ಬ್ರೇಕಿಂಗ್ ನ್ಯೂಸ್
30-09-21 04:44 pm Mangaluru Correspondent ಕ್ರೈಂ
ಪುತ್ತೂರು, ಸೆ.30: ಹಿಂದು ಅಪ್ರಾಪ್ತ ಯುವತಿಯನ್ನು ಮುಸ್ಲಿಂ ಯುವಕನೊಬ್ಬ ತನ್ನ ಮನೆಯಲ್ಲಿ ಕೂಡಿಹಾಕಿದ್ದಾನೆ ಎಂಬ ಸುದ್ದಿ ತಿಳಿದ ಹಿಂದು ಸಂಘಟನೆಯ ಯುವಕರು ಆತನ ಮನೆ ಮುಂದೆ ಜಮಾಯಿಸಿ ಹೈಡ್ರಾಮಾ ನಡೆಸಿದ ಘಟನೆ ನಡೆದಿದೆ.
ಸೆ.29ರಂದು ಸಂಜೆ ಈಶ್ವರಮಂಗಲದ ಬಳಿಯ ಕೊಳ್ತಿಗೆ ಎಂಬಲ್ಲಿ ಘಟನೆ ನಡೆದಿದ್ದು, ಅಬುಬಕ್ಕರ್ ಸಿದ್ದಿಕ್ (26) ಎಂಬಾತ ಕೇರಳ – ಕರ್ನಾಟಕ ಗಡಿಭಾಗ ಕಾಸರಗೋಡು ಜಿಲ್ಲೆಯ ಆದೂರು ಠಾಣೆ ವ್ಯಾಪ್ತಿಯ ದಲಿತ ಬಾಲಕಿಯನ್ನು ಅಪಹರಿಸಿ ತಂದಿರಿಸಿದ್ದಾನೆಂದು ವದಂತಿ ಹರಡಿತ್ತು. ಅತ್ತ ಬಾಲಕಿಯ ಮನೆಯವರು ಕೂಡ 16 ವರ್ಷದ ಪುತ್ರಿ ನಾಪತ್ತೆಯಾಗಿದ್ದಾಗಿ ಆದೂರು ಠಾಣೆಯಲ್ಲಿ ದೂರು ನೀಡಿದ್ದರು.

ಮುಸ್ಲಿಂ ಮನೆಯಲ್ಲಿ ಹಿಂದು ಸಂಘಟನೆ ಕಾರ್ಯಕರ್ತರು ಜಮಾಯಿಸಿ, ಕೋಮು ದ್ವೇಷಕ್ಕೆ ಕಾರಣವಾಗುತ್ತಿರುವುದನ್ನು ಅರಿತ ಪೊಲೀಸರು ಮನೆಗೆ ಧಾವಿಸಿದ್ದಾರೆ. ಆದರೆ, ಪೊಲೀಸರು ಬಂದು ಮನೆಯ ಬಾಗಿಲು ತೆರೆಯುವಂತೆ ಹೇಳಿದರೂ, ಬಾಗಿಲು ತೆರೆಯಲಿಲ್ಲ. ಬಳಿಕ ಪೊಲೀಸರು ಮನೆಯವರಿಗೆ ಬಲವಂತಪಡಿಸಿ, ಬಾಗಿಲನ್ನು ತೆರೆಸಿದ್ದು, ಒಳಗೆ ಶೋಧ ಕಾರ್ಯ ನಡೆಸಿದ್ದಾರೆ. ಆದರೆ, ಮನೆಯೊಳಗೆ ಬಾಲಕಿ ಇಲ್ಲದಿರುವುದನ್ನು ಖಚಿತಪಡಿಸಿ, ಆರೋಪಿ ಅಬುಬಕ್ಕರ್ ಸಿದ್ದಿಕ್ ನನ್ನು ವಶಕ್ಕೆ ಪಡೆದು ಠಾಣೆಗೆ ತೆರಳಿದ್ದಾರೆ.
ಆನಂತರ, ಸಿದ್ದಿಕ್ ನಿಜ ವಿಚಾರವನ್ನು ಹೇಳಿದ್ದಾನೆ. ಒಂದು ವರ್ಷದಿಂದ ಬಾಲಕಿಯ ಜೊತೆ ಸ್ನೇಹದಲ್ಲಿದ್ದು, ಆಕೆಯೇ ಮದುವೆಯಾಗುವಂತೆ ಹೇಳಿದ್ದರಿಂದ ಕಾರಿನಲ್ಲಿ ತನ್ನ ಮನೆಗೆ ಕರೆತಂದಿದ್ದೆ. ಆದರೆ, ಮನೆಯಲ್ಲಿರಿಸಿದರೆ ತೊಂದರೆ ಆಗುತ್ತದೆ ಎಂದು ಪುತ್ತೂರಿನಲ್ಲಿ ಆಕೆಯನ್ನು ಇರಿಸಿದ್ದಾಗಿ ಹೇಳಿಕೆ ನೀಡಿದ್ದಾನೆ. ಆತನ ಮಾಹಿತಿಯಂತೆ, ಬೆಳ್ಳಾರೆ ಪೊಲೀಸರು ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ವಿಚಾರಣೆ ನಡೆಸಿದ ಬಳಿಕ ಯುವಕ ಮತ್ತು ಬಾಲಕಿಯನ್ನು ಕಾಸರಗೋಡಿನ ಆದೂರು ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ. ಅಲ್ಲಿ ನಾಪತ್ತೆ ಕೇಸು ದಾಖಲಾಗಿದ್ದು, ಹುಡುಗಿ ಕೂಡ ಅಲ್ಲಿನ ನಿವಾಸಿಯಾಗಿರುವುದರಿಂದ ಅಲ್ಲಿನ ಪೊಲೀಸರೇ ವಿಲೇವಾರಿ ಮಾಡಲಿ ಎಂದು ಅವರ ವಶಕ್ಕೆ ಒಪ್ಪಿಸಿದ್ದಾರೆ.
After getting information that a minor Hindu girl had been abducted by Siddique from Koltige Kuntikan in the taluk and kept her in his home, the locals got together in large numbers in front of his house on Wednesday September 29. This development gave rise to a tense situation in the area.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm