ಬ್ರೇಕಿಂಗ್ ನ್ಯೂಸ್
07-10-21 12:23 pm Mangaluru Correspondent ಕ್ರೈಂ
ಉಳ್ಳಾಲ, ಅ.7: ರಬ್ಬರ್ ತೋಟದ ನಡುವಲ್ಲಿರುವ ಒಂಟಿ ಬಂಗಲೆಗೆ ನುಗ್ಗಿದ ಕಳ್ಳರು ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ 5 ಹಿತ್ತಾಳೆಯ ದೀಪಗಳನ್ನ ಕದ್ದೊಯ್ದ ಘಟನೆ ಬಬ್ಬುಕಟ್ಟೆ ಸಮೀಪದ ಚಂದಪ್ಪ ಎಸ್ಟೇಟ್ ನಲ್ಲಿ ನಡೆದಿದೆ.
ದುಬೈನಲ್ಲಿ ವಾಸವಿರುವ ಸುಜಾತ ಎಂಬವರಿಗೆ ಸೇರಿದ ಯಾರೂ ವಾಸವಿಲ್ಲದ ಒಂಟಿ ಬಂಗಲೆ ಮನೆಯ ಹಿಂಬಾಗಿಲನ್ನ ಪಿಕ್ಕಾಸಲ್ಲಿ ಮುರಿದು ಕಳ್ಳತನ ನಡೆಸಲಾಗಿದೆ. ಮೊನ್ನೆ ರಾತ್ರಿ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ನಿನ್ನೆ ರಾತ್ರಿ ಬಂಗಲೆಯ ಕೋಣೆಯ ದೀಪ ಉರಿಯುವುದನ್ನ ಹತ್ತಿರದ ನಿವಾಸಿಯಾಗಿರುವ ಸುಜಾತ ಅವರ ಅಣ್ಣ ವಕೀಲ ಗಂಗಾಧರ್ ಉಳ್ಳಾಲ್ ಅವರು ಗಮಿನಿಸಿದ್ದು ಬಂಗಲೆಯೊಳಗೆ ಹೋದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಬಂಗಲೆಯ ಹಿಂಬಾಗಿಲಿನ ಬಳಿಯಲ್ಲೇ ಇದ್ದ ಪಿಕ್ಕಾಸಿನಲ್ಲಿ ಕಬ್ಬಿಣದ ಸಲಾಕೆಯ ಗೇಟನ್ನು ಮುರಿದು ಕಳ್ಳರು ಒಳ ಹೊಕ್ಕಿದ್ದಾರೆ. ಮನೆಯ ಹಾಲಲ್ಲಿದ್ದ ಎತ್ತರದ ಮೂರು ಹಿತ್ತಾಳೆಯ ದೀಪ ಮತ್ತು ದೇವರ ಕೋಣೆಯಲ್ಲಿದ್ದ ಎರಡು ಸಣ್ಣ ಹಿತ್ತಾಳೆಯ ದೀಪಗಳನ್ನ ಕದ್ದೊಯ್ದಿದ್ದಾರೆ. ಮನೆಯ ಕಪಾಟುಗಳನ್ನ ಕಳ್ಳರು ತಡಕಾಡಿದ್ದು ಮನೆಯೊಳಗೆ ಯಾವುದೇ ನಗ, ನಗದು ಸಿಗದೆ ದೀಪಗಳನ್ನ ಎಗರಿಸಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ.
ನಿರ್ಜನ ಎಸ್ಟೇಟಲ್ಲಿ ಸಿಸಿ ಕ್ಯಾಮೆರಾ ವರ್ಕಿಂಗ್ ಇಲ್ಲ
ಬಬ್ಬಕಟ್ಟೆಯಿಂದ-ರಾಣಿಪುರ ಸಂಪರ್ಕದ ಒಳ ನಿರ್ಜನ ರಸ್ತೆಯ ನಡುವಲ್ಲಿ ಚಂದಪ್ಪ ಎಸ್ಟೇಟ್ ಇದ್ದು ಇಲ್ಲಿ ಉಳ್ಳಾಲ ನಗರಸಭೆ ಆಡಳಿತ ಹಾಕಿಸಿದ್ದ ಸಿಸಿ ಕ್ಯಾಮೆರಾಗಳು ಕೆಲಸ ಮಾಡುತ್ತಿಲ್ಲ ಎನ್ನಲಾಗುತ್ತಿದೆ. ಇಂತಹ ನಿರ್ಜನ ಪ್ರದೇಶದಲ್ಲಿ ಕೂಡಲೇ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ಕಳ್ಳತನ ನಡೆದ ಮನೆ ಮಾಲಕಿ ಸುಜಾತ ಅವರ ಸಹೋದರ ನಗರ ಸದಸ್ಯರಾದ ದಿನಕರ ಉಳ್ಳಾಲ್ ಆಗ್ರಹಿಸಿದ್ದಾರೆ.
Thokottu Burglars enter bungalow, FIve steal brass lamps worth lakhs have been stolen. Ullal police have visited the spot and are now investigating the case.
27-07-25 01:09 pm
HK News Desk
ದಾವಣಗೆರೆ ; ಸರ್ಕಾರಿ ಜಾಗದಲ್ಲಿ ಬೆಳೆದ ಬೆಳೆ ತೆರವು...
26-07-25 02:00 pm
IPS Officer Soumya Latha, Dharmasthala SIT:...
25-07-25 04:07 pm
Jeep Chikkamagaluru Accident: ನಿಯಂತ್ರಣ ತಪ್ಪಿ...
25-07-25 01:22 pm
ಪೊಲೀಸ್ ಠಾಣೆಯಲ್ಲೇ ಲ್ಯಾಂಡ್ ಡಿಲಿಂಗ್ ; ಜಾಗದ ವಿಚಾರ...
25-07-25 12:25 pm
26-07-25 03:31 pm
HK News Desk
ಹದಗೆಟ್ಟ ಸುರತ್ಕಲ್ - ಬಿ.ಸಿ. ರೋಡ್ ಹೆದ್ದಾರಿ ನಿರ...
25-07-25 04:40 pm
Mangalore MP Brijesh Chowta: ಮಂಗಳೂರಿನಲ್ಲಿ ಮೆರ...
24-07-25 09:06 pm
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
27-07-25 08:56 pm
Mangalore Correspondent
Dharmasthala Case, SIT, ADGP Pranav Mohanty:...
27-07-25 08:14 pm
Dharmasthala Case, Sowjanya case, Mangalore:...
27-07-25 07:49 pm
Mangalore Congress: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್...
26-07-25 10:41 pm
Mangalore, Dharmasthala Case, SIT, whistle bl...
26-07-25 10:05 pm
27-07-25 08:39 pm
Mangalore Correspondent
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಯುವತಿಯನ್ನ ಆಸ್ಪತ್ರೆಗ...
27-07-25 07:13 pm
Bangalore Murder, Two Children Killed, Crime:...
27-07-25 03:26 pm
ಸೈಬರ್ ವಂಚಕರ ಜಾಲಕ್ಕೆ ನಕಲಿ ಬ್ಯಾಂಕ್ ಖಾತೆ ಪೂರೈಕೆ...
26-07-25 09:35 pm
ಮನೆಗೆ ದಿನಸಿ ತರಲು ಹೋದ ಯುವತಿಗೆ ನಡು ರಸ್ತೆಯಲ್ಲೇ ತ...
24-07-25 10:38 pm