ಬ್ರೇಕಿಂಗ್ ನ್ಯೂಸ್
06-11-21 12:46 pm HK Desk ಕ್ರೈಂ
ಪುಣೆ, ನ.6: ಅಪರಾಧ ಪ್ರಕರಣಗಳಲ್ಲಿ ಸಣ್ಣ ಕೂದಲು, ರಕ್ತದ ಕಲೆ ಸಿಕ್ಕರೂ, ಅದು ಹಂತಕನ ಸುಳಿವು ನೀಡುತ್ತದೆ ಎನ್ನುತ್ತಾರೆ. ಅದಕ್ಕಾಗಿ ಯಾವುದೇ ಪ್ರಕರಣ ದಾಖಲಾದ ಕೂಡಲೇ ಪೊಲೀಸರು ಮೊದಲಿಗೆ ಏನಾದ್ರೂ ಕುರುಹು ಸಿಗುತ್ತಾ ಎಂದು ಹುಡುಕಾಟ ನಡೆಸುತ್ತಾರೆ. ಇಲ್ಲೊಂದು ಪ್ರಕರಣದಲ್ಲಿ ಬೇರಾವುದೇ ಸಾಕ್ಷ್ಯ ಇಲ್ಲದಿದ್ದರೂ, ಕೊಲೆಯಾದ ಯುವಕನ ಒಂದು ಚಪ್ಪಲಿಯೇ ಹಂತಕರ ಬಗ್ಗೆ ಸುಳಿವು ನೀಡಿತ್ತು.
ಅಕ್ಟೋಬರ್ 22ರಂದು 27 ವರ್ಷದ ಯುವಕ ನಾಪತ್ತೆಯಾದ ಬಗ್ಗೆ ಚಿಂಚ್ವಾಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯುವಕನ ತಾಯಿಯೇ ಕೊಲೆ ಬಗ್ಗೆ ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ ಪೊಲೀಸರಿಗೆ ಯುವಕನ ಮೊಬೈಲ್ ಕರೆ ಆಧರಿಸಿ ಕೆಲವು ಸುಳಿವುಗಳು ಲಭಿಸಿದ್ದವು. ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಬಗ್ಗೆ ಶಂಕೆಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆದರೆ, ಮಹಿಳೆಯ ಮನೆ ಬಳಿಗೆ ಹೋದವರಿಗೆ ಕೊಲೆಯಾದ ಯುವಕನ ಚಪ್ಪಲಿ ಸಿಕ್ಕಿತ್ತು.
ಪೊಲೀಸರು ಚಪ್ಪಲಿ ಆಧರಿಸಿ ತನಿಖೆ ಆರಂಭಿಸಿದ್ದರು. ಅದರಂತೆ, ಅ.21ರಂದು ಮಹಿಳೆಗೆ ಯುವಕ ಕರೆ ಮಾಡಿದ್ದು ಕಂಡುಬಂದಿದೆ. ಮಹಿಳೆಯನ್ನು ವಿಚಾರಿಸಿದಾಗ, ಅದೇ ದಿನ ರಾತ್ರಿ ಯುವಕ ಮಹಿಳೆಯ ಮನೆ ಬಳಿಗೆ ಬಂದಿದ್ದ ಅನ್ನೋದು ತಿಳಿದುಬಂದಿದೆ. ಅಷ್ಟೇ ಅಲ್ಲ, ತನ್ನ ಪತ್ನಿಯನ್ನು ಭೇಟಿಯಾಗಲು ಬಂದಿದ್ದ ಯುವಕನನ್ನು ಆಕೆಯ ಪತಿ ತನ್ನಿಬ್ಬರು ಗೆಳೆಯರ ಜೊತೆ ಸೇರಿ ಚೂರಿಯಿಂದ ಇರಿದು ಕೊಲೆ ಮಾಡಿದ್ದರು.
ಆನಂತರ, ಮಹಿಳೆಯ ಪತಿಗೆ ಸೇರಿದ ಕಳ್ಳಭಟ್ಟಿ ತಯಾರಿಕಾ ಕೇಂದ್ರಕ್ಕೆ ಶವ ಒಯ್ದು ಅಲ್ಲಿ ದೇಹವನ್ನು ತುಂಡು ಮಾಡಿ ಸುಟ್ಟು ಹಾಕಿದ್ದಾರೆ. ಸುಟ್ಟು ಹೋದ ದೇಹದ ಭಾಗಗಳನ್ನು ವಿವಿಧ ಕಡೆ ಎಸೆದು ತಮ್ಮ ಪಾಡಿಗೆ ಕೆಲಸದಲ್ಲಿ ತೊಡಗಿದ್ದರು. ಆದರೆ, ಇತ್ತ ಪೊಲೀಸ್ ದೂರು ದಾಖಲಾಗಿದ್ದು ಗೊತ್ತಾಗುತ್ತಲೇ ಆರೋಪಿಗಳು ತಲೆಮರೆಸಿಕೊಂಡಿದ್ದರು. ಹಂತಕರು ಯಾರೆಂದು ಗೊತ್ತಾಗುತ್ತಲೇ ಬೆನ್ನುಬಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಇಬ್ಬರನ್ನು ಮಧ್ಯಪ್ರದೇಶದಲ್ಲಿ ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಯನ್ನು ಪುಣೆಯಲ್ಲಿ ಬಂಧಿಸಿದ್ದಾರೆ.
A 27-year-old man, who had gone missing in mid-October, was allegedly murdered by the husband of the woman he was having an affair with, said Pune police. Three people, including the main accused, were arrested in connection with the matter.
28-06-25 12:14 pm
HK News Desk
ಹುಲಿ ದಾಳಿ ಮಾಡಿದ್ದ ಹಸುವಿಗೆ ವಿಷ ಹಾಕಿದ್ದ ಸ್ಥಳೀಯರ...
27-06-25 10:42 pm
Cm Siddaramaiah, Mangalore, Hate speech, Poli...
27-06-25 09:56 pm
ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ, ಜಾತ್ಯತೀತ' ಪದ ತ...
27-06-25 05:38 pm
Five Tigers Die Male Mahadeshwara Forest: ಮಲೆ...
27-06-25 02:46 pm
27-06-25 01:44 pm
HK News Desk
ಆಪರೇಶನ್ ಸಿಂಧೂರ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ಹಂಚ...
26-06-25 10:22 pm
ರೈಲು ಹಳಿ ಮೇಲೆ ಕಾರು ಓಡಿಸಿ ಹುಚ್ಚಾಟ ; ಆಂಟಿಯ ರಂಪಾ...
26-06-25 07:40 pm
PFI Hit List 977, Kerala, NIA: ಕೇರಳದಲ್ಲಿ ಹಿಂದ...
25-06-25 10:05 pm
Vijayan Chennai, Donation, Property: ದಾಂಪತ್ಯ...
25-06-25 07:40 pm
27-06-25 10:17 pm
Mangalore Correspondent
ಧರ್ಮಸ್ಥಳ ಗ್ರಾಮದಲ್ಲಿ ಅಸಹಜ ಸಾವಿನ ವೈರಲ್ ಪತ್ರ ; ಮ...
27-06-25 04:56 pm
Mangalore Jail Fight: ಮಂಗಳೂರು ಜೈಲಿನಲ್ಲಿ ಮತ್ತೆ...
26-06-25 10:08 pm
St. Anthony’s Church Puttur, News, Cemetery:...
26-06-25 12:02 pm
Canara Bank, Suicide, Mangalore: ತಾನು ಕೆಲಸ ಮಾ...
26-06-25 11:52 am
27-06-25 10:59 pm
HK News Desk
Davanagere News, Crime, Aunty: 25 ವರ್ಷದ ಅಳಿಯನ...
27-06-25 07:50 pm
ಬೇಲಿಯೇ ಎದ್ದು ಹೊಲ ಮೇಯ್ದ ಕತೆ ; ಬ್ಯಾಂಕ್ ಮ್ಯಾನೇಜರ...
27-06-25 07:27 pm
Mangalore Police, Stock Market Fraud, Arrest:...
26-06-25 10:49 pm
Varkady, Manjeshwar Crime, Son Kills Mother:...
26-06-25 05:32 pm