ಹೆಣ್ಮಗು ಎಂಬ ಕಾರಣಕ್ಕೆ ಬಕೆಟ್ನಲ್ಲಿ ಮುಳುಗಿಸಿ ಕೊಂದ ತಂದೆ !

11-09-20 02:04 pm       Chikmaglur Correspondent   ಕ್ರೈಂ

ಹೆಣ್ಣು ಎಂಬ ಕಾರಣಕ್ಕೆ ತಂದೆಯೇ ಮಗುವನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಂದ ಹಾಕಿದ ಪೈಶಾಚಿಕ ಕೃತ್ಯ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು ಸಪ್ಟೆಂಬರ್ 11: ಪಾಪಿ ತಂದೆ ಒಬ್ಬ ಮಗುವನ್ನು ನೀರಿನ ಬಕೆಟ್ ನಲ್ಲಿ ಮುಳುಗಿಸಿ ಕೊಂದ ಧಾರುಣ ಘಟನೆ ಚಿಕ್ಕಮಂಗಳೂರಿನಲ್ಲಿ ನಡೆದಿದೆ. ಕಡೂರಿನಲ್ಲಿ ಈ ಘಟನೆ ನಡೆದಿದ್ದು, 8 ತಿಂಗಳ ಹೆಣ್ಣು ಮಗುವನ್ನು ಬಕೆಟ್ ನಲ್ಲಿ ಮುಳುಗಿಸಿ ಕೊಲೆ ಮಾಡಲಾಗಿದೆ.

ಕಡೂರಿನ ದೊಡ್ಡಪೇಟೆ ಬಡಾವಣೆಯ ವಕೀಲ ಉಮಾಶಂಕರ್ ಎಂಬಾತ ಮಗುವನ್ನು ಕೊಂದ ಕಟುಕ ತಂದೆ. ಈ ನೀಚ ಹೆಣ್ಣು ಮಗು ಎಂಬ ಕಾರಣಕ್ಕೆ ಕಂದಮ್ಮನನ್ನು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.

ಗಂಡನೇ ಮಗುವಿನ ಕೊಲೆಗಾರನೆಂದು ಆರೋಪಿಸಿರೋ ಪತ್ನಿ ಕಡೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಡೂರು ಪೊಲೀಸರಿಂದ ಆರೋಪಿ ಉಮಾಶಂಕರ್ ಬಂಧಿಸಿದ್ದಾರೆ.

Join our WhatsApp group for latest news updates