ಬ್ರೇಕಿಂಗ್ ನ್ಯೂಸ್
09-09-21 09:54 pm Headline Karnataka News Network ಕ್ರೈಂ
'ನಮಸ್ತೆ ಲಂಡನ್' ಸೇರಿ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅಲಂಕೃತಾ ಸಹಾಯ್ ಮನೆಗೆ ನುಗ್ಗಿ ನಟಿಯನ್ನು ಹೊಡೆದು ಹಣ, ಒಡವೆ ದೋಚಿ ಮೂವರು ದರೋಡೆಕೋರರು ಪರಾರಿಯಾಗಿದ್ದಾರೆ.
ಬಾಲಿವುಡ್ ನಟಿ ಅಲಂಕೃತಾ ಸಹಾಯ್ ಚಂಡೀಘಡದ ತಮ್ಮ ಹೊಸ ಮನೆಯಲ್ಲಿ ಒಬ್ಬರೇ ಇರುವ ಸಮಯದಲ್ಲಿ ಮನೆಗೆ ನುಗ್ಗಿದ ಮೂವರು ದರೋಡೆಕೋರರು ನಟಿಗೆ ಚಾಕು ತೋರಿಸಿ ಹೆದರಿಸಿದ್ದಾರೆ, ಹಲ್ಲೆ ಸಹ ಮಾಡಿದ್ದಾರೆ. ನಟಿಯು ಹೆಗೊ ತಪ್ಪಿಸಿಕೊಂಡು ತಮ್ಮ ರೂಮ್ ಸೇರಿಕೊಂಡಿದ್ದಾಳೆ, ರೂಮ್ನ ಒಳಗೂ ನುಗ್ಗಿದಾಗ ಬಾತ್ರೂಂ ಸೇರಿಕೊಂಡಿದ್ದಾಳೆ.
ಆದರೆ ದರೋಡೆಕೋರರು ನಟಿಯನ್ನು ಹೆದರಿಸಿ, ಪ್ರಾಣ, ಮಾನ ಬೆದರಿಕೆ ಹಾಕಿ ಆಕೆಯ ಎಟಿಎಂ ಕಾರ್ಡ್, ಪಿನ್ ನಂಬರ್, ಮನೆಯಲ್ಲಿದ್ದ ಹಣ ಚಿನ್ನಗಳನ್ನು ದೋಚಿಕೊಂಡು ಹೋಗಿದ್ದಾರೆ.
ಅಲಂಕೃತಾ ಸಹಾಯ್ ಕೆಲವು ದಿನಗಳ ಹಿಂದಷ್ಟೆ ಚಂಡೀಘಡದ ಸೆಕ್ಟರ್ 27 ನಲ್ಲಿ ಹೊಸ ಮನೆ ಖರೀದಿಸಿದ್ದರು. ಮಧ್ಯಾಹ್ನದ ವೇಳೆ ಕೆಲಸದ ಮಹಿಳೆ ಮನೆಗೆ ಬರಲೆಂದು ಮನೆಯ ಬಾಗಿಲನ್ನು ತೆರೆದಿಟ್ಟದ್ದರು. ಇದೇ ಅವಕಾಶವನ್ನು ಬಳಸಿಕೊಂಡು ದರೋಡೆಕೋರರು ಮನೆಗೆ ನುಗ್ಗಿದ್ದಾರೆ.
ದರೋಡೆಕೋರರು ಮನೆಗೆ ನುಗ್ಗಿದ ಸಮಯದಲ್ಲಿ ಮನೆಯಲ್ಲಿ ಅಲಂಕೃತಾ ಒಬ್ಬರೇ ಇದ್ದರು. ಆ ಮನೆಯಲ್ಲಿ ಅಲಂಕೃತಾ ತನ್ನ ಪೋಷಕರೊಂದಿಗೆ ವಾಸವಿದ್ದಾರೆ. ಆದರೆ ಅವರ ಪೋಷಕರು ಕೆಲ ದಿನಗಳ ಹಿಂದಷ್ಟೆ ಪ್ರವಾಸ ಹೋಗಿದ್ದರು. ಹಾಗಾಗಿ ಅಲಂಕೃತಾ ಒಬ್ಬರೇ ಮನೆಯಲ್ಲಿದ್ದರು.
ಪ್ರಕರಣದ ಬಗ್ಗೆ ನಟಿ ಅಲಂಕೃತಾ ಸೆಕ್ಟರ್ 26 ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ಮನೆಯ ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಮೂವರು ದರೋಡೆಕೋರರಲ್ಲಿ ಒಬ್ಬನು ಕೆಲವು ದಿನಗಳ ಹಿಂದಷ್ಟೆ ನಟಿಯ ಮನೆಗೆ ಬಂದಿದ್ದ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಹೊಸ ಮನೆಗೆ ಕೆಲವು ಪೀಠೋಪಕರಣಗಳನ್ನು ಅಲಂಕೃತಾ ತರಿಸಿಕೊಂಡಿದ್ದರು. ಪೀಠೋಪಕರಣಗಳನ್ನು ಡೆಲಿವರಿ ಮಾಡಲು ಆತ ಮನೆಗೆ ಹೋಗಿದ್ದ. ಮನೆಯನ್ನು ಚೆನ್ನಾಗಿ ನೋಡಿಕೊಂಡು ಕೆಲವರು ದುರುಳರನ್ನು ಜೊತೆ ಮಾಡಿಕೊಂಡು ಮನೆ ದೋಚಲು ಬಂದಿದ್ದ. ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ.
In a broad daylight incident, three miscreants allegedly robbed model-turned-actress Alankrita Sahai of Rs 6 lakh at knifepoint at her house in Sector 27. One of the suspects has been identified by the victim. The police said the complainant had shifted to the city around a month ago. She and her parents had rented the second floor of the house and the victim’s parents were out of the city for the past 10 days.
29-06-25 10:48 pm
Bangalore Correspondent
DK Shivakumar, R Ashok: ಡಿಕೆಶಿ ಜಾತಕ ಸರಿಯಿಲ್ಲ...
29-06-25 10:33 pm
Grace Ministry Theological Bible College, Ban...
29-06-25 04:49 pm
Fact Finding, Police, Mangalore Mob Lynching...
29-06-25 03:04 pm
RCB, Three IPS Officers Suspend: ಚಿನ್ನಸ್ವಾಮಿ...
28-06-25 04:27 pm
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
27-06-25 10:17 pm
Mangalore Correspondent
ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮ...
27-06-25 04:56 pm
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
29-06-25 11:23 pm
Mangalore Correspondent
Udupi Crime, Kapu, Railway: ರೈಲಿನಲ್ಲಿ ಉಡುಪಿಗೆ...
29-06-25 11:15 pm
Davanagere ATM Robbery : ಪೆಟ್ರೋಲ್ ಸುರಿದು ಎಟಿಎ...
29-06-25 04:26 pm
Tumakuru Husband Murder, Wife arrest, Crime:...
29-06-25 02:26 pm
Rape, Mangalore Crime, Someshwara Beach: ಇನ್ಸ...
28-06-25 07:30 pm