ್ನು ರೆಕಾರ್ಡ್ ಮಾಡಿದ್ದ ತಂಡ ಹಣಕ್ಕಾಗಿ ಡಿಮ್ಯಾಂಡ್ ಇಟ್ಟಿದೆ. ಆದರೆ ಆಟೋ ಚಾಲಕ ಇದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ. ವಾರ ಕಳೆಯುವಷ್ಟರಲ್ಲಿ ಆಟೋ ಚಾಲಕನ ಬೆತ್ತಲೆ ವಿಡಿಯೋ ಜಾಲತಾಣದಲ್ಲಿ ಬಂದಿತ್ತು. ಈತನ ವಿಡಿಯೋವನ್ನು ದುಷ್ಕರ್ಮಿಗಳು ಹರಿಯಬಿಟ್ಟಿದ್ದರು. ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಕರಣ ಹೆಚ್ಚುತ್ತಿದ್ದು, ಹುಡುಗಿ ಮಾತು ಕೇಳಿ ಬೆತ್ತಲಾಗಲು ಹೋದರೆ ಇಡೀ ಸಮಾಜದ ಮುಂದೆ ಬೆತ್ತಲಾಗುವ ಸ್ಥಿತಿ ಬರುತ್ತದೆ.
Mangalore Honey trap on WhatsApp Auto-driver goes naked video goes viral. She was introduced to him via Whatsapp calls and then she came naked on video call told him to go naked.
28-10-25 07:18 pm
Bangalore Correspondent
ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಸರ್ಕಾರಿ ಸ್ಥಳದ...
28-10-25 03:40 pm
ನವೆಂಬರ್ ಕುತೂಹಲ, ದೆಹಲಿ ಭೇಟಿಗೆ ತೆರಳಿದ ಡಿಕೆಶಿಗೆ...
27-10-25 10:52 pm
ಕಾಂಗ್ರೆಸಿನಲ್ಲಿ ಮತ್ತೊಬ್ಬ ಏಕನಾಥ್ ಶಿಂಧೆ, ಪವಾರ್ ಹ...
27-10-25 10:42 pm
ಡಿಕೆಶಿ ದಿಢೀರ್ ದೆಹಲಿಗೆ ದೌಡು ; ವಿಶೇಷ ಏನೂ ಇಲ್ಲ,...
26-10-25 07:33 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
28-10-25 03:36 pm
Mangalore Correspondent
ಲಾರಿ ಧಾವಂತಕ್ಕೆ ಹೆದ್ದಾರಿ ದಾಟುತ್ತಿದ್ದ ಪಾದಚಾರಿ ಬ...
27-10-25 11:01 pm
ತಾಯಿ- ಮಗಳು ತೆರಳುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿ...
27-10-25 10:25 pm
ಆಟವಾಡುತ್ತಲೇ ತೆರೆದ ಬಾವಿಗೆ ಬಿದ್ದ ಎರಡು ವರ್ಷದ ಹೆಣ...
27-10-25 10:03 pm
RSS Leader Kalladka Prabhakar Bhat: ಕಲ್ಲಡ್ಕ ಪ...
27-10-25 07:24 pm
27-10-25 05:29 pm
HK News Desk
ದುಬೈನಲ್ಲಿ ಕುಳಿತು ಬೆಂಗಳೂರಿನ ಫೈನಾನ್ಸ್ ಕಂಪನಿಗೆ ಕ...
27-10-25 04:04 pm
ಶಬರಿಮಲೆಯಲ್ಲಿ ಕದ್ದ ಚಿನ್ನ ಬಳ್ಳಾರಿ ಜುವೆಲ್ಲರಿಗೆ ಮ...
25-10-25 10:00 pm
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm