ಬ್ರೇಕಿಂಗ್ ನ್ಯೂಸ್
07-10-21 12:23 pm Mangaluru Correspondent ಕ್ರೈಂ
ಉಳ್ಳಾಲ, ಅ.7: ರಬ್ಬರ್ ತೋಟದ ನಡುವಲ್ಲಿರುವ ಒಂಟಿ ಬಂಗಲೆಗೆ ನುಗ್ಗಿದ ಕಳ್ಳರು ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ 5 ಹಿತ್ತಾಳೆಯ ದೀಪಗಳನ್ನ ಕದ್ದೊಯ್ದ ಘಟನೆ ಬಬ್ಬುಕಟ್ಟೆ ಸಮೀಪದ ಚಂದಪ್ಪ ಎಸ್ಟೇಟ್ ನಲ್ಲಿ ನಡೆದಿದೆ.
ದುಬೈನಲ್ಲಿ ವಾಸವಿರುವ ಸುಜಾತ ಎಂಬವರಿಗೆ ಸೇರಿದ ಯಾರೂ ವಾಸವಿಲ್ಲದ ಒಂಟಿ ಬಂಗಲೆ ಮನೆಯ ಹಿಂಬಾಗಿಲನ್ನ ಪಿಕ್ಕಾಸಲ್ಲಿ ಮುರಿದು ಕಳ್ಳತನ ನಡೆಸಲಾಗಿದೆ. ಮೊನ್ನೆ ರಾತ್ರಿ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ನಿನ್ನೆ ರಾತ್ರಿ ಬಂಗಲೆಯ ಕೋಣೆಯ ದೀಪ ಉರಿಯುವುದನ್ನ ಹತ್ತಿರದ ನಿವಾಸಿಯಾಗಿರುವ ಸುಜಾತ ಅವರ ಅಣ್ಣ ವಕೀಲ ಗಂಗಾಧರ್ ಉಳ್ಳಾಲ್ ಅವರು ಗಮಿನಿಸಿದ್ದು ಬಂಗಲೆಯೊಳಗೆ ಹೋದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.









ಬಂಗಲೆಯ ಹಿಂಬಾಗಿಲಿನ ಬಳಿಯಲ್ಲೇ ಇದ್ದ ಪಿಕ್ಕಾಸಿನಲ್ಲಿ ಕಬ್ಬಿಣದ ಸಲಾಕೆಯ ಗೇಟನ್ನು ಮುರಿದು ಕಳ್ಳರು ಒಳ ಹೊಕ್ಕಿದ್ದಾರೆ. ಮನೆಯ ಹಾಲಲ್ಲಿದ್ದ ಎತ್ತರದ ಮೂರು ಹಿತ್ತಾಳೆಯ ದೀಪ ಮತ್ತು ದೇವರ ಕೋಣೆಯಲ್ಲಿದ್ದ ಎರಡು ಸಣ್ಣ ಹಿತ್ತಾಳೆಯ ದೀಪಗಳನ್ನ ಕದ್ದೊಯ್ದಿದ್ದಾರೆ. ಮನೆಯ ಕಪಾಟುಗಳನ್ನ ಕಳ್ಳರು ತಡಕಾಡಿದ್ದು ಮನೆಯೊಳಗೆ ಯಾವುದೇ ನಗ, ನಗದು ಸಿಗದೆ ದೀಪಗಳನ್ನ ಎಗರಿಸಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.
ನಿರ್ಜನ ಎಸ್ಟೇಟಲ್ಲಿ ಸಿಸಿ ಕ್ಯಾಮೆರಾ ವರ್ಕಿಂಗ್ ಇಲ್ಲ
ಬಬ್ಬಕಟ್ಟೆಯಿಂದ-ರಾಣಿಪುರ ಸಂಪರ್ಕದ ಒಳ ನಿರ್ಜನ ರಸ್ತೆಯ ನಡುವಲ್ಲಿ ಚಂದಪ್ಪ ಎಸ್ಟೇಟ್ ಇದ್ದು ಇಲ್ಲಿ ಉಳ್ಳಾಲ ನಗರಸಭೆ ಆಡಳಿತ ಹಾಕಿಸಿದ್ದ ಸಿಸಿ ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಇಂತಹ ನಿರ್ಜನ ಪ್ರದೇಶದಲ್ಲಿ ಕೂಡಲೇ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಕಳ್ಳತನ ನಡೆದ ಮನೆ ಮಾಲಕಿ ಸುಜಾತ ಅವರ ಸಹೋದರ ನಗರ ಸದಸ್ಯರಾದ ದಿನಕರ ಉಳ್ಳಾಲ್ ಆಗ್ರಹಿಸಿದ್ದಾರೆ.
Thokottu Burglars enter bungalow, FIve steal brass lamps worth lakhs have been stolen. Ullal police have visited the spot and are now investigating the case.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm