ಬ್ರೇಕಿಂಗ್ ನ್ಯೂಸ್
01-09-21 02:48 pm Headline Karnataka News Network ಕ್ರೈಂ
ಬೆಂಗಳೂರು, ಸೆ.1: ಯಶವಂತ ಪೊಲೀಸರ ಕೈಗೆ ಕತರ್ನಾಕ್ ಕಳ್ಳಿ ಮಹಿಳೆಯೊಬ್ಬಳು ಸಿಕ್ಕಿಬಿದ್ದಿದ್ದಾಳೆ. ಸಂಶಯಾಸ್ಪದ ನೆಲೆಯಲ್ಲಿ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಆಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಿನ್ನದ ಆಭರಣಗಳನ್ನು ಕದ್ದಿರುವ ವಿಚಾರವನ್ನು ಬಾಯಿಬಿಟ್ಟಿದ್ದಾಳೆ. 20 ಲಕ್ಷ ಮೌಲ್ಯದ 439 ಗ್ರಾಮ್ ಚಿನ್ನಾಭರಣವನ್ನು ವಿವಿಧ ಕಡೆಯಿಂದ ಮಹಿಳೆ ಕದ್ದಿರುವ ಬಗ್ಗೆ ತಪ್ಪೊಪ್ಪಿಗೆ ನೀಡಿದ್ದಾರೆ.
ಮಹಿಳೆಯನ್ನು ಲಗ್ಗೆರೆ ನಿವಾಸಿ ಮಮತಾ (40) ಎಂದು ಗುರುತಿಸಲಾಗಿದೆ. ಮೂಲತಃ ಆಂಧ್ರ ಪ್ರದೇಶದ ಮೂಲದ ನಿವಾಸಿಯಾಗಿರುವ ಈ ಮಹಿಳೆ ಬೆಂಗಳೂರಿನ ಲಗ್ಗೆರೆಯಲ್ಲಿ ವಾಸವಿದ್ದಾಳೆ. ಈಕೆಯ ಮೊದಲ ಗಂಡ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದು, ಆನಂತರ ಇತ್ತೀಚೆಗೆ ಹತ್ತಿರದ ಸಂಬಂಧಿಕನಾಗಿರುವ ವ್ಯಕ್ತಿಯನ್ನು ಮದುವೆಯಾಗಿದ್ದಳು. ಮದುವೆ ಬಳಿಕ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಹೋಗಿ ಬರೋಣ ಎಂದು ಇತ್ತೀಚೆಗೆ ಪ್ರವಾಸ ಬಂದಿದ್ದರು.

ಆಗಸ್ಟ್ 19 ಧರ್ಮಸ್ಥಳಕ್ಕೆ ಬಂದಿದ್ದ ದಂಪತಿ, ಮರುದಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದರು. ಈ ವೇಳೆ, ಹೊಟೇಲ್ ಒಂದರಲ್ಲಿ ಉಪಹಾರಕ್ಕೆ ಕುಳಿತಿದ್ದಾಗ, ಪಕ್ಕದ ಟೇಬಲ್ ನಲ್ಲಿ ಕುಟುಂಬವೊಂದು ಮಕ್ಕಳ ಜೊತೆಗೆ ಉಪಾಹಾರ ಸೇವನೆಯಲ್ಲಿದ್ದರು. ಆನಂತರ ಅಲ್ಲಿಂದ ಕುಟುಂಬ ಕೈ ತೊಳೆಯಲೆಂದು ಟೇಬಲ್ ನಲ್ಲಿ ಬ್ಯಾಗನ್ನು ಇಟ್ಟು ತೆರಳಿತ್ತು. ಇದೇ ಸಂದರ್ಭವನ್ನು ಉಪಯೋಗಿಸಿದ ಮಹಿಳೆ ಮತ್ತು ಆಕೆಯ ಗಂಡ ಬ್ಯಾಗನ್ನು ಎತ್ತಿಕೊಂಡು ತೆರಳಿದ್ದಾರೆ.
ಬ್ಯಾಗನ್ನು ದೂರಕ್ಕೆ ಒಯ್ದು ನೋಡಿದಾಗ ಬಂಗಾರದ ಆಭರಣಗಳಿದ್ದವು. ಆನಂತರ, ಬಂಗಾರವನ್ನು ಎತ್ತಿಕೊಂಡು ಬೆಂಗಳೂರಿಗೆ ಮರಳಿದ್ದು, ಯಾವುದೇ ಚಿಂತೆಯಿಲ್ಲದೆ ಜೀವನ ಮಾಡೋಣ ಎಂದುಕೊಂಡಿದ್ದರು. ಆನಂತರ ಆಭರಣಗಳನ್ನು ಒಂದೊಂದಾಗಿ ಜುವೆಲ್ಲರಿಗಳಲ್ಲಿ ಮಾರಲು ಆರಂಭಿಸಿದ್ದರು. ಆಗಸ್ಟ್ 25ರಂದು ಬೆಳಗ್ಗೆ ಮಹಿಳೆ ಮತ್ತು ಆಕೆಯ ಗಂಡ ಯಶವಂತಪುರದ ಎಸ್.ಕೆ. ಜುವೆಲ್ಲರಿಗೆ ಬಂದಿದ್ದು, ಸಂಶಯಾಸ್ಪದವಾಗಿ ಹೊರಗಡೆ ತಿರುಗಾಡಿಕೊಂಡಿದ್ದರು. ಇದೇ ವೇಳೆ, ಗಸ್ತಿನಲ್ಲಿದ್ದ ಪೊಲೀಸರು ಮಹಿಳೆಯನ್ನು ಪ್ರಶ್ನೆ ಮಾಡಿದ್ದಾರೆ. ಮಹಿಳೆ ತಡಬಡಾಯಿಸಿದ್ದು ಜೊತೆಗಿದ್ದ ಗಂಡ ಅಲ್ಲಿಂದ ಪರಾರಿಯಾಗಿದ್ದಾನೆ. ಗಂಡ ಓಡಿ ತಪ್ಪಿಸಿಕೊಂಡಿದ್ದರಿಂದ ಸಂಶಯಗೊಂಡ ಪೊಲೀಸರು ಮಹಿಳೆಯನ್ನು ಯಶವಂತಪುರ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.

ಪೊಲೀಸರು ಆಕೆಯ ಬ್ಯಾಗ್ ಪಡೆದು ತಪಾಸಣೆ ನಡೆಸಿದಾಗ, ಅದರಲ್ಲಿ ಹತ್ತು ಕಡೆ ಬಂಗಾರವನ್ನು ಅಡ ಇಟ್ಟಿರುವ ರಶೀತಿ ಸಿಕ್ಕಿದೆ. ಅಲ್ಲದೆ, ತಲಾ ನಾಲ್ಕು ಗ್ರಾಮ್ ಇದ್ದ ಎರಡು ಉಂಗುರವೂ ಸಿಕ್ಕಿದೆ. ಇಷ್ಟೊಂದು ಬಂಗಾರ ಅಡ ಇಟ್ಟಿರುವ ಬಗ್ಗೆ ಸಂಶಯಗೊಂಡು ಆಕೆಯನ್ನು ಮತ್ತಷ್ಟು ವಿಚಾರಣೆ ನಡೆಸಿದಾಗ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಂಗಾರ ಕಳವು ಮಾಡಿದ್ದನ್ನು ಹೇಳಿದ್ದಾಳೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಆಕೆಯ ಗಂಡನ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಗಂಡ ಸಿಕ್ಕಿದ ಬಳಿಕ ಇವರು ಈ ಹಿಂದೆಯೂ ಇದೇ ರೀತಿ ಕಳವು ನಡೆಸಿದ್ದಾರೆಯೇ ಎಂಬ ಬಗ್ಗೆ ತಿಳಿಯಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
Yeshwantpur police have arrested a woman and confiscated gold ornaments weighing 439 grams valued at Rs 20 lac. It is said that she had posed as a pilgrim, visited Kukke Subrahmanya, and stolen ornaments belonging to some devotees.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm