ಬ್ರೇಕಿಂಗ್ ನ್ಯೂಸ್
20-09-21 10:38 am Mangaluru Correspondent ಕ್ರೈಂ
ಉಳ್ಳಾಲ, ಸೆ.20: ಉಳ್ಳಾಲ ಮಾಸ್ತಿಕಟ್ಟೆ ಕುಮೇರು ಪಾಡಾಂಗರ ಪೂಮಾಲೆ ಭಗವತೀ ಕ್ಷೇತ್ರದ ಅಣ್ಣಪ್ಪ ದೈವದ ಪಂಚಲೋಹದ ಮೊಗವನ್ನ ಕಳ್ಳರು ಎಗರಿಸಿದ್ದಾರೆ.
ಮಾಸ್ತಿಕಟ್ಟೆಯ ತೀಯ ಸಮಾಜ ಕುಟುಂಬಸ್ಥರ ಆರಾಧ್ಯ ಕುಮೇರು ಪಾಡಾಂಗರ ಪೂಮಾಲೆ ಭಗವತೀ ಕ್ಷೇತ್ರದ ಅಣ್ಣಪ್ಪ ದೈವದ ಗುಡಿಯ ಬಾಗಿಲ ಬೀಗ ಒಡೆದು ಪಂಚಲೋಹದ ಮೊಗವನ್ನ ಕಳವು ಮಾಡಲಾಗಿದೆ. ಮೊಗವನ್ನ ಕ್ಷೇತ್ರಕ್ಕೆ ದಾನ ಮಾಡಿದ್ದ ಹತ್ತಿರದ ಮನೆಯ ನಿವಾಸಿ ನವೀನ್ ಡಿ ಕುಟ್ಟಪ್ಪ ಅವರು ಬೆಳಗ್ಗೆ ವಾಕಿಂಗ್ ಮಾಡುವಾಗ ಅಣ್ಣಪ್ಪನ ಗುಡಿಯ ಬಾಗಿಲು ತೆರೆದಿರುವುದನ್ನ ಕಂಡಿದ್ದಾರೆ. ಕೂಡಲೇ ಅವರು ದೈವಸ್ಥಾನದ ಮುಖ್ಯ ಅರ್ಚಕರಾದ ಭುಜಂಗ ಅವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರ್ಚಕರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ದೈವಸ್ಥಾನದ ಹತ್ತಿರದ ಜಾಗೃತ ವಿವಿಧೋದ್ದೇಶ ಸಂಘ ಇನ್ನಿತರ ಮಳಿಗೆಗಳ ಸಿಸಿ ಕ್ಯಾಮೆರಾ ಫೂಟೇಜನ್ನ ತಪಾಸಣೆ
ನಡೆಸುತ್ತಿದ್ದಾರೆ.
ಕೇವಲ ಮೊಗವನ್ನ ಮಾತ್ರ ಕದ್ದೊಯ್ದರು !
ಅಣ್ಣಪ್ಪ ದೈವದ ಗುಡಿಯ ಬೀಗ ಒಡೆದ ಕಳ್ಳರು ಒಳಗಿದ್ದ ಸುಮಾರು ಒಂದು ಲಕ್ಷ ಬೆಳೆ ಬಾಳುವ ಪಂಚ ಲೋಹದ ಮೊಗವನ್ನು ಮಾತ್ರ ಎಗರಿಸಿ ಅಲ್ಲಿದ್ದ ಪ್ರಭಾವಳಿ, ಬೆಳ್ಳಿ ಮತ್ತು ಲೋಹದ ಕಡ್ಸಲೆ ಇತರ ದೈವೀ ಪರಿಕರಗಳನ್ನು ಹಾಗೇ ಬಿಟ್ಟು ಹೋಗಿದ್ದಾರೆ. ಕಳ್ಳರು ದೈವಸ್ಥಾನದ ಪ್ರಾಂಗಣದಲ್ಲಿರುವ
ಪಾಡಂಗರ ಭಗವತಿ ಗುಡಿಯ ಬಾಗಿಲ ಬೀಗವನ್ನೂ ಮುರಿಯಲು ಪ್ರಯತ್ನಿಸಿ ವಿಫಲವಾಗಿದ್ದು ಕಂಡುಬಂದಿದೆ.
ಉಳ್ಳಾಲದಂತಹ ಸೂಕ್ಷ್ಮ ಪ್ರದೇಶದಲ್ಲಿ ಹಿಂದೂಗಳ ನಂಬಿಕೆಗೆ ಘಾಸಿ ಉಂಟಾಗುವ ಕುಕೃತ್ಯಗಳು ನಡೆಯುತ್ತಿದ್ದು ಪೊಲೀಸರು ಆದಷ್ಟು ಶೀಘ್ರನೆ ಕಳ್ಳತನ ನಡೆಸಿದ ಆರೋಪಿಗಳನ್ನ ಬಂಧಿಸಬೇಕೆಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಆಗ್ರಹಿಸಿದ್ದಾರೆ.
ಕಾರಣೀಕ ಕ್ಷೇತ್ರ ಪೂಮಾಲೆ ಭಗವತಿ
ಕ್ಷೇತ್ರದ ಪರಿವಾರ ದೈವ ನಾಗನ ಗುಡಿಯ ನಾಗನ ಕಲ್ಲನ್ನು ವರುಷಗಳ ಹಿಂದೆ ನಾಲ್ವರು ಅನ್ಯಮತೀಯರು ಸಮೀಪದ ಬಾವಿಗೆ ಎಸೆದಿದ್ದರಂತೆ. ಅದರ ಪ್ರತಿಫಲವಾಗಿ ನಾಲ್ವರಲ್ಲಿ ಓರ್ವ ಸಾವನ್ನಪ್ಪಿದ್ದು, ಇನ್ನುಳಿದವರು ಕಷ್ಟಕ್ಕೆ ತುತ್ತಾಗಿ ಕ್ಷೇತ್ರಕ್ಕೆ ತಪ್ಪು ಕಾಣಿಕೆ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಅಣ್ಣಪ್ಪ ದೈವವೂ ಕಾರಣಿಕ ಶಕ್ತಿಯಾಗಿದ್ದು ಅದರಿಂದಲೇ ಅತೀ ಶೀಘ್ರದಲ್ಲಿ ಕಳ್ಳನ ಬಂಧನವಾಗುವುದೆಂದು ದೈವಸ್ಥಾನದ ಅರ್ಚಕರು ಹೇಳಿದ್ದಾರೆ.
Ullal Padangra Bhagavathi temple robbery lakhs worth idol stolen. When the priest opened the temple in the morning lakhs worth idol was missing. The ullal police are now investigating the case.
29-06-25 04:49 pm
Sponsored - Grace Ministry
Fact Finding, Police, Mangalore Mob Lynching...
29-06-25 03:04 pm
RCB, Three IPS Officers Suspend: ಚಿನ್ನಸ್ವಾಮಿ...
28-06-25 04:27 pm
Five Tigers Poisoned MM Hills, Three Arrested...
28-06-25 12:14 pm
ಹುಲಿ ದಾಳಿ ಮಾಡಿದ್ದ ಹಸುವಿಗೆ ವಿಷ ಹಾಕಿದ್ದ ಸ್ಥಳೀಯರ...
27-06-25 10:42 pm
29-06-25 11:13 am
HK News Desk
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
400 ಕಿಮೀ ಎತ್ತರದ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ...
27-06-25 01:44 pm
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
27-06-25 10:17 pm
Mangalore Correspondent
ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮ...
27-06-25 04:56 pm
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
29-06-25 04:26 pm
HK News Desk
Tumakuru Husband Murder, Wife arrest, Crime:...
29-06-25 02:26 pm
Rape, Mangalore Crime, Someshwara Beach: ಇನ್ಸ...
28-06-25 07:30 pm
Mangalore Luxury Car Tax Scam, G Wagon Merced...
28-06-25 05:35 pm
Hyderabad Couple Arrested, for Livestream S*x...
27-06-25 10:59 pm