ಪಬ್ ಜಿ ಆಡಬೇಡ ಎಂದಿದ್ದಕ್ಕೆ ಬಾಲಕ ಸಾವಿಗೆ ಶರಣು ! 

10-09-20 07:38 pm       Headline Karnataka News Network   ಕ್ರೈಂ

ಪಬ್ ಜಿ ಗೇಮ್ ಆಡೋದು ಬ್ಯಾಡ ಎಂದಿದ್ದಕ್ಕೇ ಆತ್ಮಹತ್ಯೆ. ಪೋಷಕರು ಮೊಬೈಲ್ ಪೋನ್‌ಗೆ ಇಂಟರ್ನೆಟ್ ಹಾಕಿಸುವುದನ್ನ ಬಿಟ್ಟಿದ್ದರು.

ಹಾವೇರಿ, ಸೆಪ್ಟೆಂಬರ್ 10: ಪಬ್ ಜಿ ಗೇಮ್ ಆಡೋದು ಬ್ಯಾಡ ಎಂದಿದ್ದಕ್ಕೇ ಇಲ್ಲೊಬ್ಬ ಹದಿಹರೆಯದ ಬಾಲಕ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಹಾವೇರಿ ತಾಲೂಕು ಸಂಗೂರ ಗ್ರಾಮದಲ್ಲಿ ಘಟನೆ ನಡೆದಿದ್ದು 17 ವರ್ಷದ ತರುಣ ತೇಜಸ್ ಶಿಡ್ಲಾಪೂರ ಸಾವಿಗೆ ಶರಣಾದ ಹುಡುಗ. ಪಬ್ ಜಿ ಗೇಮ್ ಆಡೋ ಚಟಕ್ಕೆ ಬಿದ್ದಿದ್ದು ಹುಡುಗನಲ್ಲಿ ಆಟ ಆಡೋದು ಬೇಡ ಎಂದು ಪೋಷಕರು ಹೇಳಿದ್ದರು. ಅಲ್ಲದೆ, ಪೋಷಕರು ಮೊಬೈಲ್ ಪೋನ್‌ಗೆ ಇಂಟರ್ನೆಟ್ ಹಾಕಿಸುವುದನ್ನ ಬಿಟ್ಟಿದ್ದರು. ಇದರಿಂದ ಮನನೊಂದ ಯುವಕ ತೋಟದ ಮನೆಗೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾವೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.