ಬ್ರೇಕಿಂಗ್ ನ್ಯೂಸ್
27-10-21 03:03 pm Mangalore Reporter ಕ್ರೈಂ
ಬಂಟ್ವಾಳ, ಅ.27: ಬಿಜೆಪಿ ಕಾರ್ಯಕರ್ತನ ಮೇಲೆ ಅದೇ ಪಕ್ಷದ ಕಾರ್ಯಕರ್ತರು ತಲವಾರು ದಾಳಿ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬಡಗಬೆಳ್ಳೂರಿನಲ್ಲಿ ನಡೆದಿದೆ. ಬಡಗಬೆಳ್ಳೂರು ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ಪ್ರಕಾಶ್ ಬೆಳ್ಳೂರು ಮೇಲೆ ಆತನ ಮನೆಗೇ ನುಗ್ಗಿ ಹಲ್ಲೆ ನಡೆಸಿ, ತಲವಾರು ದಾಳಿ ನಡೆಸಲಾಗಿದೆ.
ಕಿವಿಯ ಭಾಗಕ್ಕೆ ತಲವಾರು ಏಟು ಬಿದ್ದು ಗಾಯಗೊಂಡಿರುವ ಪ್ರಕಾಶ್, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದೇ ಪರಿಸರದ ನಿತಿನ್, ನಿಶಾಂತ್ ಮತ್ತಿತರ ಯುವಕರು ಸೇರಿ ಹಲ್ಲೆ ನಡೆಸಿದ್ದಾರೆ. ಇವರ ನಡುವೆ, ಹಣದ ವಿಚಾರದಲ್ಲಿ ಗಲಾಟೆ ನಡೆದಿತ್ತು. ವರ್ಷದ ಹಿಂದೆ ನಿತಿನ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಕೊಲೆಯತ್ನ ಕೇಸು ದಾಖಲಾಗಿತ್ತು. ಪ್ರಕರಣವನ್ನು ರಾಜಿಯಲ್ಲಿ ಮುಗಿಸಲೆಂದು ಸ್ಥಳೀಯ ಪುಢಾರಿ ಆಗಿರುವ ಪ್ರಕಾಶ್ ಬೆಳ್ಳೂರುಗೆ ನಿತಿನ್ 25 ಸಾವಿರ ರೂ. ಹಣವನ್ನು ನೀಡಿದ್ದಾನೆ ಎನ್ನಲಾಗಿದೆ.
ಇದೇ ವಿಚಾರದಲ್ಲಿ ಸ್ಥಳೀಯ ಮಟ್ಟದಲ್ಲಿ ನಡೆಯುತ್ತಿದ್ದ ವಾಗ್ವಾದ, ಫೇಸ್ಬುಕ್ ನಲ್ಲೂ ಮುಂದುವರಿದಿತ್ತು. ಪ್ರಕಾಶ್ ಬೆಳ್ಳೂರು ತಾನು ಹಣ ಪಡೆದಿಲ್ಲ. ಬೇಕಾದರೆ ಪಣೋಲಿಬೈಲಿಗೆ ಬಂದು ಪ್ರಮಾಣ ಮಾಡುತ್ತೇನೆ. ಹಣ ಕೊಟ್ಟಿದ್ದಾರೆ ಎಂದವರು ಅಲ್ಲಿಗೆ ಬಂದು ಪ್ರಮಾಣ ಮಾಡಲಿ ಎಂದು ಫೇಸ್ಬುಕ್ ನಲ್ಲಿ ಸವಾಲು ಹಾಕಿದ್ದಾರೆ. ಅದೇ ಪೋಸ್ಟ್ ನಲ್ಲಿ ನಿಶಾಂತ್ ಮತ್ತು ಆತನ ಗೆಳೆಯರು ಹೀನಾಯವಾಗಿ ನಿಂದಿಸಿ ಪ್ರಕಾಶ್ ಬಗ್ಗೆ ಬರೆದಿದ್ದರು. ಇದೇ ವಿಚಾರ ಮಾತಿಗೆ ಮಾತು ಬೆಳೆದಿದ್ದು, ನಿತಿನ್, ನಿಶಾಂತ್ ಮತ್ತಿತರರು ಮಂಗಳವಾರ ಸಂಜೆ ಪ್ರಕಾಶ್ ಬೆಳ್ಳೂರು ಮನೆಗೆ ನುಗ್ಗಿ ತಲವಾರು ದಾಳಿ ನಡೆಸಿದ್ದಾರೆ.
ಆದರೆ, ಈ ವೇಳೆ ಪ್ರಕಾಶ್ ತಲವಾರು ಕಡಿತದಿಂದ ತಪ್ಪಿಸಿಕೊಂಡಿದ್ದು ಕಿವಿಗೆ ಮಾತ್ರ ಗಾಯವಾಗಿತ್ತು. ಆನಂತರ, ನೆಲಕ್ಕೆ ಹಾಕಿ ತುಳಿದು ಹಲ್ಲೆ ನಡೆಸಿದ್ದಾರೆ. ಬಳಿಕ ಪ್ರಕಾಶ್ ಸಂಬಂಧಿಕರು ಬಂದು ಸಮಾಧಾನ ಹೇಳಿ, ಕಡಿಯಲು ಬಂದವರನ್ನು ಕಳಿಸಿಕೊಟ್ಟಿದ್ದರು. ಘಟನೆ ಸಂಬಂಧಿಸಿ ಗ್ರಾಮಾಂತರ ಠಾಣೆಯಲ್ಲಿ ಕೊಲೆಯತ್ನ, ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ.
Mangalore Bjp member attacked by BJP members in Bantwal over financial dispute. Prakash is said to be admitted in the hospital and is said to be out of danger.
09-01-26 04:42 pm
Bangalore Correspondent
ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಿಐಡಿ ತನಿಖೆಗೆ...
09-01-26 02:05 pm
ಕನಕಪುರ ತಾಲೂಕಿನಲ್ಲಿ 63 ಅಕ್ರಮ ಲೇಔಟ್, 28 ಪಿಜಿಗಳ...
08-01-26 11:06 pm
ಪೊಲೀಸರ ಸಭೆ ನಡೆಸಲು ಡಿ.ಕೆ.ಶಿ. ಯಾರು? ರಾಜ್ಯದಲ್ಲಿ...
08-01-26 10:45 pm
ಸಿಎಂ ಕುರ್ಚಿ ಕದನಕ್ಕೆ ದಿಢೀರ್ ಬ್ರೇಕ್ ; ಡಿಕೆಶಿಗೆ...
08-01-26 09:36 pm
09-01-26 11:00 pm
HK News Desk
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
ಮಹಾರಾಷ್ಟ್ರ ನಗರಸಭೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ;...
08-01-26 03:12 pm
09-01-26 09:18 pm
Mangalore Correspondent
ಉದ್ಯೋಗ ಖಾತ್ರಿ ಯೋಜನೆಯನ್ನೇ ಮೋದಿ ಕೊಂದಾಕಿದ್ದಾರೆ,...
09-01-26 05:47 pm
ಪಿಎಂ ಕೇರ್ ಫಂಡ್ ಹೆಸರಲ್ಲಿ ಖಾಸಗಿ ಟ್ರಸ್ಟಿಗೆ ಸಾವಿರ...
09-01-26 03:21 pm
ಮಾನವ –ಪ್ರಾಣಿ ಸಂಘರ್ಷ ತಡೆಗೆ ಕಮಾಂಡ್ ಸೆಂಟರ್, 1926...
09-01-26 01:15 pm
ಜ.11 ರಂದು ಕೊಡಿಯಾಲದಲ್ಲಿ ಸುಧೀಂದ್ರ ತೀರ್ಥ ಜನ್ಮಶತಮ...
08-01-26 08:48 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm