ಬ್ರೇಕಿಂಗ್ ನ್ಯೂಸ್
17-11-21 02:13 pm Mangaluru Correspondent ಕ್ರೈಂ
ಮಂಗಳೂರು, ನ.17: ಹ್ಯಾಕರ್ ಶ್ರೀಕಿ ರಾಜ್ಯ ಮತ್ತು ಕೇಂದ್ರ ಸರಕಾರದ ಹಣಕಾಸು ಖಾತೆಗಳನ್ನು ಹ್ಯಾಕ್ ಮಾಡಿ, ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದ್ದರೆ, ಇತ್ತ ಕೇಂದ್ರ ಸರಕಾರದ ಅಧೀನ ಸಂಸ್ಥೆ ಎಂಆರ್ ಪಿಎಲ್ ಕಂಪನಿಯ ಆಡಳಿತ ನಿರ್ದೇಶಕರ ಇ-ಮೈಲ್ ಐಡಿಯನ್ನೇ ದುಷ್ಕರ್ಮಿಯೊಬ್ಬ ಹ್ಯಾಕ್ ಮಾಡಿ, ವಂಚನೆಗೆ ಯತ್ನಿಸಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
ಎಂಆರ್ ಪಿಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್ ಅವರ ಇ-ಮೇಲ್ ಐಡಿಯನ್ನು ನ.13ರಂದು ಹ್ಯಾಕ್ ಮಾಡಿದ್ದು, ಸಂಜೆ ನಾಲ್ಕರಿಂದ 5 ಗಂಟೆಯ ಮಧ್ಯೆ edirector@gmail.com ಎಂಬ ಖಾತೆಯ ಹೆಸರಲ್ಲಿ ಎಂಆರ್ ಪಿಎಲ್ ಕಂಪನಿಯ 350ಕ್ಕೂ ಹೆಚ್ಚು ಸಿಬಂದಿಗಳಿಗೆ ಮೈಲ್ ಸಂದೇಶ ಹೋಗಿತ್ತು. ಅಲ್ಲದೆ, ಎಲ್ಲರಿಗೂ ತಮ್ಮ ವಾಟ್ಸಪ್ ನಂಬರ್ ಗಳನ್ನು ಕಳುಹಿಸುವಂತೆ ಸಂದೇಶದಲ್ಲಿ ಹೇಳಲಾಗಿತ್ತು.

ಆಡಳಿತ ನಿರ್ದೇಶಕರ ಮೈಲ್ ಎಂದು ನಂಬಿದ್ದ ಸಿಬಂದಿ ತಮ್ಮ ವಾಟ್ಸಪ್ ನಂಬರನ್ನು ಅವರಿಗೆ ಮೈಲ್ ಮಾಡಿದ್ದಾರೆ. ಇದೇ ವೇಳೆ, ಒಬ್ಬರು ಸಿಬಂದಿ ನೇರವಾಗಿ ಆಡಳಿತ ನಿರ್ದೇಶಕ ಎಂ. ವೆಂಕಟೇಶ್ ಅವರಲ್ಲಿಯೇ ಈ ಬಗ್ಗೆ ಮಾಹಿತಿ ಕೇಳಿದ್ದಾರೆ. ಕೂಡಲೇ ವೆಂಕಟೇಶ್ ಪ್ರತಿಕ್ರಿಯಿಸಿದ್ದು, ತಾನೇನೂ ಆ ರೀತಿಯ ಮೆಸೇಜ್ ಕಳಿಸಿಲ್ಲ ಎಂದು ತಿಳಿಸಿದ್ದಾರೆ. ಅದರೊಂದಿಗೆ, ಮೈಲ್ ಐಡಿಯನ್ನು ಯಾರೋ ಹ್ಯಾಕ್ ಮಾಡಿರುವುದು ಮತ್ತು ನಕಲಿ ಐಡಿ ಸೃಷ್ಟಿಸಿ ಸಿಬಂದಿಯ ಐಡಿ ಜೊತೆ ವ್ಯವಹರಿಸಿರುವುದು ಗೊತ್ತಾಗಿದೆ. ಅಷ್ಟರಲ್ಲಿಯೇ 141 ಮಂದಿ ಮೈಲ್ ಐಡಿಗೆ ಪ್ರತಿಕ್ರಿಯಿಸಿ, ತಮ್ಮ ಮೊಬೈಲ್ ನಂಬರನ್ನು ಕಳಿಸಿಕೊಟ್ಟಿದ್ದರು.

ನಕಲಿ ಐಡಿಯನ್ನು ಕ್ರಿಯೇಟ್ ಮಾಡಿ, ಇಮೇಲ್ ಮಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆದರೆ, ಎಂಆರ್ ಪಿಎಲ್ ಸಂಸ್ಥೆಯ ಅಷ್ಟೂ ಸಿಬಂದಿಗಳ ಮೈಲ್ ಐಡಿ ತಿಳಿಯಬೇಕಿದ್ದರೆ, ಅವರ ಐಡಿಯನ್ನೇ ಹ್ಯಾಕ್ ಮಾಡಿರುವ ಸಾಧ್ಯತೆಯಿದೆ. ಇದಲ್ಲದೆ, ವಾಟ್ಸಪ್ ನಂಬರಿನಲ್ಲಿಯೂ ವೆಂಕಟೇಶ್ ಅವರದ್ದೇ ಫೋಟೋವನ್ನು ಹಾಕ್ಕೊಂಡಿದ್ದು, ಅದರಲ್ಲಿ ಸಿಬಂದಿ ಜೊತೆ ವ್ಯವಹರಿಸಲು ಆರಂಭಿಸಿದ್ದ.
ಈ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಂಆರ್ ಪಿಎಲ್ ಭದ್ರತಾ ವಿಭಾಗದ ಮ್ಯಾನೇಜರ್ ದೂರು ನೀಡಿದ್ದಾರೆ. ಕೆಲವು ಸಿಬಂದಿಗಳಿಗೆ 9600411596 ನಂಬರಿನಿಂದ ವಾಟ್ಸಪ್ ಸಂದೇಶಗಳು ಬಂದಿದ್ದವು. ವಾಟ್ಸಪ್ ಡಿಪಿಯಲ್ಲಿ ವೆಂಕಟೇಶ್ ಫೋಟೋ ಹಾಕಿದ್ದರಿಂದ ಸಿಬಂದಿ ಸಹಜವಾಗೇ ನಂಬಿದ್ದರು. ಯಾರೋ ಅಪರಿಚಿತ ವ್ಯಕ್ತಿಗಳು, ನಕಲಿ ಇಮೇಲ್ ಐಡಿ ರಚಿಸಿ, ವ್ಯವಸ್ಥಾಪಕ ನಿರ್ದೇಶಕರ ಹೆಸರಲ್ಲಿ ವಂಚನೆ ಮಾಡುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮಂಗಳೂರು ಸೈಬರ್ ಕ್ರೈಮ್ ಪೊಲೀಸರು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದಾರೆ.
Mangalore fraudsters create fake Email ID of MRPL Director, send mail to 361 employees asking phones number out of which 141 employees have shared their Whatsapp number. An FIR has been registered at the Cybercrime Police station in Mangalore.
24-10-25 09:35 pm
Bangalore Correspondent
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
ಧರ್ಮಸ್ಥಳ ಪ್ರಕರಣಕ್ಕೆ ಕ್ಲೈಮ್ಯಾಕ್ಸ್ ; ಇದೇ ತಿಂಗಳಾ...
24-10-25 01:11 pm
ಪ್ರಿಯಾಂಕ ಖರ್ಗೆ ಹೊಸ ಸಂಪುಟದಲ್ಲಿ ಉಪ ಮುಖ್ಯಮಂತ್ರಿ...
23-10-25 03:42 pm
ಪಿಜಿಯಲ್ಲಿ ತಿಗಣೆ ಔಷಧಿ ದುರ್ವಾಸನೆಗೆ ವಿದ್ಯಾರ್ಥಿ ಬ...
23-10-25 12:46 pm
25-10-25 02:28 pm
HK News Desk
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
ರಾಷ್ಟ್ರಪತಿ ಮುರ್ಮು ಶಬರಿಮಲೆಗೆ ; ಹೆಲಿಪ್ಯಾಡ್ ನಲ್ಲ...
22-10-25 10:23 pm
25-10-25 02:36 pm
Mangalore Correspondent
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
ಎಸ್ ಸಿಎಸ್ ಆಸ್ಪತ್ರೆಯ 38ನೇ ವರ್ಷದ ಸಂಭ್ರಮಾಚರಣೆ ;...
23-10-25 10:52 pm
ಸತ್ತು ಬದುಕಿದ ಸುದ್ದಿ ಬಗ್ಗೆ ಯೇನಪೋಯ ಆಸ್ಪತ್ರೆ ಸ್ಪ...
23-10-25 10:46 pm
25-10-25 02:14 pm
Mangaluru Correspondent
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm
Dj Halli Inspector Sunil, Rape: ಠಾಣೆಗೆ ಬಂದಿದ್...
23-10-25 05:20 pm