ಬ್ರೇಕಿಂಗ್ ನ್ಯೂಸ್
11-11-21 01:19 pm HK News Desk ಕ್ರೈಂ
ಬಳ್ಳಾರಿ, ನ.11: ಇಲ್ಲಿನ ಸಬ್ ರಿಜಿಸ್ಟ್ರಾರ್ ಒಬ್ಬ ತನ್ನ ವೇಷ ಮರೆಸಿಕೊಂಡು ಎರಡು ಮದುವೆಯಾಗಿ ವಂಚಿಸಿದ್ದು ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದಾನೆ.
ಬಳ್ಳಾರಿಯಲ್ಲಿ ಸಬ್ ರಿಜಿಸ್ಟ್ರಾರ್ ಆಗಿರುವ ಉಮೇಶ್ ಎರಡು ಮದುವೆಯಾಗಿ ಮೋಸದಾಟ ನಡೆಸಿದ್ದಾನೆ. ಮೊದಲ ಮದುವೆಯನ್ನು ಮುಚ್ಚಿಟ್ಟು ಬೆಂಗಳೂರಿನ ನಜ್ಮೀರ್ ಖಾನ್ ಎಂಬ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ. ಇದೀಗ ಹಳೆ ವಿಚಾರ ತಿಳಿದ ನಜ್ಮೀರ್ ಪೊಲೀಸ್ ದೂರು ನೀಡಿದ್ದಾಳೆ.
ದೆಹಲಿ ಮೂಲದ ನಜ್ಮೀನ್ ಬೆಂಗಳೂರಲ್ಲಿ ಉಮೇಶನಿಗೆ ಪರಿಚಯವಾಗಿದ್ದಳು. ನಜ್ಮೀನ್ ಗಾಗಿ ಉಮೇಶ್, ತನ್ನ ಹೆಸರನ್ನು ರೆಹಾನ್ ಅಹಮ್ಮದ್ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಸದ್ಯ ಉಮೇಶ್ ವಿರುದ್ಧ ನಜ್ಮೀನ್ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದು, ಬಳ್ಳಾರಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಅವರು ಈಗ ಎಲ್ಲಿದ್ದಾರೆ ಅಂತಾ ಗೊತ್ತಿಲ್ಲ. ನಿನ್ನೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಹೋಗಿ ನೋಡಿದ್ರೂ ಅವರು ಸಿಗಲಿಲ್ಲ. ಸದ್ಯ ನಾನು ಬಳ್ಳಾರಿ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದು ನಜ್ಮೀನ್ ಹೇಳಿದ್ದಾರೆ.
ಉಮೇಶನ ಮೊಬೈಲಲ್ಲಿದ್ದ ಮೊದಲ ಪತ್ನಿ ಹಾಗೂ ಅವಳ ಮಕ್ಕಳ ಫೋಟೋಗಳನ್ನು ನೋಡಿದಾಗ ನಜ್ಮೀನ್ ಗೆ ಅನುಮಾನ ಬಂದಿದ್ದು, ಬಳ್ಳಾರಿಗೆ ಬಂದು ವಿಚಾರಿಸಿದಾಗ ಉಮೇಶನ ರಂಗಿನಾಟ ಗೊತ್ತಾಗಿದೆ. ಇನ್ನು ಉಮೇಶ್ ಕೂಡ ನಜ್ಮೀನ್ ವಿರುದ್ಧ ತನಗೆ ಬ್ಲ್ಯಾಕ್ಮೇಲ್ ಮಾಡ್ತಿರೋದಾಗಿ ಆರೋಪಿಸಿ ದೂರು ನೀಡಿದ್ದಾರೆ.
ಉಮೇಶ್ ವಿರುದ್ಧ ನಜ್ಮೀನ್ ದೂರು ದಾಖಲಿಸುತ್ತಿದ್ದಂತೆ ಆತ ಬಳ್ಳಾರಿಯಿಂದ ಎಸ್ಕೇಪ್ ಆಗಿದ್ದಾನೆ. ನಜ್ಮೀನ್ ಉಮೇಶನ ವಿರುದ್ಧ ದೂರು ನೀಡಿದ್ರೆ, ಉಮೇಶ, ನಜ್ಮೀನ್ ವಿರುದ್ಧವೇ ಪ್ರತಿ ದೂರು ನೀಡಿದ್ದಾನೆ. ಪ್ರಕರಣ ಸದ್ಯ ಗೊಂದಲದಲ್ಲದ್ದು, ಪೊಲೀಸರ ತನಿಖೆಯಿಂದಲೇ ಸತ್ಯ ಹೊರಬರಬೇಕಿದೆ.
Bellary Sub Registrar introduces as Muslim and cheats Woman of Marriage, case filed by the Second wife.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
27-07-26 09:48 pm
HK News Staffer
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
27-07-26 11:07 pm
Mangaluru Staffer
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm
ಸಚಿವ ಸ್ಥಾನ ಕೊಡಿಸಲು ಮೂರು ಕೋಟಿ ಬೇಡಿಕೆ ; ಕೇರಳದ ಶ...
27-07-26 09:04 pm
ಬೆಂಗಳೂರು ಗ್ಯಾರೇಜ್ ನಲ್ಲಿ ಅಗ್ನಿ ಅವಘಡ ; ಜಾಗ್ವಾರ...
27-07-26 07:35 pm
ಎಪಿಎಂಸಿ ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳ ಆರೋ...
27-07-26 01:09 pm