ಬ್ರೇಕಿಂಗ್ ನ್ಯೂಸ್
08-09-21 10:53 am Headline Karnataka News Network ಕ್ರೈಂ
ಇಸ್ರೇಲ್, ಸೆ.8: ಊಟಕ್ಕೆ ಬಳಸುವ ಚಮಚಾಗಳನ್ನೇ ಆಯುಧಗಳನ್ನಾಗಿಸಿ ಅತಿ ಭದ್ರತೆಯ ಜೈಲಿನ ನೆಲ ಹಾಸನ್ನು ಅಗೆದು ಸುರಂಗ ಕೊರೆದು, ಆರು ಕೈದಿಗಳು ಹಾಲಿವುಡ್ ಸಿನಿಮಾ ಶೈಲಿಯಲ್ಲಿ ಪರಾರಿಯಾಗಿರುವ ಪ್ರಕರಣ ಇಸ್ರೇಲ್ನಲ್ಲಿ ನಡೆದಿದೆ.
ಇಸ್ರೇಲಿಗಳ ಮೇಲೆ ದಾಳಿ, ಹತ್ಯೆ ಸಂಚು, ಹತ್ಯೆ ಯತ್ನ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಪ್ಯಾಲಿಸ್ತೇನಿಯ ಆರು ಉಗ್ರರನ್ನು ಅತ್ಯಂತ ಬಿಗಿಭದ್ರತೆಯ ಗಿಲ್ಬೋವಾ ಜೈಲಿನಲ್ಲಿ ಇರಿಸಲಾಗಿತ್ತು. ಅವರೆಲ್ಲರೂ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಯುವಕರಾಗಿದ್ದ ಈ ಉಗ್ರರು ಶಿಕ್ಷೆ ಪೂರೈಸುವ ಹೊತ್ತಿಗೆ ವೃದ್ಧರಾಗುತ್ತಿದ್ದರು. ತಮಗೆ ಉಳಿಗಾಲ ಇಲ್ಲವೆಂದು ಅರಿತ ಪಾತಕಿಗಳು ಸಾವನ್ನು ಲೆಕ್ಕಿಸದೇ ಜೈಲಿನ ನೆಲಹಾಸು ಕೊರೆದು ಪರಾರಿಯಾಗಿದ್ದಾರೆ.



ಕಾಂಕ್ರಿಟ್ ಹಾಸನ್ನು ಚಮಚದಂತಹ ಸಣ್ಣ ಆಯುಧಗಳಿಂದ ಅಗೆದಿದ್ದಾರೆ. ಟಾಯ್ಲೆಟ್ ಪಕ್ಕದಲ್ಲಿ ಮೆತ್ತನೆಯ ಜಾಗ ನೋಡಿ ಹಲವು ದಿನಗಳ ಕಾಲ ಸುರಂಗ ಕೊರೆದು ಪಾರಾಗಿದ್ದಾರೆ. ತೀವ್ರ ತಪಾಸಣೆಯ ಜೈಲಿನಲ್ಲಿ ಅಷ್ಟೊಂದು ದೊಡ್ಡ ಸುರಂಗ ಕೊರೆದು ಪರಾರಿಯಾಗಿದ್ದು ನಿಜಕ್ಕೂ ಅಚ್ಚರಿಯಾಗಿದೆ ಎಂದು ಇಸ್ರೇಲಿ ಅಧಿಕಾರಿಗಳೇ ಹುಬ್ಬೇರಿಸಿದ್ದಾರೆ.
ರಾತ್ರಿ ನಡೆದ ಈ ಕೃತ್ಯ ಬೆಳಕಿಗೆ ಬರುತ್ತಿದ್ದಂತೆಯೇ ಎಚ್ಚೆತ್ತ ಇಸ್ರೇಲಿ ಭದ್ರತಾ ಪಡೆಗಳು, ಪರಾರಿಯಾದವರ ಶೋಧ ಕಾರ್ಯಕ್ಕೆ ಇಳಿದಿವೆ. ಬೆಳಗಿನ ಜಾವ ತಾನು ಜಾಮೀನಿನಲ್ಲಿ ಆಗಂತುಕರನ್ನು ಕಂಡಿರುವುದಾಗಿ ದಕ್ಷಿಣ ಇಸ್ರೇಲ್ನ ರೈತನೊಬ್ಬ ಮಾಹಿತಿ ನೀಡಿದ್ದು, ಆ ಭಾಗದತ್ತ ವಿಶೇಷ ತುಕಡಿಗಳನ್ನು ಕಳಿಸಲಾಗಿದೆ. ಏತನ್ಮಧ್ಯೆ, ಇಸ್ರೇಲಿ ಉಕ್ಕಿನ ಕೋಟೆ ಭೇದಿಸಿದ ಜಿಹಾದಿಗಳ ಸಾಹಸಕ್ಕೆ ಪ್ಯಾಲೆಸ್ತೇನಿ ಜನರು ಭಾರಿ ಸಂಭ್ರಮಾಚರಣೆ ಮಾಡಿದ್ದಾರೆ. ಗಾಜಾ ಪಟ್ಟಿ ಸೇರಿದಂತೆ ಅನೇಕ ಕಡೆಗಳಲ್ಲಿ ಪಟಾಕಿ ಸಿಡಿಸಿ ಜನ ಸಂಭ್ರಮಿಸಿದ್ದಾರೆ.
Israel launched a massive manhunt in the country's north and the occupied West Bank early Monday after six Palestinian prisoners tunneled out of their cell and escaped from a high-security facility in the biggest prison break of its kind in decades.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm