ಬ್ರೇಕಿಂಗ್ ನ್ಯೂಸ್
19-09-21 01:52 pm Mangaluru Correspondent ಕ್ರೈಂ
Photo credits : Representational
ಪಡುಬಿದ್ರಿ, ಸೆ.19 : ಮಂಗಳೂರು- ಮುಂಬಯಿ ಕೊಂಕಣ ರೈಲ್ವೆಯಲ್ಲಿ ಕಳ್ಳತನ ಪ್ರಕರಣ ಮುಂದುವರಿದಿದ್ದು, ಉಡುಪಿ ಜಿಲ್ಲೆಯ ಎಲ್ಲೂರು ನಿವಾಸಿ ಸುಚಿತಾ ಕುಸುಮಾಕರ್ ಶೆಟ್ಟಿಯವರ ಬೆಲೆ ಬಾಳುವ ಮೊಬೈಲ್ ಸಹಿತ ನಗದು ಇದ್ದ ಪರ್ಸ್ ಅನ್ನು ಸೆ.16 ರ ರಾತ್ರಿ ಕಳವು ಮಾಡಿರುವ ಬಗ್ಗೆ ದೂರು ನೀಡಿದ್ದಾರೆ.
ಪರ್ಸ್ನಲ್ಲಿ 75 ಸಾವಿರ ರೂ. ಮೌಲ್ಯದ ಮೊಬೈಲ್, 12 ಸಾವಿರ ರೂ. ನಗದು ಇನ್ನಿತರ ವಸ್ತುಗಳಿದ್ದವು. ಸುಚಿತಾ ಅವರು ಬೆಲೆ ಬಾಳುವ ವಜ್ರ ಮತ್ತು ಚಿನ್ನಾಭರಣಗಳನ್ನು ಸೀಟ್ನಡಿ ಇರಿಸಿದ್ದ ಬ್ಯಾಗ್ನಲ್ಲಿಟ್ಟಿದ್ದರು. ಹಾಗಾಗಿ ಅವುಗಳು ಕಳವಾಗಿಲ್ಲ. ಮುಂಬೈ ಬಂಟರ ಸಂಘದ ನಗರ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಕುಸುಮಾಕರ್ ಶೆಟ್ಟಿ ಮುಂಬಯಿಗೆ ತೆರಳಲು ಉಡುಪಿಯಲ್ಲಿ ಮತ್ಸ್ಯ ಗಂಧ ರೈಲು ಹತ್ತಿದ್ದರು. ರೈಲಿನ ಎಸಿ ಕೋಚ್ನಲ್ಲಿ ಸಹೋದರಿಯೊಂದಿಗೆ ಪ್ರಯಾಣ ಬೆಳೆಸಿದ್ದರು.
ಉಡುಪಿಯಿಂದ ಹೊರಟ ರೈಲು ತಡರಾತ್ರಿ ಪನ್ವೇಲ್ ಸಮೀಪದ ರೋಹಾ - ನಾಗೋಥಾಣೆಗೆ ತಲುಪಿದ್ದಾಗ ಸುಚಿತಾರಿಗೆ ನಿದ್ದೆ ಆವರಿಸಿದ್ದು ಮುಂಜಾನೆ 3.40ರ ವೇಳೆ ತಲೆದಿಂಬಿನಡಿ ಇಟ್ಟಿದ್ದ ಪರ್ಸ್ನ್ನು ಕಳ್ಳರು ಎಳೆದುಕೊಂಡು ಹೋಗಿದ್ದಾರೆ. ಕಂಪಾರ್ಟ್ಮೆಂಟಿನ ಕೊನೆಯ ಸೀಟ್ ನಲ್ಲಿ ಮಲಗಿದ್ದ ಕಾರಣ ಪರ್ಸ್ ಎಳೆದು ಬಾಗಿಲಿನ ಮೂಲಕ ಓಡಿ ಹೋಗಿದ್ದಾನೆ. ಈ ಸಂದರ್ಭ ಅವರು ಬೊಬ್ಬಿಟ್ಟರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ.
ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರ ಪ್ರಕಾರ, ಮುಂಬೈಯಿಂದ ಮಂಗಳೂರಿಗೆ ಬರುವ ಮತ್ಸ್ಯ ಗಂಧ ರೈಲಿನಲ್ಲಿ ಎರಡು ಕುಖ್ಯಾತ ಕಳ್ಳರ ತಂಡಗಳು ನಿರಂತರ ಕಳವು ಕೃತ್ಯದಲ್ಲಿ ತೊಡಗಿವೆ. ಆದರೆ ರೈಲ್ವೇ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ.
Udupi Robbery in Matsyagandha train Man robbed of 75 Thousand. The railway police are showing negligence it is said in this case.
24-09-25 03:55 pm
Bangalore Correspondent
ಕರ್ನಾಟಕ ಜನಸಂದಣಿ ನಿಯಂತ್ರಣ ಕಾಯ್ದೆ ರೆಡಿ ; ಏಳು ವರ...
23-09-25 07:26 pm
Karnataka High court, Caste census: ಜಾತಿ ಗಣತಿ...
22-09-25 07:07 pm
ಚಾಮುಂಡೇಶ್ವರಿ ಹೆಣ್ಣಿನ ಶಕ್ತಿಯ ಪ್ರತೀಕ, ದಸರಾ ನ್ಯಾ...
22-09-25 03:31 pm
ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು...
22-09-25 10:54 am
24-09-25 01:07 pm
HK News Desk
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ನಿಲ್ಲಿಸಿದರೆ ಟ್ರಂ...
24-09-25 12:20 pm
Narendra Modi, Xi Jinping: ಭಾರತದಲ್ಲಿ ಸರ್ಕಾರ ಬ...
23-09-25 08:29 pm
ಕೋಲ್ಕತ್ತಾದಲ್ಲಿ ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಐವ...
23-09-25 11:05 am
Pakistans Khyber Pakhtunkhwa: ಪಾಕಿಸ್ತಾನದ ಖೈಬರ...
22-09-25 06:58 pm
23-09-25 11:01 pm
Mangalore Correspondent
ತುಳು ಸಂಸ್ಕೃತಿ ಬಗ್ಗೆ ಮತ್ತಷ್ಟು ಸಂಶೋಧನೆ ಆಗಬೇಕಾಗಿ...
23-09-25 06:58 pm
ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡೀಪ...
23-09-25 05:49 pm
ದಸರಾ ನಂಬಿಕೆ, ಒಗ್ಗಟ್ಟಿನ ಪ್ರತೀಕ ; ಎನ್ಎಂಪಿಎ ಅಧ್ಯ...
22-09-25 10:08 pm
ಜಿಎಸ್ಟಿ 2.0 ಜನಸಾಮಾನ್ಯರ ಹಿತದೃಷ್ಟಿಯಿಂದ ತೆರಿಗೆ ಸ...
22-09-25 04:09 pm
23-09-25 11:01 am
HK News Desk
ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ; ಎ...
22-09-25 08:16 pm
IAS Officer Manivannan, Cyber Fraud: ಹಿರಿಯ ಐಎ...
21-09-25 02:30 pm
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am