ನಿಶ್ಚಿತಾರ್ಥ ಆಗಿದ್ದ ಯುವತಿ ಮುಸ್ಲಿಂ ಯುವಕನ ಜೊತೆ ಪರಾರಿ ; ಹೆತ್ತವರ ದೂರು

08-09-21 11:38 am       Headline Karnataka News Network   ಕ್ರೈಂ

ಮದುವೆ ನಿಶ್ಚಿತಾರ್ಥ ಆಗಿದ್ದ ಯುವತಿಯೊಬ್ಬಳು ಚಿನ್ನಾಭರಣ ಮತ್ತು ಬ್ಯಾಂಕಿನಲ್ಲಿದ್ದ ಹಣದ ಜೊತೆಗೆ ಮುಸ್ಲಿಂ ಯುವಕನ ಜೊತೆ ಪರಾರಿಯಾಗಿರುವ ಬಗ್ಗೆ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಂಗಳೂರು, ಸೆ.8: ಮದುವೆ ನಿಶ್ಚಿತಾರ್ಥ ಆಗಿದ್ದ ಯುವತಿಯೊಬ್ಬಳು ವರನ ಕಡೆಯವರು ಕೊಟ್ಟಿದ್ದ ಚಿನ್ನಾಭರಣ ಮತ್ತು ಬ್ಯಾಂಕಿನಲ್ಲಿದ್ದ ಹಣದ ಜೊತೆಗೆ ಮುಸ್ಲಿಂ ಯುವಕನ ಜೊತೆ ಪರಾರಿಯಾಗಿರುವ ಬಗ್ಗೆ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ನಗರದ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಉತ್ತರ ಕರ್ನಾಟಕದ ಗದಗ ಜಿಲ್ಲೆಯ ನಿವಾಸಿಗಳಾಗಿದ್ದು ಹಲವು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದರು. ತಂದೆ, ತಾಯಿ ಗಾಂಧಿನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸಕ್ಕಿದ್ದಾರೆ. ತಾಯಿ ಯಶೋಧ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. 

ಆಗಸ್ಟ್ 21 ರಂದು ಬೇರೊಬ್ಬ ಯುವಕನ ಜೊತೆಗೆ ಮದುವೆ ನಿಶ್ಚಿತಾರ್ಥ ಆಗಿದ್ದು ವರನ ಕಡೆಯುವರು ಎಂಗೇಜ್ಮೆಂಟ್ ವೇಳೆ ಒಂದು ಲಕ್ಷ ರೂ. ಮೌಲ್ಯದ ಚಿನ್ನದ ಸರ ನೀಡಿದ್ದರು. ಅಲ್ಲದೆ, ಒಂದೂವರೆ ಲಕ್ಷ ಮೌಲ್ಯದ ಉಂಗುರ ಮತ್ತು ಕಿವಿಯೋಲೆ ಆಕೆಯಲ್ಲಿತ್ತು. ಅದನ್ನೂ ಒಯ್ದಿದ್ದಾಳೆ. ನಾವು ಕೂಲಿ ಕೆಲಸ ಮಾಡಿ ಕೂಡಿಟ್ಟಿದ್ದ ಒಂದು ಲಕ್ಷ ರೂ. ಹಣವನ್ನು ಮಹಮ್ಮದ್ ಆಲಿ ಎಂಬಾತನ ಖಾತೆಗೆ ವರ್ಗಾಯಿಸಿದ್ದಾಳೆ. ಆತನ ಜೊತೆಗೆ ಪರಾರಿಯಾಗಿರುವ ಶಂಕೆ ಇದ್ದು ಪೊಲೀಸರು ಪತ್ತೆ ಮಾಡಿ ಕೊಡುವಂತೆ ದೂರಿನಲ್ಲಿ ತಿಳಿಸಿದ್ದಾರೆ.

Engaged Women Flee by Taking Gold and Money in Mangalore.