ಬ್ರೇಕಿಂಗ್ ನ್ಯೂಸ್
14-10-21 09:58 pm Headline Karnataka News Network ಕ್ರೈಂ
ಕಾರವಾರ, ಅ.14: ಸಾಂಬಾರ್ ರುಚಿಯಾಗಿಲ್ಲ ಎಂದು ಹೇಳಿ 24 ವರ್ಷದ ಯುವಕನೊಬ್ಬ ತನ್ನ ತಾಯಿ ಮತ್ತು ತಂಗಿಯನ್ನು ಗುಂಡು ಹಾರಿಸಿ ಕೊಲೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕೂಡುಗೋಡು ಎಂಬಲ್ಲಿ ನಡೆದಿದೆ.
ಬುಧವಾರ ಸಂಜೆ ಘಟನೆ ನಡೆದಿದ್ದು ಆರೋಪಿಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ತಾಯಿ ಪಾರ್ವತಿ ಹಸ್ಲಾರ್ (42) ಮತ್ತು ರಮ್ಯಾ ಹಸ್ಲಾರ್ (19) ಮೃತರು.
ಮಂಜುನಾಥ್ ಕುಡಿತದ ಚಟ ಹೊಂದಿದ್ದು ಕುಡಿದ ಮತ್ತಿನಲ್ಲಿ ಮನೆಗೆ ಬಂದು ಸಾಂಬಾರ್ ವಿಷಯದಲ್ಲಿ ತಾಯಿ ಜೊತೆ ರಂಪ ನಡೆಸಿದ್ದಾನೆ. ಸಾಂಬಾರ್ ರುಚಿಯಾಗಿಲ್ಲ ಎಂದು ವಾಗ್ವಾದ ನಡೆಸಿದ್ದು ಬಳಿಕ ತಾಯಿ, ತಂಗಿಗೆ ಲೋನ್ ಮಾಡಿ ಮೊಬೈಲ್ ತೆಗೆಸಿಕೊಡುವ ವಿಚಾರದಲ್ಲಿ ರಂಪ ಮಾಡಿದ್ದಾನೆ.
ಆದರೆ, ತಾಯಿ ಪಾರ್ವತಿ ತಾನು ಮೊಬೈಲ್ ತೆಗೆಸಿಕೊಡುತ್ತೇನೆಂದು ಯಾರಿಗೂ ಹೇಳಿಲ್ಲ. ನಿನಗೆ ಯಾರು ಹೇಳಿದ್ದು ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಂಜುನಾಥ್ ಮನೆಯಲ್ಲಿದ್ದ ನಾಡ ಕೋವಿಯನ್ನು ಎತ್ತಿಕೊಂಡು ತಾಯಿ ತಲೆಗೆ ಗುಂಡಿಟ್ಟಿದ್ದಾನೆ. ಆನಂತರ ತಂಗಿಯ ಮೇಲೂ ಗುಂಡು ಹಾರಿಸಿದ್ದು ಇಬ್ಬರೂ ಮನೆಯಲ್ಲೇ ಸಾವು ಕಂಡಿದ್ದಾರೆ.
ಕೊಲೆ ಕೃತ್ಯ ನಡೆದ ಬಳಿಕ ಮಂಜುನಾಥ್ ತಂದೆ ಮನೆಗೆ ಆಗಮಿಸಿದ್ದು ವಿಷಯ ಬೆಳಕಿಗೆ ಬಂದಿದೆ. ತಂದೆ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಜುನಾಥ್ ಸ್ಥಳದಿಂದ ಪರಾರಿಯಾಗಿದ್ದ. ಇಂದು ಆತನನ್ನು ಬಂಧಿಸಲಾಗಿದೆ.
A youth shot his mother and sister dead on Thursday apparently for not cooking tasty sambar at Kodagodu in Karnataka's Uttara Kannada district. The incident took place on Wednesday and the accused, Manjunath Haslar (24), was arrested on Thursday. The deceased have been identified as Manjunath's mother Parvathi Narayana Haslar (42) and sister Ramya Narayana Haslar (19).
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm