ಬ್ರೇಕಿಂಗ್ ನ್ಯೂಸ್
07-10-21 12:23 pm Mangaluru Correspondent ಕ್ರೈಂ
ಉಳ್ಳಾಲ, ಅ.7: ರಬ್ಬರ್ ತೋಟದ ನಡುವಲ್ಲಿರುವ ಒಂಟಿ ಬಂಗಲೆಗೆ ನುಗ್ಗಿದ ಕಳ್ಳರು ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ 5 ಹಿತ್ತಾಳೆಯ ದೀಪಗಳನ್ನ ಕದ್ದೊಯ್ದ ಘಟನೆ ಬಬ್ಬುಕಟ್ಟೆ ಸಮೀಪದ ಚಂದಪ್ಪ ಎಸ್ಟೇಟ್ ನಲ್ಲಿ ನಡೆದಿದೆ.
ದುಬೈನಲ್ಲಿ ವಾಸವಿರುವ ಸುಜಾತ ಎಂಬವರಿಗೆ ಸೇರಿದ ಯಾರೂ ವಾಸವಿಲ್ಲದ ಒಂಟಿ ಬಂಗಲೆ ಮನೆಯ ಹಿಂಬಾಗಿಲನ್ನ ಪಿಕ್ಕಾಸಲ್ಲಿ ಮುರಿದು ಕಳ್ಳತನ ನಡೆಸಲಾಗಿದೆ. ಮೊನ್ನೆ ರಾತ್ರಿ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ನಿನ್ನೆ ರಾತ್ರಿ ಬಂಗಲೆಯ ಕೋಣೆಯ ದೀಪ ಉರಿಯುವುದನ್ನ ಹತ್ತಿರದ ನಿವಾಸಿಯಾಗಿರುವ ಸುಜಾತ ಅವರ ಅಣ್ಣ ವಕೀಲ ಗಂಗಾಧರ್ ಉಳ್ಳಾಲ್ ಅವರು ಗಮಿನಿಸಿದ್ದು ಬಂಗಲೆಯೊಳಗೆ ಹೋದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.









ಬಂಗಲೆಯ ಹಿಂಬಾಗಿಲಿನ ಬಳಿಯಲ್ಲೇ ಇದ್ದ ಪಿಕ್ಕಾಸಿನಲ್ಲಿ ಕಬ್ಬಿಣದ ಸಲಾಕೆಯ ಗೇಟನ್ನು ಮುರಿದು ಕಳ್ಳರು ಒಳ ಹೊಕ್ಕಿದ್ದಾರೆ. ಮನೆಯ ಹಾಲಲ್ಲಿದ್ದ ಎತ್ತರದ ಮೂರು ಹಿತ್ತಾಳೆಯ ದೀಪ ಮತ್ತು ದೇವರ ಕೋಣೆಯಲ್ಲಿದ್ದ ಎರಡು ಸಣ್ಣ ಹಿತ್ತಾಳೆಯ ದೀಪಗಳನ್ನ ಕದ್ದೊಯ್ದಿದ್ದಾರೆ. ಮನೆಯ ಕಪಾಟುಗಳನ್ನ ಕಳ್ಳರು ತಡಕಾಡಿದ್ದು ಮನೆಯೊಳಗೆ ಯಾವುದೇ ನಗ, ನಗದು ಸಿಗದೆ ದೀಪಗಳನ್ನ ಎಗರಿಸಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.
ನಿರ್ಜನ ಎಸ್ಟೇಟಲ್ಲಿ ಸಿಸಿ ಕ್ಯಾಮೆರಾ ವರ್ಕಿಂಗ್ ಇಲ್ಲ
ಬಬ್ಬಕಟ್ಟೆಯಿಂದ-ರಾಣಿಪುರ ಸಂಪರ್ಕದ ಒಳ ನಿರ್ಜನ ರಸ್ತೆಯ ನಡುವಲ್ಲಿ ಚಂದಪ್ಪ ಎಸ್ಟೇಟ್ ಇದ್ದು ಇಲ್ಲಿ ಉಳ್ಳಾಲ ನಗರಸಭೆ ಆಡಳಿತ ಹಾಕಿಸಿದ್ದ ಸಿಸಿ ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಇಂತಹ ನಿರ್ಜನ ಪ್ರದೇಶದಲ್ಲಿ ಕೂಡಲೇ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಕಳ್ಳತನ ನಡೆದ ಮನೆ ಮಾಲಕಿ ಸುಜಾತ ಅವರ ಸಹೋದರ ನಗರ ಸದಸ್ಯರಾದ ದಿನಕರ ಉಳ್ಳಾಲ್ ಆಗ್ರಹಿಸಿದ್ದಾರೆ.
Thokottu Burglars enter bungalow, FIve steal brass lamps worth lakhs have been stolen. Ullal police have visited the spot and are now investigating the case.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
27-07-26 09:48 pm
HK News Staffer
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
27-07-26 11:07 pm
Mangaluru Staffer
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm
ಸಚಿವ ಸ್ಥಾನ ಕೊಡಿಸಲು ಮೂರು ಕೋಟಿ ಬೇಡಿಕೆ ; ಕೇರಳದ ಶ...
27-07-26 09:04 pm
ಬೆಂಗಳೂರು ಗ್ಯಾರೇಜ್ ನಲ್ಲಿ ಅಗ್ನಿ ಅವಘಡ ; ಜಾಗ್ವಾರ...
27-07-26 07:35 pm
ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳ ಆರೋ...
27-07-26 01:09 pm