ಬ್ರೇಕಿಂಗ್ ನ್ಯೂಸ್
28-09-21 04:22 pm Headline Karnataka News Network ಕ್ರೈಂ
ಸೇಲಂ, ಸೆ.28: ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಮಕ್ಕಳನ್ನು ಸಾಯಿಸಿ ಮರಕ್ಕೆ ನೇಣು ಹಾಕಿಸಿದ್ದು, ಬಳಿಕ ತಾನೂ ಸಾಯುವ ಮೊದಲು ಅದನ್ನು ತೋರಿಸಿ ವಿಡಿಯೋ ಮಾಡಿದ್ದಾನೆ.
33 ವರ್ಷದ ವ್ಯಕ್ತಿಯಾಗಿರುವ ಮಂಗಳಪಟ್ಟಿ ನಿವಾಸಿಯಾಗಿದ್ದು, 13 ವರ್ಷಗಳಿಂದ ಹೊಟೇಲಿನಲ್ಲಿ ಕೆಲಸದಲ್ಲಿದ್ದ. ಹತ್ತು ದಿನಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲೇ ಉಳಿದಿದ್ದ. ಈ ಸಂದರ್ಭದಲ್ಲಿ ಪತ್ನಿ ಬೇರೆ ಯಾರದ್ದೋ ಜೊತೆಯಲ್ಲಿ ಗುಪ್ತವಾಗಿ ಮಾತನಾಡುತ್ತಿದ್ದನ್ನು ಕಂಡಿದ್ದ ಪತಿ, ಅದರಿಂದ ಸಂಶಯಪಟ್ಟಿದ್ದ. ಇದೇ ವಿಚಾರದಲ್ಲಿ ಪತ್ನಿ ಜೊತೆ ಜಗಳವನ್ನೂ ಮಾಡಿದ್ದಾನೆ.
ಆನಂತರ, ಆತ ಯಾರೇ ಆಗಿದ್ದರೂ, ನೀನು ಆ ರೀತಿ ಮಾತನಾಡುವುದನ್ನು ಬಿಟ್ಟುಬಿಡಬೇಕು ಎಂದು ಪತಿ ಷರತ್ತು ಹಾಕಿದ್ದ. ಆದರೆ, ಪತ್ನಿಯ ಮೋಸದಾಟ ಮುಂದುವರಿದಿದ್ದ ಬಗ್ಗೆ ಶಂಕೆಯಲ್ಲಿ ಪತಿ ರೋಸಿ ಹೋಗಿದ್ದ. ಮೊನ್ನೆ ಭಾನುವಾರ ಸಂಜೆ ಪತ್ನಿ ಮನೆಯಲ್ಲಿದ್ದಾಗ, ಹತ್ತಿರದ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದು, ಜೊತೆಗೆ 9 ವರ್ಷದ ಮಗ ಮತ್ತು 5 ವರ್ಷದ ಪುತ್ರಿಯನ್ನೂ ಕರೆದೊಯ್ದಿದ್ದಾನೆ. ಜೊತೆಗೆ, ಪತ್ನಿಯ ಮೊಬೈಲನ್ನೂ ಹಿಡಿದುಕೊಂಡು ಹೋಗಿದ್ದ.
ಆದರೆ, ಮಕ್ಕಳ ಜೊತೆಗೆ ತೆರಳಿದ್ದ ಪತಿ ಮರಳಿರಲಿಲ್ಲ. ನಾಪತ್ತೆಯಾಗಿದ್ದ ಬಗ್ಗೆ ಮರುದಿನ ಪತ್ನಿ ಪೊಲೀಸ್ ದೂರು ದಾಖಲು ಮಾಡಿದ್ದಳು. ಪೊಲೀಸರು ಹುಡುಕಾಡಿದಾಗ ಮಾವಿನ ತೋಟದಲ್ಲಿ ಮಕ್ಕಳು ಮತ್ತು ತಂದೆಯ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಅಲ್ಲದೆ, ತನ್ನ ಮೊಬೈಲಿನಲ್ಲಿ ಕೊನೆಯ ಬಾರಿಗೆ ಪತ್ನಿಯನ್ನು ಉದ್ದೇಶಿಸಿ ವಿಡಿಯೋ ಮಾಡಿದ್ದು, ನಿನಗೆ ನಾವು ಸಾಯಬೇಕೆಂಬ ಬಯಕೆ ಇತ್ತಲ್ಲ. ಈಗ ನೋಡು ನಾವು ಸತ್ತಿದ್ದೇವೆ ಎಂದು ಹೇಳುತ್ತಾ ಸಾವಿಗೆ ಶರಣಾಗಿದ್ದಾನೆ.
A man in Tamil Nadu suspected his wife's character and felt that his wife was having an affair elsewhere. On this suspicion, he hanged his children, 9 and 5, from a tree and sent the video to relatives. The incident has come to light from Salem District in Tamil Nadu. Murugan, 33, was married to Murugeshwari and had two children, including a 9-year-old boy and a 5-year-old girl. Murugan had been working in a restaurant for 13 years.
24-09-25 03:55 pm
Bangalore Correspondent
ಕರ್ನಾಟಕ ಜನಸಂದಣಿ ನಿಯಂತ್ರಣ ಕಾಯ್ದೆ ರೆಡಿ ; ಏಳು ವರ...
23-09-25 07:26 pm
Karnataka High court, Caste census: ಜಾತಿ ಗಣತಿ...
22-09-25 07:07 pm
ಚಾಮುಂಡೇಶ್ವರಿ ಹೆಣ್ಣಿನ ಶಕ್ತಿಯ ಪ್ರತೀಕ, ದಸರಾ ನ್ಯಾ...
22-09-25 03:31 pm
ಬಿಜೆಪಿ ವಿರೋಧ ನಡುವೆಯೇ ಚಾಮುಂಡಿ ತಾಯಿಗೆ ಕೈಮುಗಿದು...
22-09-25 10:54 am
24-09-25 01:07 pm
HK News Desk
ಇಸ್ರೇಲ್ - ಪ್ಯಾಲೆಸ್ತೀನ್ ಯುದ್ಧ ನಿಲ್ಲಿಸಿದರೆ ಟ್ರಂ...
24-09-25 12:20 pm
Narendra Modi, Xi Jinping: ಭಾರತದಲ್ಲಿ ಸರ್ಕಾರ ಬ...
23-09-25 08:29 pm
ಕೋಲ್ಕತ್ತಾದಲ್ಲಿ ಭಾರೀ ಮಳೆ, ಪ್ರವಾಹಕ್ಕೆ ಸಿಲುಕಿ ಐವ...
23-09-25 11:05 am
Pakistans Khyber Pakhtunkhwa: ಪಾಕಿಸ್ತಾನದ ಖೈಬರ...
22-09-25 06:58 pm
24-09-25 07:38 pm
Mangalore Correspondent
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸ್ಪೀಕರ್ ಧ್ವನಿಯಡಗಿಸಿದ್...
24-09-25 06:55 pm
ಚಿನ್ನಯ್ಯ ಮತ್ತೆ ಬೆಳ್ತಂಗಡಿ ಕೋರ್ಟಿಗೆ ಹಾಜರು, ದೂರು...
23-09-25 11:01 pm
ತುಳು ಸಂಸ್ಕೃತಿ ಬಗ್ಗೆ ಮತ್ತಷ್ಟು ಸಂಶೋಧನೆ ಆಗಬೇಕಾಗಿ...
23-09-25 06:58 pm
ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಗಡೀಪ...
23-09-25 05:49 pm
23-09-25 11:01 am
HK News Desk
ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಿನಲ್ಲಿ ಮಾರಾಟ ; ಎ...
22-09-25 08:16 pm
IAS Officer Manivannan, Cyber Fraud: ಹಿರಿಯ ಐಎ...
21-09-25 02:30 pm
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am