ಅಡಿಕೆ ಗಲಾಟೆ ಕೊಲೆಯಲ್ಲಿ ಅಂತ್ಯ ; ಸೋದರನನ್ನು ಗುಂಡಿಟ್ಟು ಕೊಂದು ವ್ಯಕ್ತಿ ಕೆರೆಗೆ ಹಾರಿ ಆತ್ಮಹತ್ಯೆ ! ಕಿರಗೂರಿನಲ್ಲಿ ಗಯ್ಯಾಳಿ ಕೃತ್ಯ 

15-10-21 09:36 pm       Headline Karnataka News Network   ಕ್ರೈಂ

ವ್ಯಕ್ತಿಯೊಬ್ಬ ಗುಂಡು ಹಾರಿಸಿ ತನ್ನ ಚಿಕ್ಕಮ್ಮನ ಮಗನನ್ನು ಕೊಲೆಗೈದಿದ್ದಲ್ಲದೆ, ಆನಂತರ ತಾನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಮಡಿಕೇರಿ, ಅ.15: ಅಡಿಕೆ ವಿಚಾರದಲ್ಲಿ ಅಣ್ಣ - ತಮ್ಮಂದಿರ ನಡುವೆ ಗಲಾಟೆ ನಡೆದು ಇಬ್ಬರ ಅಂತ್ಯದಲ್ಲಿ ಅವಸಾನ ಆಗಿದೆ. ವ್ಯಕ್ತಿಯೊಬ್ಬ ಗುಂಡು ಹಾರಿಸಿ ತನ್ನ ಚಿಕ್ಕಮ್ಮನ ಮಗನನ್ನು ಕೊಲೆಗೈದಿದ್ದಲ್ಲದೆ, ಆನಂತರ ತಾನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕಿರಗೂರಿನಲ್ಲಿ ಘಟನೆ ನಡೆದಿದೆ. ಕಿರಗೂರು ಗ್ರಾಮದ ಮಧು (42) ಗುಂಡೇಟು ತಗಲಿ ಮೃತಪಟ್ಟಿದ್ದು ಸಾಗರ್ ಪತ್ನಿ ಯಶೋಧ(50) ಸ್ಥಿತಿ ಗಂಭೀರವಾಗಿದೆ.‌

ಸಾಗರ್ ಸೋಮಯ್ಯ(55)  ದುಷ್ಕೃತ್ಯ ಎಸಗಿದ ಆರೋಪಿಯಾಗಿದ್ದು ಬಳಿಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಲೆಯಾದ ಮಧು, ಆರೋಪಿ ಸಾಗರ್‌ ಎಂಬಾತನ ಚಿಕ್ಕಮ್ಮನ ಮಗನಾಗಿದ್ದು ಇವರ ನಡುವೆ ಅಡಿಕೆ ಬೆಳೆಯ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಮಧುಗೆ ಸಾಗರ್ ನಾಡ ಕೋವಿಯಿಂದ ಗುಂಡು ಹಾರಿಸಿದ್ದು ಮಧು ಸ್ಥಳದಲ್ಲೇ ಸಾವು ಕಂಡಿದ್ದಾನೆ. 

ಗಲಾಟೆ ತಡೆಯಲು ಹೋದ ಸಾಗರ್ ಪತ್ನಿಗೂ ಗುಂಡೇಟು ಬಿದ್ದಿದ್ದು ಗಂಭೀರ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಗೋಣಿಕೊಪ್ಪಲು ವೃತ್ತ ನಿರೀಕ್ಷಕ ಜಯರಾಂ ಹಾಗು ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. 

Arecanut Fight lands in Murder of Cousin Brother in Madikeri, Jumps into the lake after the shootout. The deceased has been identified as Madhu (42). Sagar Sommayya (55) jumped into the river after Shooting his cousin brother by Gun. The Incident took place in Kiraguru.