ಬ್ರೇಕಿಂಗ್ ನ್ಯೂಸ್
14-10-21 09:58 pm Headline Karnataka News Network ಕ್ರೈಂ
ಕಾರವಾರ, ಅ.14: ಸಾಂಬಾರ್ ರುಚಿಯಾಗಿಲ್ಲ ಎಂದು ಹೇಳಿ 24 ವರ್ಷದ ಯುವಕನೊಬ್ಬ ತನ್ನ ತಾಯಿ ಮತ್ತು ತಂಗಿಯನ್ನು ಗುಂಡು ಹಾರಿಸಿ ಕೊಲೆಗೈದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕೂಡುಗೋಡು ಎಂಬಲ್ಲಿ ನಡೆದಿದೆ.
ಬುಧವಾರ ಸಂಜೆ ಘಟನೆ ನಡೆದಿದ್ದು ಆರೋಪಿಯನ್ನು ಇಂದು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ತಾಯಿ ಪಾರ್ವತಿ ಹಸ್ಲಾರ್ (42) ಮತ್ತು ರಮ್ಯಾ ಹಸ್ಲಾರ್ (19) ಮೃತರು.
ಮಂಜುನಾಥ್ ಕುಡಿತದ ಚಟ ಹೊಂದಿದ್ದು ಕುಡಿದ ಮತ್ತಿನಲ್ಲಿ ಮನೆಗೆ ಬಂದು ಸಾಂಬಾರ್ ವಿಷಯದಲ್ಲಿ ತಾಯಿ ಜೊತೆ ರಂಪ ನಡೆಸಿದ್ದಾನೆ. ಸಾಂಬಾರ್ ರುಚಿಯಾಗಿಲ್ಲ ಎಂದು ವಾಗ್ವಾದ ನಡೆಸಿದ್ದು ಬಳಿಕ ತಾಯಿ, ತಂಗಿಗೆ ಲೋನ್ ಮಾಡಿ ಮೊಬೈಲ್ ತೆಗೆಸಿಕೊಡುವ ವಿಚಾರದಲ್ಲಿ ರಂಪ ಮಾಡಿದ್ದಾನೆ.
ಆದರೆ, ತಾಯಿ ಪಾರ್ವತಿ ತಾನು ಮೊಬೈಲ್ ತೆಗೆಸಿಕೊಡುತ್ತೇನೆಂದು ಯಾರಿಗೂ ಹೇಳಿಲ್ಲ. ನಿನಗೆ ಯಾರು ಹೇಳಿದ್ದು ಎಂದು ಮರು ಪ್ರಶ್ನೆ ಹಾಕಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಂಜುನಾಥ್ ಮನೆಯಲ್ಲಿದ್ದ ನಾಡ ಕೋವಿಯನ್ನು ಎತ್ತಿಕೊಂಡು ತಾಯಿ ತಲೆಗೆ ಗುಂಡಿಟ್ಟಿದ್ದಾನೆ. ಆನಂತರ ತಂಗಿಯ ಮೇಲೂ ಗುಂಡು ಹಾರಿಸಿದ್ದು ಇಬ್ಬರೂ ಮನೆಯಲ್ಲೇ ಸಾವು ಕಂಡಿದ್ದಾರೆ.
ಕೊಲೆ ಕೃತ್ಯ ನಡೆದ ಬಳಿಕ ಮಂಜುನಾಥ್ ತಂದೆ ಮನೆಗೆ ಆಗಮಿಸಿದ್ದು ವಿಷಯ ಬೆಳಕಿಗೆ ಬಂದಿದೆ. ತಂದೆ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಜುನಾಥ್ ಸ್ಥಳದಿಂದ ಪರಾರಿಯಾಗಿದ್ದ. ಇಂದು ಆತನನ್ನು ಬಂಧಿಸಲಾಗಿದೆ.
A youth shot his mother and sister dead on Thursday apparently for not cooking tasty sambar at Kodagodu in Karnataka's Uttara Kannada district. The incident took place on Wednesday and the accused, Manjunath Haslar (24), was arrested on Thursday. The deceased have been identified as Manjunath's mother Parvathi Narayana Haslar (42) and sister Ramya Narayana Haslar (19).
29-03-24 05:37 pm
HK News Desk
L hanumanthaiah kolar: ಕೋಲಾರದಲ್ಲಿ ಇಬ್ಬರ ಜಗಳದಲ...
29-03-24 03:43 pm
CT Ravi, Amit Shah, Yathindra Siddaramaiah: ಯ...
29-03-24 03:40 pm
ರಾಜ್ಯದಲ್ಲಿ ಬರದ ಬೇಗೆಯ ನಡುವೆ ಉಷ್ಣ ಮಾರುತ ; 5 ದಿನ...
29-03-24 03:03 pm
ಹಾಸನ ; ಐದು ವರ್ಷದಲ್ಲಿ ಪ್ರಜ್ವಲ್ ರೇವಣ್ಣ ಆಸ್ತಿ ನಾ...
28-03-24 11:00 pm
28-03-24 10:51 pm
HK News Desk
Arawind Kejriwal, Delhi HC: ಬಂಧಿತ ಕೇಜ್ರಿವಾಲ್...
28-03-24 04:36 pm
80 ವರ್ಷದ ಅಜ್ಜಿಗೆ ಮೊಮ್ಮಗ, ಪತ್ನಿಯಿಂದ ಮನಬಂದಂತೆ ಹ...
28-03-24 01:15 pm
Tamil Nadu MP Ganeshamurthi dies: ಟಿಕೆಟ್ ಕೈತಪ...
28-03-24 11:48 am
AAPs Lone Lok Sabha, MP Sushil Rinku: ಆಮ್ ಆದ್...
27-03-24 10:24 pm
29-03-24 01:49 pm
Mangalore Correspondent
ಏರ್ಪೋರ್ಟ್, ಎನ್.ಎಂ.ಪಿ.ಟಿ., ಕೆ.ಪಿ.ಟಿ.ಸಿ.ಎಲ್ ಕಾಂ...
28-03-24 10:56 pm
ಸರಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಕ...
28-03-24 07:12 pm
Manjunath Bhandary, KPCC working president: ಕ...
28-03-24 05:20 pm
Fire at seafood factory in Baikampady, Mangal...
28-03-24 04:52 pm
29-03-24 06:17 pm
Mangalore Correspondent
ಕೋವಿಡ್ ಸಮಯದಲ್ಲಿ ಉದ್ಯೋಗ ಕಳಕೊಂಡಿದ್ದ ಟೆಕ್ಕಿ ; ಲ...
29-03-24 05:09 pm
Gangster Politician Mukhtar Ansari; 68ಕ್ಕೂ ಅಧ...
29-03-24 09:32 am
Mangalore Valachil police raid: ವಳಚ್ಚಿಲ್ ; ಮನ...
28-03-24 10:30 pm
Udupi murder Nejar, Praveen Chowgule news: ಉಡ...
28-03-24 02:18 pm