ಬ್ರೇಕಿಂಗ್ ನ್ಯೂಸ್
27-09-21 10:52 am Headline Karnataka News Network ಕ್ರೈಂ
ತಿರುವನಂತಪುರ, ಸೆ.26: ಒಂದನೇ ಕ್ಲಾಸ್ ಓದುತ್ತಿದ್ದ ಹೆಣ್ಣು ಮಗುವಿನ ಮೇಲೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನಿಗೆ ತೃಶ್ಶೂರಿನ ವಿಶೇಷ ತ್ವರಿತ ನ್ಯಾಯಾಲಯ 29 ವರ್ಷಗಳ ಕಠಿಣ ಶಿಕ್ಷೆ ಜಾರಿಗೊಳಿಸಿದೆ.
ಆರೂವರೆ ವರ್ಷದ ಏನೂ ಅರಿಯದ ಮುಗ್ಧ ಕಂದಮ್ಮನ ಮೇಲೆ ಶಾಲೆಯ ಶಿಕ್ಷಕನೇ ಲೈಂಗಿಕ ಕಿರುಕುಳ ನೀಡಿದ್ದು ಅಸಹ್ಯ. ಇಂಥ ಘೋರ ಪ್ರಮಾದವನ್ನು ಮಾಡಿದ್ದಕ್ಕಾಗಿ ಶಿಕ್ಷಕನಿಗೆ ಘೋರ ಶಿಕ್ಷೆಯನ್ನೇ ನೀಡಬೇಕಾಗಿದೆ ಎಂದು ನ್ಯಾಯಾಧೀಶರು ತೀರ್ಪು ಘೋಷಣೆ ಮಾಡಿದ್ದಾರೆ.

2012ರಲ್ಲಿ ಶಾಲೆಯಿಂದ ಸ್ಟಡಿ ಟೂರ್ ತೆರಳಿದ್ದ ಸಂದರ್ಭದಲ್ಲಿ ಆರೂವರೆ ವರ್ಷದ ಮಗುವಿನ ಮೇಲೆ ಶಿಕ್ಷಕನೇ ಕಿರುಕುಳ ನೀಡಿದ್ದ. ಈ ಬಗ್ಗೆ ಮಗು ಮನೆಗೆ ಬಂದ ಬಳಿಕ ಹೆತ್ತವರಿಗೆ ತಿಳಿಸಿದ್ದರಿಂದ ಪೊಲೀಸ್ ದೂರು ದಾಖಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ಘೋಷಣೆ ಮಾಡಿದ್ದು, ಗುರು ಅಂದರೆ ಎಲ್ಲ ಉತ್ತಮ ಗುಣಗಳನ್ನು ಹೊಂದಿರಬೇಕು. ವಿದ್ಯಾರ್ಥಿಗಳಿಗೆ ಮಾದರಿ ಅನ್ನುವಂತಿರಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಗುರು ಅಂದರೆ, ಶಿಕ್ಷಕ ಮಾತ್ರವಲ್ಲ. ಆತ ಉತ್ತಮ ಗೆಳೆಯ, ತತ್ವಶಾಸ್ತ್ರಜ್ಞ, ತರಬೇತುದಾರ, ಸಮಾಜ ಘಟಕದ ಇಂಜಿನಿಯರ್ ಮತ್ತು ರಾಷ್ಟ್ರ ನಿರ್ಮಾಣದ ಕಾಯಕ ಯೋಗಿ. ಭಾರತೀಯ ತತ್ವಶಾಸ್ತ್ರದಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ಆತನಿಂದ ಒದಗುವ ಸ್ಫೂರ್ತಿ ಒಬ್ಬನಿಗಷ್ಟೇ ಅಲ್ಲ, ಇಡೀ ಕುಟುಂಬಕ್ಕೆ ಸಿಗಬೇಕು. ಆಯಾ ಶಾಲೆ, ಶಿಕ್ಷಣ ಸಂಸ್ಥೆಗೆ ಸಿಗಬೇಕು. ಅಂದರೆ, ಜೀವನದ ಎಲ್ಲ ವಿಚಾರಗಳಲ್ಲಿ ಆತ ಮಾದರಿ ಆಗಿರಬೇಕು. ಆತ ಜ್ಞಾನಿಯಾಗಿರಬೇಕು, ಅಷ್ಟೇ ಅಲ್ಲಾ ಜೀವನದ ಶಿಕ್ಷಣವನ್ನೂ ವಿದ್ಯಾರ್ಥಿಗಳಿಗೆ ಕಲಿಸುವಂತಿರಬೇಕು. ಆಮೂಲಕ ರಾಷ್ಟ್ರ ಕಟ್ಟುವ ಕಾಯಕದಲ್ಲಿ ನಿರತರಾಗಬೇಕು ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ವಿಶೇಷವಾಗಿ ಉಲ್ಲೇಖಿಸಿದ್ದಾರೆ.
A POSCO Court has sentenced a moral science teacher to imprisonment for a period of 29 years for sexually assaulting a Class-1 student during a school picnic.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am