ಬ್ರೇಕಿಂಗ್ ನ್ಯೂಸ್
27-09-21 10:36 pm Headline Karnataka News Network ಕ್ರೈಂ
ಚಿಕ್ಕಬಳ್ಳಾಪುರ, ಸೆ.27: ತಮ್ಮ ಅಕ್ರಮ ಸಂಬಂಧ ಪುತ್ರಿಗೂ ತಿಳಿದು ಮರ್ಯಾದೆ ಬಟಾ ಬಯಲಾಯ್ತು ಅಂತ ಮುಜುಗರ ಪಟ್ಟುಕೊಂಡ ತಾಯಿ ತನ್ನ ಕರುಳ ಕುಡಿಯನ್ನೇ ಪ್ರಿಯಕರನ ಜೊತೆ ಸೇರಿ ಕತ್ತು ಹಿಸುಕಿ ಕೊಲೆಗೈದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಾಟದಹೊಸಹಳ್ಳಿ ಎಂಬಲ್ಲಿ ಸೆ.5 ರಂದು ಬಾವಿಯಲ್ಲಿ ಯುವತಿ ಶವ ಪತ್ತೆಯಾಗಿತ್ತು. ತನಿಖೆ ನಡೆಸಿದ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬಿಂಬಿಸಿದ್ದ ಮೃತ ಯುವತಿಯ ತಂದೆ, ತಾಯಿ, ದೊಡ್ಡಪ್ಪನೇ ಕೊಲೆಗಾರರಾಗಿದ್ದು ಪೊಲೀಸರನ್ನು ಕೈಕೋಳ ತೊಡಿಸಿದ್ದಾರೆ.
ಮುಸಲ್ಮಾನಪುರ ಗ್ರಾಮದ ಪರ್ವೀನ್ ಮುಬಾರಕ್ (34) ಎಂಬ ಯುವತಿಯ ಕೊಲೆ ನಡೆದಿದ್ದು ಪಾಳು ಬಾವಿಯಲ್ಲಿ ಶವ ಪತ್ತೆಯಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ಬಳಿಕ ಮೃತಳ ದೊಡ್ಡಪ್ಪ ಮೈದಗೋಳಂ ಪ್ಯಾರೇಜಾನ್, ಮೃತಳ ತಾಯಿ ಗುಲ್ಜಾರ್ ಬಾನು, ಮೃತಳ ತಂದೆ ಪ್ಯಾರೇಜಾನ್ ಅವರನ್ನು ಬಂಧಿಸಿದ್ದಾರೆ.
ಮೃತಳ ತಾಯಿ ಗುಲ್ಜಾರ್ ಬಾನುಗೆ ತನ್ನ ಅಕ್ಕನ ಗಂಡನ ಜೊತೆ ಅನೈತಿಕ ಸಂಬಂಧ ಇದ್ದುದು ಮಗಳಿಗೆ ಗೊತ್ತಾಗಿ ಪ್ರಶ್ನೆ ಮಾಡಿದ್ದಳು. ಅದೇ ಕಾರಣಕ್ಕೆ ತಾಯಿ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ್ದಾಳೆ.
ಮೃತ ಪರ್ವೀನ್ ಮುಬಾರಕ್ 10 ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ಪ್ರಿಯಕರ ಶಿವಪ್ಪನೊಂದಿಗೆ ವಾಸವಿದ್ದಳು. ಆದ್ರೆ ಪ್ರಿಯಕರ ಶಿವಪ್ಪ ಕೆಲ ಸಮಯದಲ್ಲಿ ಬಳಿಕ ಮೃತಪಟ್ಟಿದ್ದ. ನಂತರ ಮತ್ತೊಬ್ಬ ವಿನಯ್ ಕುಮಾರ್ ಜೊತೆ ವಾಸವಾಗಿದ್ದಳು. ಆದರೆ ಆತನೂ ಕೆಲ ವರ್ಷಗಳಲ್ಲಿ ಮೃತಪಟ್ಟಿದ್ದ. ಇಬ್ಬರನ್ನು ಕಳೆದುಕೊಂಡ ಪರ್ವೀನ್, ತವರು ಮನೆ ಸೇರಿದ್ದಳು.
ಆದರೆ, ಮನೆಗೆ ಬಂದರೆ ತಾಯಿಯೇ ತನ್ನ ಅಕ್ಕನ ಗಂಡನ ಜೊತೆ ಸಂಬಂಧ ಇರಿಸಿಕೊಂಡಿದ್ದಳು. ತನ್ನ ಅನೈತಿಕ ಸಂಬಂಧವನ್ನು ತಿಳಿದ ಮಗಳು ಪ್ರಶ್ನೆ ಮಾಡಿದ್ದಳು. ಆದರೆ ಕಟ್ಟಿಕೊಂಡ ಗಂಡನ ಬಿಟ್ಟು ಬೇರೆಯವರ ಜೊತೆ ಹೋಗಿ ಮರಳಿ ಬಂದಿದ್ದ ವಿಚಾರ ಮನೆಯಲ್ಲಿ ಕೋಪ ಇತ್ತು. ಅದರ ಜೊತೆಗೆ, ತನ್ನ ಸುಖಕ್ಕೆ ಅಡ್ಡಬಂದಿದ್ದ ನೆಪದಲ್ಲಿ ತಾಯಿಯೇ ಕೊಲೆಗೆ ಸ್ಕೆಚ್ ಹಾಕಿದ್ದಳು. ಅಕ್ಕನ ಗಂಡ ಹಾಗೂ ತನ್ನ ಪತಿಯೊಂದಿಗೆ ಸೇರಿ ದಾರದಿಂದ ಬಿಗಿದು ಕೊಲೆ ಮಾಡಿದ್ದಾಳೆ. ಆನಂತರ, ಪಾಳು ಬಾವಿಗೆ ಎಸೆದಿದ್ದರು. ಶವದಲ್ಲಿ ಕತ್ತು ಬಿಗಿದಿದ್ದು ಕಂಡಿದ್ದರಿಂದ ಪೊಲೀಸರು ಸಂಶಯಗೊಂಡು ವಿಚಾರಣೆ ನಡೆಸಿದ್ದರು. ಈ ವೇಳೆ, ಆಕೆಯೇ ನೇಣು ಬಿಗಿದು ಸಾವನ್ನಪ್ಪಿದ್ದಾಗಿ ಕತೆ ಕಟ್ಟಿದ್ದರು.
ಆದರೆ, ಪೊಲೀಸರ ವಿಚಾರಣೆಯಲ್ಲಿ ಸತ್ಯ ಹೊರಬಂದಿದ್ದು ಅಸಲಿ ಆರೋಪಿಳು ಜೈಲು ಸೇರಿದ್ದಾರೆ.
Chikkaballapur Mother and family Murder own daughter over illicit affiar tell cops as suicide three arrested. Mother along with her brothers had killed thier daughter and then threw her into the well and represented it as suicide to the police. The deceases has been identified as Parvin.
24-09-25 03:55 pm
Bangalore Correspondent
ಕರ್ನಾಟಕ ಜನಸಂದಣಿ ನಿಯಂತ್ರಣ ಕಾಯ್ದೆ ರೆಡಿ ; ಏಳು ವರ...
23-09-25 07:26 pm
Karnataka High court, Caste census: ಜಾತಿ ಗಣತಿ...
22-09-25 07:07 pm
ಚಾಮುಂಡೇಶ್ವರಿ ಹೆಣ್ಣಿನ ಶಕ್ತಿಯ ಪ್ರತೀಕ, ದಸರಾ ನ್ಯಾ...
22-09-25 03:31 pm
ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು...
22-09-25 10:54 am
24-09-25 01:07 pm
HK News Desk
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ನಿಲ್ಲಿಸಿದರೆ ಟ್ರಂ...
24-09-25 12:20 pm
Narendra Modi, Xi Jinping: ಭಾರತದಲ್ಲಿ ಸರ್ಕಾರ ಬ...
23-09-25 08:29 pm
ಕೋಲ್ಕತ್ತಾದಲ್ಲಿ ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಐವ...
23-09-25 11:05 am
Pakistans Khyber Pakhtunkhwa: ಪಾಕಿಸ್ತಾನದ ಖೈಬರ...
22-09-25 06:58 pm
24-09-25 07:38 pm
Mangalore Correspondent
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಪೀಕರ್ ಧ್ವನಿಯಡಗಿಸಿದ್...
24-09-25 06:55 pm
ಚಿನ್ನಯ್ಯ ಮತ್ತೆ ಬೆಳ್ತಂಗಡಿ ಕೋರ್ಟಿಗೆ ಹಾಜರು, ದೂರು...
23-09-25 11:01 pm
ತುಳು ಸಂಸ್ಕೃತಿ ಬಗ್ಗೆ ಮತ್ತಷ್ಟು ಸಂಶೋಧನೆ ಆಗಬೇಕಾಗಿ...
23-09-25 06:58 pm
ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡೀಪ...
23-09-25 05:49 pm
23-09-25 11:01 am
HK News Desk
ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ; ಎ...
22-09-25 08:16 pm
IAS Officer Manivannan, Cyber Fraud: ಹಿರಿಯ ಐಎ...
21-09-25 02:30 pm
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am