ಬ್ರೇಕಿಂಗ್ ನ್ಯೂಸ್
01-11-21 07:29 pm Headline Karnataka News Desk ಕ್ರೈಂ
ಕೊಚ್ಚಿ, ನ.1: ಗಲ್ಫ್ ರಾಷ್ಟ್ರಗಳಿಂದ ಭಾನುವಾರ ರಾತ್ರಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಏಳು ಮಂದಿ ಖದೀಮರು ಅಕ್ರಮವಾಗಿ 5 ಕೇಜಿ ಚಿನ್ನವನ್ನು ತರುತ್ತಿದ್ದುದನ್ನು ಕಸ್ಟಮ್ ಅಧಿಕಾರಿಗಳು ಪತ್ತೆ ಮಾಡಿದ್ದು, ಏಳು ಮಂದಿಯನ್ನೂ ವಶಕ್ಕೆ ಪಡೆದಿದ್ದಾರೆ.
ಬೆಹ್ರೈನ್, ಶಾರ್ಜಾ ಮತ್ತು ದುಬೈನಿಂದ ಏಳು ಮಂದಿ ನಿನ್ನೆ ಮಧ್ಯರಾತ್ರಿ ಕೊಚ್ಚಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ, ಕಸ್ಟಮ್ ಅಧಿಕಾರಿಗಳ ತಪಾಸಣೆಯಲ್ಲಿ ಅವರ ದೇಹದಲ್ಲಿ ಚಿನ್ನ ಇರುವುದು ಪತ್ತೆಯಾಗಿದ್ದು ತಪಾಸಣೆ ಕೈಗೊಂಡಿದ್ದಾರೆ. ಪ್ರಯಾಣಿಕರು ತಮ್ಮ ಗುದ ದ್ವಾರದಲ್ಲಿ ಚಿನ್ನವನ್ನು ಪೇಸ್ಟ್ ಮಾಡಿ, ಉಂಡೆಗಳಾಗಿಸಿ ತೂರಿಸಿಕೊಂಡಿದ್ದರು. ಅದನ್ನು ಅಧಿಕಾರಿಗಳು ಪತ್ತೆ ಮಾಡಿದ್ದು, 5.64 ಕೇಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಪತ್ತನಂತಿಟ್ಟ, ಕೋಜಿಕೋಡ್, ಮಲಪ್ಪುರಂ, ತಮಿಳುನಾಡು ಮತ್ತು ಕರ್ನಾಟಕದ ನಿವಾಸಿಗಳಾಗಿದ್ದಾರೆ.
ಔಷಧಿ ಮಾತ್ರೆಗಳ ರೂಪದಲ್ಲಿ ಉಂಡೆಗಳನ್ನಾಗಿಸಿ, ಚಿನ್ನವನ್ನು ಬಚ್ಚಿಟ್ಟುಕೊಂಡಿದ್ದರು. ಬೆಹ್ರೈನ್ ನಿಂದ ಬರುತ್ತಿದ್ದ ಅನಾಸ್ ಜಿಹಾದ್ ಎಂಬ ಪ್ರಯಾಣಿಕ ತನ್ನ ಗುದ ದ್ವಾರದಲ್ಲಿ 1.032 ಕೇಜಿ ಚಿನ್ನವನ್ನು ಹೊಂದಿದ್ದರೆ, ನೌಫಾಲ್ ಎಂಬಾತ 778 ಗ್ರಾಮ್ ಚಿನ್ನವನ್ನು ಹೊಂದಿದ್ದ. ಶಾರ್ಜಾದಿಂದ ಬಂದಿದ್ದ ಮೊಹಮ್ಮದ್ ಇರ್ಫಾನ್ ಆಲಿ ಬಳಿ 501 ಗ್ರಾಮ್ ಚಿನ್ನ ವಶಕ್ಕೆ ಪಡೆದರೆ, ಅಶರ್ ಮೊಹಮ್ಮದ್ ಅಮರ್ ಬಳಿ 543 ಗ್ರಾಮ್ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ.
ಇದೇ ರೀತಿ ದುಬೈನಿಂದ ಬರುತ್ತಿದ್ದ ಸಿಬಿ ಸಾಜಿ, ಮುಸ್ಬಾ ಮಹಮ್ಮದ್ ಇಶಾಕ್ ಮತ್ತು ಅಂಜುಂ ಸೂಫಿಯಾನ್ ಕ್ರಮವಾಗಿ 1.071 ಕೇಜಿ, 597 ಗ್ರಾಮ್, 542 ಗ್ರಾಮ್ ಚಿನ್ನವನ್ನು ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಈ ಏಳು ಮಂದಿಯನ್ನೂ ಕಸ್ಟಮ್ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
The air intelligence unit and customs sleuths at Cochin International Airport seized 5.064 kg of gold from seven passengers, including a woman, on Sunday. According to a report published in The New Indian Express (TNIE), the passengers had arrived at Kochi airport from Bahrain, Sharjah and Dubai flights in the early hours of Sunday. These passengers originally belonged to Pathanamthitta, Malappuram, Kozhikode, Tamil Nadu and Karnataka.
18-12-25 12:37 pm
HK News Desk
ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು ; ಸದನಕ್ಕ...
17-12-25 10:30 pm
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
18-12-25 10:52 am
Mangalore Correspondent
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm