ಬ್ರೇಕಿಂಗ್ ನ್ಯೂಸ್
05-10-21 04:24 pm Mangaluru Correspondent ಕ್ರೈಂ
ಉಳ್ಳಾಲ, ಅ.5: ಬಸ್ಸಿನಿಂದ ಇಳಿದು ಮನೆ ಕಡೆಗೆ ತೆರಳುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಐ ಲವ್ ಯೂ ಅಂತ ಹೇಳಿ ಕೈ ಎಳೆದು ಅಪ್ಪಿಕೊಳ್ಳಲೆತ್ನಿಸಿದ ಅನ್ಯಕೋಮಿನ ಯುವಕನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದ ಘಟನೆ ಹರೇಕಳ ಗ್ರಾಮದಲ್ಲಿ ನಡೆದಿದೆ.
ಅಡ್ಯಾರ್ ಕಣ್ಣೂರು ನಿವಾಸಿ ಯಾಕೂಬ್ (43) ಬಂಧಿತ ಕಾಮುಕ. ವಿದ್ಯಾರ್ಥಿನಿ ಇಂದು ಮಧ್ಯಾಹ್ನ ಹರೇಕಳ ಗ್ರಾಮದ ಮಿಷನ್ ಕಂಪೌಂಡ್ ಬಸ್ ನಿಲ್ದಾಣದಲ್ಲಿ ಇಳಿದು ಕಲ್ಲೈ, ವಡ್ಡೆದಗುರಿ ದಾರಿಯಾಗಿ ಮನೆಯತ್ತ ಹೆಜ್ಜೆ ಹಾಕುತ್ತಿದ್ದ ವೇಳೆ ಯಾಕೂಬ್ ಅಡ್ಡಗಟ್ಟಿದ್ದಾನೆ. ಐ ಲವ್ ಯೂ ಅಂತ ಹೇಳಿ ಆಕೆಯ ಕೈ ಎಳೆದು ಅಪ್ಪಿಕೊಳ್ಳಲು ಮುಂದಾಗಿದ್ದು ಪ್ರತಿಭಟಿಸಿದ ಯುವತಿ ಕಾಮುಕನಿಂದ ತಪ್ಪಿಸಿ ಮಂದಕ್ಕೆ ಸಾಗಿದ್ದಾಳೆ. ಪಟ್ಟು ಬಿಡದ ಕಾಮುಕ ಯಾಕೂಬ್ ಪೊದೆಗಳಲ್ಲಿ ಅಡಗಿ ಯುವತಿಗೆ ಅಶ್ಲೀಲ ಸನ್ನೆಗೈದಿದ್ದು ಯುವತಿ ಬೊಬ್ಬೆ ಹೊಡೆದಿದ್ದಾಳೆ. ಯುವತಿಯ ಬೊಬ್ಬೆ ಕೇಳಿದ ಗ್ರಾಮಸ್ಥರು ಕಾಮುಕನನ್ನ ಹಿಡಿಯಲು ಯತ್ನಿಸಿದ್ದು ಕೊಣಾಜೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಬಳಿಕ ಎಲಿಯಾರ್ ಪದವು ಎಂಬಲ್ಲಿ ಆರೋಪಿ ಯಾಕೂಬನನ್ನ ಗ್ರಾಮಸ್ಥರು ಹಿಡಿದು ಕೊಣಾಜೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿ ಯಾಕೂಬ್ ಗೆ ದೇರಳಕಟ್ಟೆಯ ಅಡ್ಕರೆ ಎಂಬಲ್ಲಿ ಸಂಬಂಧಿಗಳ ಮನೆಯಿದೆ. ಅಲ್ಲಿಗೆ ಬಂದಿದ್ದ ವೇಳೆ ಘಟನೆ ನಡೆದಿದೆ. ಲಾಕ್ಡೌನ್ ವೇಳೆ ಯಾಕೂಬ್ ಕೊಣಾಜೆ ಪರಂಡೆಯ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದಲ್ಲಿ ಕಳ್ಳತನಕ್ಕೆ ಯತ್ನಿಸಿ ಮಾನಸಿಕ ಅಸ್ವಸ್ಥನಂತೆ ನಟಿಸಿದ್ದ. ಈತನ ವಿರುದ್ಧ ಕೊಣಾಜೆ ಠಾಣೆಯಲ್ಲಿ ಈ ಹಿಂದೆಯೂ ಲೈಂಗಿಕ ಕಿರುಕುಳ ಪ್ರಕರಣವೂ ದಾಖಲಾಗಿತ್ತು.
Mangalore Man tries to Misbehave with Interfaith college-going Girl while getting down from the Bus. Konaje Police who reached the spot has taken him to Custody. Adyar Resident Ayub (43) is the man taken to custody.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm