ಬ್ರೇಕಿಂಗ್ ನ್ಯೂಸ್
07-09-21 05:53 pm Headline Karnataka News Network ಕ್ರೈಂ
ಕೊಲಂಬೋ, ಸೆ.7: ಪಾಕಿಸ್ಥಾನ ಮೂಲದ ಏಳು ಮಂದಿ ನಿವಾಸಿಗಳು ಮೀನುಗಾರರ ಸೋಗಿನಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ಸಾಗಿಸುತ್ತಿದ್ದ ಪ್ರಕರಣವನ್ನು ಶ್ರೀಲಂಕಾದ ನೌಕಾಪಡೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಸಮುದ್ರ ಮಧ್ಯೆ ಪತ್ತೆಯಾಗಿದ್ದ ಮೀನುಗಾರಿಕೆ ಬೋಟನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಬರೋಬ್ಬರಿ 336 ಕೇಜಿ ಹೆರಾಯಿನ್ ಡ್ರಗ್ಸ್ ಪತ್ತೆಯಾಗಿದ್ದು ಏಳು ಮಂದಿ ಪಾಕಿಸ್ಥಾನೀಯರನ್ನು ಬಂಧಿಸಿದ್ದಾರೆ.
ಶ್ರೀಲಂಕಾದ ಮಾಲೆ ದ್ವೀಪದ ಬಳಿ ಪಾಕಿಸ್ಥಾನೀಯರು ಶ್ರೀಲಂಕಾದ ಬೋಟಿಗೆ ಹೆರಾಯಿನ್ ತುಂಬಿಸುತ್ತಿದ್ದಾಗ ನೌಕಾಪಡೆಯ ಕಣ್ಣಿಗೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. 336 ಕೇಜಿ ಹೆರಾಯಿನ್ ಮೌಲ್ಯ ಭಾರತದ ಕರೆನ್ಸಿಯಲ್ಲಿ 3.1 ಬಿಲಿಯನ್ ರೂಪಾಯಿ ಆಗುತ್ತದೆ. ಭಾರೀ ಪ್ರಮಾಣದ ಹೆರಾಯಿನ್ ದ್ರವ್ಯವನ್ನು ಪಾಕಿಸ್ಥಾನದಿಂದ ಮೀನುಗಾರಿಕಾ ಬೋಟಿನಲ್ಲಿ ಒಯ್ದು ಇನ್ನೊಂದು ಬೋಟಿಗೆ ತುಂಬಿಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಬೋಟಿನಲ್ಲಿ ಶಸ್ತ್ರಾಸ್ತ್ರ ಪತ್ತೆಯಾಗಿರುವ ಬಗ್ಗೆ ಮಾಹಿತಿಗಳಿಲ್ಲ.
ಕಳೆದ ಡಿಸೆಂಬರ್ ತಿಂಗಳಲ್ಲಿ ಇದೇ ರೀತಿ 2.5 ಬಿಲಿಯನ್ ರೂಪಾಯಿ ಮೌಲ್ಯದ ಹೆರಾಯಿನನ್ನು ಶ್ರೀಲಂಕಾ ನೌಕಾಪಡೆ ಅಧಿಕಾರಿಗಳು ಸಮುದ್ರ ಮಧ್ಯೆ ಪತ್ತೆ ಮಾಡಿದ್ದರು. ನಾಲ್ಕು ಮಂದಿ ಪಾಕಿಸ್ಥಾನ ಮೂಲದವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಡ್ರಗ್ಸನ್ನು ಪಾಕಿಸ್ಥಾನದ ಗ್ವಾದರ್ ಬಂದರಿನಿಂದ ತರಲಾಗಿತ್ತು ಅನ್ನೋ ಮಾಹಿತಿ ಬಯಲಾಗಿತ್ತು. ಗ್ವಾದರ್ ಬಂದರು ಚೀನಾ ಹಿಡಿತದಲ್ಲಿದ್ದು, ಅಲ್ಲಿಂದ ಹೆರಾಯಿನನ್ನು ತಂದು ಶ್ರೀಲಂಕಾ ಮೂಲದ ಬೋಟ್ ಗಳ ಮೂಲಕ ಸಾಗಿಸುತ್ತಿದ್ದರು.
ಪಾಕಿಸ್ಥಾನದಿಂದ ಡ್ರಗ್ಸ್ ಸರಬರಾಜು ಅಂತಾರಾಷ್ಟ್ರೀಯ ಮಾಫಿಯಾ ಆಗಿದ್ದು, ಭಾರತ ಮತ್ತು ಶ್ರೀಲಂಕಾಗೆ ಇದೇ ರೀತಿ ಮೀನುಗಾರಿಕಾ ಬೋಟ್ ಗಳಲ್ಲಿಯೇ ಡ್ರಗ್ಸ್ ಪೂರೈಕೆ ಆಗುತ್ತಾ ಇದೆ ಎನ್ನುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
The Sri Lankan Navy has seized 336 Kilogram of heroin from a trawler in the high seas off the coast of Male on September 1. The navy had apprehended the trawler in the high seas and brought the same to capital Colombo on September 4. Seven Pakistani nationals who were aboard this trawler have also been taken into custody.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am