ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿ...!

10-09-20 11:01 am       Headline Karnataka News Network   ಕ್ರೈಂ

ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿ, ಹೊಸಪೇಟೆಯಲ್ಲಿ ನಡೆದ ಮನಕಲಕುವ ಘಟನೆ

ಬಳ್ಳಾರಿ, ಸೆಪ್ಟೆಂಬರ್ 10: ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿಯಾದ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ. ಇಲ್ಲಿಯ ಚಿತ್ತವಾಡಗಿಯಲ್ಲಿ ಈ ಘಟನೆ ನಡೆದಿದೆ. ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಿವಾಸಿ ಗೌಸಿಯಾ(18) ಮೃತ ನವವಿವಾಹಿತೆ ಎಂದು ಗುರುತಿಸಲಾಗಿದೆ.

ಗೌಸಿಯಾ ಎರಡು ತಿಂಗಳ ಹಿಂದೆ ಜೂನ್ 28 ರಂದು ಹೊಸಪೇಟೆಯ ಚಿತ್ತವಾಡ್ಗಿಯ ರಫೀಕ್ ಎಂಬ ಯುವಕನೊಂದಿಗೆ ವಿವಾಹವಾಗಿದ್ದರು. ಆದರೆ ಎರಡು ತಿಂಗಳೊಳಗೆ ನವವಿವಾಹಿತೆ ಮೃತಪಟ್ಟಿರುವುದು ಅನುಮಾಸ್ಪಕ್ಕೆ ದಾರಿ ಮಾಡಿಕೊಟ್ಟಿದೆ. ಈ ನಡುವೆ ಗೌಸಿಯ ಮೊದಲ ಸಹೋದರ ಸಿಕಂದರ್ ಭಾಷಾ ಪೊಲೀಸ್ ಠಾಣೆಗೆ ದೂರು ನೀಡಿದ್ದು ಗೌಸಿಯಾ ಮನೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಎರಡನೇ ಸಹೋದರ ಮಹೆಬೂದ ಹುಸೇನ್ ಅವರು ಪ್ರತ್ಯೇಕ ದೂರು ನೀಡಿದ್ದು, ಸಹೋದರಿ ಗೌಸಿಯ ಅವರನ್ನು ಉದ್ದೇಶ ಪೂರಕವಾಗಿ ಕೊಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಪ್ರತ್ಯೇಕ ಎರಡು ದೂರು ದಾಖಲಿಸಿಕೊಂಡ ಹೊಸಪೇಟೆಯ ಚಿತ್ತವಾಡಿಗೆ ಪೊಲೀಸ್ ತನಿಖೆ ಆರಂಭಿಸಿದ್ದಾರೆ. ಹಲವಾರು ದಿನಗಳಿಂದ ವರದಕ್ಷಿಣೆ ನೀಡುವಂತೆ ಗೌಸಿಯಾ ಅವರಿಗೆ ಕಿರುಕುಳ ನೀಡಲಾಗುತ್ತಿತ್ತು ಎಂದು ಪೊಷಕರು ಆರೋಪಿಸಿದ್ದಾರೆ.

Join our WhatsApp group for latest news updates