ಬ್ರೇಕಿಂಗ್ ನ್ಯೂಸ್
09-11-21 11:08 pm Mangaluru Correspondent ಕ್ರೈಂ
ಉಳ್ಳಾಲ, ನ.9: ಉಳ್ಳಾಲ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಹೆಚ್ಚುತ್ತಿದ್ದು ನಿನ್ನೆ ರಾತ್ರಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಝುಪಿಟರ್ ಸ್ಕೂಟರನ್ನ ಯಾರೋ ಕಳವುಗೈದ ಪ್ರಕರಣ ತೊಕ್ಕೊಟ್ಟಿನಲ್ಲಿ ನಡೆದಿದೆ.
ತೊಕ್ಕೊಟ್ಟು ಓವರ್ ಬ್ರಿಡ್ಜ್ ನ ರಕ್ಷಾ ಕ್ಲಿನಿಕ್ ಬಳಿಯ ಪ್ರಿಯಾ ಫ್ಯಾನ್ಸಿ ಅಂಗಡಿ ಹೊಂದಿರುವ ಚೇತನ್ ಅವರ ಮನೆಯಂಗಳದಿಂದ ಸ್ಕೂಟರನ್ನ ಕಳವುಗೈಯಲಾಗಿದೆ. KA 19 ER 0584 ನೋಂದಣಿ ಸಂಖ್ಯೆಯ ಬೂದು (ಗ್ರೇ) ಬಣ್ಣದ ಝುಫಿಟರ್ ಸ್ಕೂಟರನ್ನ ಕಳ್ಳರು ರಾತ್ರೋ ರಾತ್ರಿ ಎಗರಿಸಿದ್ದಾರೆ. ಚೇತನ್ ಅವರ ಮನೆ ಮತ್ತು ವಾಣಿಜ್ಯ ಸಂಕೀರ್ಣ ರಸ್ತೆ ಬದಿಯಲ್ಲೇ ಇದ್ದು, ಅವರದ್ದೇ ವಾಣಿಜ್ಯ ಕಟ್ಟಡದಲ್ಲಿ ಫ್ಯಾನ್ಸಿ ಹೊಂದಿದ್ದಾರೆ. ಚೇತನ್ ನಿನ್ನೆ ರಾತ್ರಿ ಫ್ಯಾನ್ಸಿ ಅಂಗಡಿಯನ್ನು ಬಂದ್ ಮಾಡಿ ಮನೆಯಂಗಳದಲ್ಲಿ ಸ್ಕೂಟರನ್ನ ನಿಲ್ಲಿಸಿದ್ದು ಬೆಳಗ್ಗೆ ಸ್ಕೂಟರ್ ಕಳವಾದ ಬಗ್ಗೆ ತಿಳಿದಿದೆ.
ಮನೆಯ ಮೇಲ್ಬಾಗದಲ್ಲಿರುವ ಸಹಕಾರಿ ಬ್ಯಾಂಕ್ ಶಾಖೆಯ ಸಿಸಿಟಿವಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದು ಕಳ್ಳರ ಬಗ್ಗೆ ಸುಳಿವು ಲಭಿಸಿಲ್ಲ. ಕಳೆದ ಅಕ್ಟೋಬರ್ 28 ರ ರಾತ್ರಿ ಓವರ್ ಬ್ರಿಡ್ಜ್ ನಲ್ಲಿರುವ ಮಾರುತಿ ಸೆಂಟರ್ ವಾಣಿಜ್ಯ ಕಟ್ಟಡದ ಮುಂಭಾಗದಲ್ಲೂ ಬೈಕ್ ಕಳವು ಯತ್ನ ನಡೆದಿತ್ತು. ಮಾರುತಿ ಸೆಂಟರ್ ನ ಮುತ್ತೂಟ್ ಫೈನಾನ್ಸ್ ಸೆಕ್ಯುರಿಟಿ ಗಾರ್ಡ್ ನ ಬೈಕನ್ನೇ ಕಳವಿಗೆ ಯತ್ನಿಸಿದ್ದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕು ಅಂಗಡಿಪದವು ಶಾಂತಿನಗರ ನಿವಾಸಿ ನೌಫಾಲ್(23) ಎಂಬಾತನಿಗೆ ಸೆಕ್ಯುರಿಟಿ ಗಾರ್ಡ್ ಸೇರಿ ಸಾರ್ವಜನಿಕರು ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿದ್ದರು.

ಕಳವಾದ ಸ್ಕೂಟರ್ ಉಳ್ಳಾಲದಲ್ಲಿ ಪತ್ತೆ
ಈ ನಡುವೆ, ನಿನ್ನೆ ರಾತ್ರಿ ಕಳವಾಗಿದ್ದ ಸ್ಕೂಟರ್ ಉಳ್ಳಾಲ ಬೈಲಿನ ಯಮಹಾ ಶೋರೂಂ ಬಳಿ ಮಂಗಳವಾರ ಸಂಜೆ ಪತ್ತೆಯಾಗಿದೆ. ಯಾರೋ ಕಳ್ಳರು ಸ್ಕೂಟರನ್ನು ಕದ್ದೊಯ್ಯಲು ವಿಫಲ ಯತ್ನ ನಡೆಸಿದ್ದಾರೆ. ಆದರೆ, ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯಿಂದ ಸ್ಕೂಟರನ್ನು ದೂಡುತ್ತಾ ಹೋಗಿ ಉಳ್ಳಾಲದಲ್ಲಿ ಇರಿಸಿ ಹೋಗಿದ್ದು ಸಂಶಯಕ್ಕೆ ಕಾರಣವಾಗಿದೆ.
Mangalore Parked Bike Stolen by theives outside the house, found in Ulall
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 09:24 pm
HK News Staffer
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm
ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂ...
01-05-26 11:48 am